ಐಪಿಎಲ್‌: ಯುವ ವೇಗಿ ವೈಭವ್‌ ಅರೋರಾ; ವೈಭವದ ಆರಂಭ


Team Udayavani, Apr 4, 2022, 10:47 PM IST

ಐಪಿಎಲ್‌: ಯುವ ವೇಗಿ ವೈಭವ್‌ ಅರೋರಾ; ವೈಭವದ ಆರಂಭ

ಮುಂಬಯಿ: ಚೆನ್ನೈ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ಭರ್ಜರಿ ಜಯ ಸಾಧಿಸುವಲ್ಲಿ ಲಿವಿಂಗ್‌ಸ್ಟೋನ್‌ ಅವರಂತೆ ಯುವ ವೇಗಿ ವೈಭವ್‌ ಅರೋರಾ ಪಾತ್ರವೂ ಪ್ರಮುಖವಾಗಿತ್ತು.

ಐಪಿಎಲ್‌ ಪದಾರ್ಪಣ ಪಂದ್ಯ ದಲ್ಲಿಯೇ ವೈಭವ್‌ ಅಮೋಘ ದಾಳಿ ಸಂಘಟಿಸಿ ಚೆನ್ನೈಗೆ ಆರಂಭದಲ್ಲಿಯೇ ಪ್ರಬಲ ಹೊಡೆತ ನೀಡಿದ್ದರು. ಪವರ್‌ ಪ್ಲೇ ಒಳಗಡೆ ಅಪಾಯಕಾರಿ ಆಟಗಾರರಾದ ರಾಬಿನ್‌ ಉತ್ತಪ್ಪ ಮತ್ತು ಮೊಯಿನ್‌ ಅಲಿ ಅವರ ವಿಕೆಟ್‌ ಹಾರಿಸಿ ಚೆನ್ನೈಯ ಬ್ಯಾಟಿಂಗ್‌ ಕ್ರಮಾಂಕದ ಬೆನ್ನೆಲುಬು ಮುರಿಯುವಲ್ಲಿ ವೈಭವ್‌ ಯಶಸ್ವಿಯಾಗಿದ್ದರು. ಅವರು ತಮ್ಮ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್‌ ನೀಡಿ 2 ವಿಕೆಟ್‌ ಹಾರಿಸಿ ಪಂಜಾಬ್‌ ಮೇಲುಗೈ ಸಾಧಿಸಲು ನೆರವಾಗಿದ್ದರು.

ವೈಭವ್‌ ದಾಳಿಗೈದ ಇದೇ ಪಿಚ್‌ನಲ್ಲಿ ಈ ಮೊದಲು ಪಂಜಾಬ್‌ನ ಆಟಗಾರರಾದ ಶಿಖರ್‌ ಧವನ್‌, ಲಿವಿಂಗ್‌ಸ್ಟೋನ್‌ ಮತ್ತು ಹೊಸಬ ಜಿತೇಶ್‌ ಶರ್ಮ ಭರ್ಜರಿ ಆಟದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್‌ 60 ರನ್‌ ಗಳಿಸಿದ್ದರು.

ವೇಗಿ ಸಂದೀಪ್‌ ಶರ್ಮ ಅವರ ಬದಲಿಗೆ ವೈಭವ್‌ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಮೊದಲ ಪಂದ್ಯದಲ್ಲಿಯೇ ಗಮನಾರ್ಹ ನಿರ್ವಹಣೆ ನೀಡುವ ಮೂಲಕ ವೈಭವ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ

