
ಕೋಟ: ಪಿಡಿಒ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ: ದೂರು
Team Udayavani, Feb 8, 2023, 6:32 AM IST

ಕೋಟ: ಗ್ರಾ.ಪಂ. ಅಧೀನದ ಅಂಗಡಿ ಕೋಣೆಯಲ್ಲಿ ಏಲಂ ಆಗಿರುವ ಚರ ಸೊತ್ತುಗಳನ್ನು ಬಿಡ್ಡುದಾರರಿಗೆ ಹಸ್ತಾಂತರಿಸಲು ಅಡ್ಡಿಪಡಿಸಿ ಪಿಡಿಒಗೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೆದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಫೆ. 6ರಂದು ಸಂಭವಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆದೂರು ಗ್ರಾ.ಪಂ. ಪಿಡಿಒ ಪ್ರಸಾದ್ ಗ್ರಾ.ಪಂ. ಅಂಗಡಿ ಕೋಣೆಯಲ್ಲಿನ ಚರ ಸ್ವತ್ತುಗಳನ್ನು ಫೆ. 4ರಂದು ಬಹಿರಂಗ ಏಲಂ ಮಾಡಿದ್ದು, ಬೇಳೂರು ಸೀತಾರಾಮ ಶೆಟ್ಟಿ ಎನ್ನುವರರು ಏಲಂನಲ್ಲಿ ಕೆಲವು ಚರ ಸೊತ್ತುಗಳನ್ನು ಬಿಡ್ ಮೂಲಕ 51 ಸಾವಿರ ರೂ. ಗೆ ಪಡೆದಿದ್ದರು. ಫೆ. 6ರಂದು ಬೆಳಗ್ಗೆ ಪ್ರಸಾದ ಅವರು ಏಲಂ ಆದ ಚರ ಸೊತ್ತುಗಳನ್ನು ಲಿಸ್ಟ್ ಮಾಡಿ, ಪಂಚಾಯತ್ ಸಿಬಂದಿ ಮಾಧವ, ಸೀತಾರಾಮ ಮತ್ತು ಸದಸ್ಯರೊಂದಿಗೆ ಸೇರಿ ಹಸ್ತಾಂತರಿಸುವಾಗ ಬಿಡ್ಡುದಾರ ಬೇಳೂರು ಸೀತಾರಾಮ ಶೆಟ್ಟಿಯವರು ಏಕಾಎಕಿ ಅಂಗಡಿಯೊಳಗೆ ನುಗ್ಗಿ ಸೊತ್ತುಗಳನ್ನು ಲಿಸ್ಟ್ ಮಾಡುವ ಅಗತ್ಯವಿಲ್ಲ. ಇಲ್ಲಿರುವ ಎಲ್ಲ ವಸ್ತುಗಳು ನನಗೇ ಸೇರಿದ್ದು ಎಂದು ಪ್ರಸಾದರಿಗೆ ಹಲ್ಲೆ ನಡೆಸಿ, ದಾಂಧಲೆ ಮಾಡಿ, ಕೆಲವು ಚರ ಸೊತ್ತುಗಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

odisha ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

Mangalore ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್ ತುಳಿಯೋಣ