ಕೇರಳ ಸಿಎಂ ಅಧಿಕೃತ ನಿವಾಸ ದುರಸ್ತಿಗೊಳಿಸುವ ನಿರ್ಧಾರಕ್ಕೆ ಭಾರೀ ಆಕ್ಷೇಪ
Team Udayavani, Jun 9, 2021, 6:55 AM IST
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಅಧಿಕೃತ ನಿವಾಸ, “ಕ್ಲಿಫ್ ಹೌಸ್’ ಅನ್ನು 1 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸುವ ನಿರ್ಧಾರಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಕೊರೊನಾ ಸಂಕಷ್ಟದ ನಡುವೆ ರಾಜ್ಯ ಸರಕಾರ ವಿತ್ತೀಯ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಯೋಜನೆ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವಿಸಿದ ಶಾಸಕ ಪಿ.ಟಿ.ಥಾಮಸ್ “ಅನಗತ್ಯ ವೆಚ್ಚ ನಿಯಂತ್ರಿಸಬೇಕೆಂದು ಈಗಾಗಲೇ ಸೂಚಿಸಿರುವ ಸರಕಾರ ಸಿಎಂ ಅಧಿಕೃತ ನಿವಾಸ ದುರಸ್ತಿ ವೆಚ್ಚವನ್ನು ಹೇಗೆ ಸಮರ್ಥಿಸುತ್ತದೆ’ ಎಂದು ಪ್ರಶ್ನಿಸಿದ್ದಾರೆ. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಆರೋಪ ತಿರಸ್ಕರಿಸಿದರು.