ಬದುಕು ವೈಭವವಾಗಿರಲಿಲ್ಲ
ವೈಭವ್‌ ಅವರ ಆರಂಭಿಕ ಬದುಕು ವೈಭವಯುತವಾಗೇನೂ ಇರಲಿಲ್ಲ. ಪಂಜಾಬ್‌ ತಂಡದಲ್ಲಿ ಆವಕಾಶ ಸಿಗದ ಕಾರಣ ಹಿಮಾಚಲಕ್ಕೆ ತೆರಳಿದ್ದರು. ಪಂಜಾಬ್‌ ಅಂಡರ್‌-19 ಶಿಬಿರಕ್ಕೆ 3 ಬಾರಿ ತೆರಳಿದರೂ ಆಯ್ಕೆ ಆಗಿರಲಿಲ್ಲ. ಹೀಗಾಗಿ ಬೇರೇನಾದರೂ ಉದ್ಯೋಗ ಹುಡುಕಲು ತೊಡಗಿದರು. ಆಗ ವೈಭವ್‌ ಕುಟುಂಬದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿತ್ತು. ತಂದೆಯ ಡೈರಿ ಉದ್ಯಮ ನೆಲಕಚ್ಚಿತ್ತು.

ವೈಭವ್‌ ಹಿಮಾಚಲ ತಂಡ ಸೇರಲು ಕಾರಣರಾದವರು ಕೋಚ್‌ ರವಿ ವರ್ಮ. ಆದರೆ ಅಲ್ಲಿ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ 7 ಕ್ಯಾಚ್‌ ಬಿಟ್ಟರು. ಕೋಚ್‌ ಕೆಂಡಾಮಂಡಲವಾದರು. ಇನ್ನು ನನ್ನ ಹತ್ತಿರ ಬರುವುದು ಬೇಡ ಎಂದು ಬೈದು ಕಳಿಸಿದರು. ಈ ರೀತಿ ನಿಂದನೆಗೊಳಗಾದ ವೈಭವ್‌ ಅವರಲ್ಲಿ ಹಠವೊಂದು ಮನೆಮಾಡಿತು. ಕ್ರಿಕೆಟ್‌ನಲ್ಲೇ ಮೇಲೇರಲು ಟೊಂಕ ಕಟ್ಟಿದರು. ಹಿಮಾಚಲ ಅಂಡರ್‌-23 ತಂಡದಲ್ಲಿ ಯಶಸ್ಸು ಸಾಧಿಸಿ ರಣಜಿ ತಂಡಕ್ಕೆ ಕರೆ ಪಡೆದರು. ಸೌರಾಷ್ಟ್ರ ಎದುರಿನ ಮೊದಲ ಪಂದ್ಯದಲ್ಲೇ 9 ವಿಕೆಟ್‌ ಉಡಾಯಿಸಿದರು. ಮೊದಲ ವಿಕೆಟ್‌ ಚೇತೇಶ್ವರ್‌ ಪೂಜಾರ ಅವರದಾಗಿತ್ತು!

2020ರ ಐಪಿಎಲ್‌ ಹರಾಜಿನಲ್ಲಿ ವೈಭವ್‌ ಅನ್‌ಸೋಲ್ಡ್‌ ಆಗಿದ್ದರು. 2021ರಲ್ಲಿ ಕೆಕೆಆರ್‌ 20 ಲಕ್ಷ ರೂ.ಗೆ ಖರೀದಿಸಿತು. ಈ ಬಾರಿ ಪಂಜಾಬ್‌ ಕಿಂಗ್ಸ್‌ 2 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಈಗ ವೈಭವ್‌ ಬೆಲೆ ಏನೆಂಬುದು ಅರಿವಿಗೆ ಬರುತ್ತಿದೆ.

 

ಟಾಪ್ ನ್ಯೂಸ್

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!

vidhana-soudha

ಜೂ.3: ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿದ್ದರು?

sunil kumar

Interview; ಮುಸ್ಲಿಂ ಲೀಗ್‌ನ ‘ಬಿ’ ಟೀಂ ಕಾಂಗ್ರೆಸ್‌: ಸುನಿಲ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

28

T20: ಬಾಂಗ್ಲಾ ವಿರುದ್ಧ 7 ವಿಕೆಟ್‌ ಜಯ: ಭಾರತದ ವನಿತೆಯರ ಸರಣಿ ವಿಕ್ರಮ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.