India’s First Water Metro; ಹೈಟೆಕ್ ಇಂಡಿಯಾ-ಇದು ದೇಶದ ಮೊದಲ ತೇಲುವ ಮೆಟ್ರೋ
ಕೊಚ್ಚಿಯ ವಾಟರ್ ಮೆಟ್ರೋ ಇಂದು ಲೋಕಾರ್ಪಣೆ
Team Udayavani, Apr 25, 2023, 10:16 AM IST
ಕೋಲ್ಕತಾದ ಹೂಗ್ಲಿ ನದಿಯ ಕೆಳಭಾಗದಲ್ಲಿ ನಿರ್ಮಾಣವಾದ ಮೆಟ್ರೋಗೆ “ನದಿಯಡಿ ಸಂಚರಿಸುವ ದೇಶದ ಮೊದಲ ಮೆಟ್ರೋ
ರೈಲು’ ಎಂಬ ಹೆಗ್ಗಳಿಕೆ ಇದೆ. ಈಗ ಕೇರಳದ ಕೊಚ್ಚಿಯಲ್ಲಿ ನೀರಿನ ಮೇಲೆ ಸಾಗುವ ದೇಶದ ಮೊದಲ ಮೆಟ್ರೋ (ವಾಟರ್ ಮೆಟ್ರೋ) ವನ್ನು ಪ್ರಧಾನಿ ಮೋದಿ ಮಂಗಳವಾರ ಲೋಕಾರ್ಪಣೆಗೊಳಿಸಲಿದ್ದಾರೆ. ದೇವರೊಲಿದ ರಾಜ್ಯದ ಪ್ರಧಾನ ಆರ್ಥಿಕ ನಗರ ಕೊಚ್ಚಿಯ ಹತ್ತು ದ್ವೀಪಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ಕೇರಳ ಸರ್ಕಾರದ ಯೋಜನೆ 2ನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರ “ವಾಟರ್ ಮೆಟ್ರೋ ಯೋಜನೆ’ ಜಾರಿಗೊಳಿಸುವ ವಾಗ್ಧಾನ ನೀಡಿತ್ತು. ಜರ್ಮನಿಯ ಕೆಎಫ್ ಡಬ್ಲ್ಯೂ ಬ್ಯಾಂಕ್ನ ಹಣಕಾಸು ನೆರವಿನಿಂದ ಕೇರಳ ಸರ್ಕಾರ ಇದನ್ನು ಕಾರ್ಯಾನುಷ್ಠಾನ ಮಾಡಿದೆ. ಇದಕ್ಕೆ 1,136.83 ಕೋಟಿ ರೂ. ವೆಚ್ಚವಾಗಿದೆ.
ಮೊದಲ ಹಂತದಲ್ಲಿ ಎಲ್ಲಿಗೆ?
ಹೈಕೋರ್ಟ್-ವಿಪಿನ್ ಟರ್ಮಿನಲ್ನಿಂದ ವ್ಯತ್ತಿಲ-ಕಕ್ಕನಾಡ್ ಟರ್ಮಿನಲ್ಗೆ ಸಂಚಾರ ಶುರು ಆಗಲಿದೆ. ಈ ಎರಡು ಸ್ಥಳಗಳಿಗೆ ಕೊಚ್ಚಿ ಮೆಟ್ರೋ ಮತ್ತು ವಾಟರ್ ಮೆಟ್ರೋ ಮೂಲಕ ತೆರಳಲೂ ಅವಕಾಶ ಇದೆ. ನಂತರದ ಹಂತಗಳಲ್ಲಿಹತ್ತೂ ದ್ವೀಪಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಡಿಜಿಟಲ್, ಹವಾನಿಯಂತ್ರಿತ
ವಾಟರ್ ಮೆಟ್ರೋ ಕೋಚ್ಗಳು ಸಂಪೂರ್ಣ ಹವಾನಿಯಂತ್ರಿತವಾಗಿಯೂ, ವಿದ್ಯುತ್ ಚಾಲಿತವಾಗಿಯೂ ಇರಲಿವೆ. ದಿವ್ಯಾಂಗರಿಗೂ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕೊಚ್ಚಿ ವನ್ ಕಾರ್ಡ್ ಮೂಲಕ ಎರಡೂ ರೈಲುಗಳಲ್ಲಿ ಪ್ರಯಾಣಿಕರಿಗೆ ಸಂಚರಿಸಲು ಅವಕಾಶವಿದೆ.
*ಯೋಜನೆ ವೆಚ್ಚ;1,136.83ಕೋಟಿ ರೂ.
*10 ದ್ವೀಪಗಳಿಗೆ ಸಂಪರ್ಕ
*ಮುಂದಿನ ಹಂತಗಳಲಿ 78 ಇಲೆಕ್ಟ್ರಿಕ್ ಹೈಬ್ರಿಡ್ ಬೋಟ್ಗಳು.
*ಸದ್ಯ ಲಭ್ಯವಾಗಿರುವುದು 08 ಇಲೆಕ್ಟ್ರಿಕ್ ಹೈಬ್ರಿಡ್ ಬೋಟ್ಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