

Team Udayavani, Mar 18, 2023, 2:21 PM IST
ಪಣಜಿ: ಜೋಧ್ಪುರದಲ್ಲಿರುವ ಜೆಸರಾಂ ಅವರ ಕಚೇರಿಗೆ ನುಗ್ಗಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.
ಪಣಜಿ ಪೋಲಿಸ್ ಬಂಧಿಸಿದ ಈ ಅಪರಾಧಿಯನ್ನು ಸರ್ದಾರ್ ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೋಧಪುರಕ್ಕೆ ತೆರಳಿದ್ದಾರೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಪವನ್ ಸೋಲಂಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎನ್ನಲಾಗಿದೆ.
ಈ ಗ್ಯಾಂಗ್ ನ ನಾಯಕನ ಸೂಚನೆ ಮೇರೆಗೆ ಜೋಡುಪಾಲದಲ್ಲಿ ಸುಲಿಗೆ, ಲೂಟಿ, ಕಳ್ಳತನ ಮುಂದುವರಿದಿದೆ. ಮಾರ್ಚ್ 4 ರಂದು ಗ್ಯಾಂಗ್ನ ಕೆಲವು ಸದಸ್ಯರು ಮುಖವಾಡ ಧರಿಸಿ ಜೆಸರಾಂ ಕಚೇರಿಗೆ ಪ್ರವೇಶಿಸಿದ್ದರು. ಆತನನ್ನು ಥಳಿಸಿ, ಕೈಕಾಲು ಕಟ್ಟಿ ಕಛೇರಿಯನ್ನು ದೋಚಿದ್ದರು. ಸರ್ದಾರ್ ಪುರ ಪೊಲೀಸರು ಈ ಪ್ರಕರಣದಲ್ಲಿ ಗ್ಯಾಂಗ್ ಯಾರನ್ನೂ ಬಂಧಿಸಲಿಲ್ಲ, ಆದರೆ ಪವನ್ ಓಡಿಬಂದು ಗೋವಾದಲ್ಲಿ ಆಶ್ರಯ ಪಡೆದಿದ್ದ.
ಈತನಿಗಾಗಿ ಹುಡುಕಾಟ ನಡೆಸಿದಾಗ ಸರ್ದಾರ್ ಪುರ ಪೋಲಿಸರಿಗೆ ಗೋವಾದಲ್ಲಿ ಆರೋಪಿಯು ಕ್ಯಾಸಿನೋದಲ್ಲಿ ಜೂಜಾಡಲು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನಾಧರಿಸಿ ಗೋವಾ ಪೋಲಿಸರ ಸಹಕಾರದೊಂದಿಗೆ ಗೋವಾದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸರ್ದಾರಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಗೋವಾ ಪೋಲಿಸರು ಮಾಹಿತಿ ನೀಡಿದ್ದಾರೆ.
Ad
ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್ ಪರಿಹಾರ
PU;ನಕಲಿ ಪಠ್ಯ ಹಾವಳಿ! :ಎಚ್ಚೆತ್ತ ಕೆಬಿಟಿಎಸ್ ಅಧಿಕಾರಿಗಳು!
Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲದ ಗಟ್ಟಿಗಿತ್ತಿ
Congress; ಡಿಸಿಎಂ ಡಿಕೆಶಿ ಮೌನ ದೀಕ್ಷೆ !: ಪಕ್ಷದ ಹಿತ ನನ್ನ ಆದ್ಯತೆ: ಸ್ಪಷ್ಟನೆ
Karnataka: “ಸಿದ್ದುವೇ ಸಿಎಂ’: ಆಪ್ತ ಸಚಿವರ ಒಕ್ಕೊರಲ ದನಿ
You seem to have an Ad Blocker on.
To continue reading, please turn it off or whitelist Udayavani.