ಆತ್ರಾಡಿ ಮದಗ: ಹಾಡಹಗಲೇ ಚಿರತೆ ದಾಳಿಗೆ ಕರು ಸಾವು
Team Udayavani, Feb 6, 2023, 6:45 AM IST
ಉಡುಪಿ: ಹಾಡಹಗಲೇ ಚಿರತೆ ದಾಳಿ ನಡೆಸಿ ಕರುವೊಂದನ್ನು ಕೊಂದು ತಿಂದ ಘಟನೆ ಆತ್ರಾಡಿ ಮದಗದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಸ್ಥಳೀಯ ನಿವಾಸಿ ಉಮೇಶ್ ಶೆಟ್ಟಿ ಅವರು ಮೇಯಲು ಬಿಟ್ಟಿದ್ದ ದನದ ಕರುವನ್ನು ಮರಳಿ ತರಲೆಂದು ಮಧ್ಯಾಹ್ನ ತೆರಳಿದ್ದಾಗ ಅವರ ಕಣ್ಣೆದುರಿನಲ್ಲಿ ಘಟನೆ ನಡೆದಿದೆ. ಕರುವಿನ ಕತ್ತನ್ನು ಚಿರತೆ ಬಗೆದು ತಿಂದಿದೆ. ಉಮೇಶ್ ಅವರು ಚಿರತೆಯನ್ನು ಓಡಿಸಲು ಯತ್ನಿಸಿದಾಗ ಅದು ಅವರ ಮೇಲೆರಗಲು ಮುಂದಾಗಿತ್ತು.
ಈ ಭಾಗದಲ್ಲಿ ಶ್ವಾನಗಳು, ಕೋಳಿಗಳು ಸಾಮಾನ್ಯ ಎಂಬಂತೆ ನಾಪತ್ತೆಯಾಗುತ್ತಿವೆ. ಒಂದು ವಾರಗಳಿಂದ ಪರೀಕ, ಆತ್ರಾಡಿ, ಹೆರ್ಗ, ಮದಗ, ಪರ್ಕಳ ಭಾಗದಲ್ಲಿ ಚಿರತೆ ಓಡಾಟ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮೌನವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜ. 21ರಂದು ಹೆರ್ಗದ ಬಳಿ ಗ¨ªೆಯಲ್ಲಿ ಕೋಣವನ್ನು ಚಿರತೆ ಕೊಂದಿತ್ತು. ಸ್ವಲ್ಪ ಸಮಯದ ಹಿಂದೆ ಇದೇ ಪರಿಸರದಲ್ಲಿ ಶಿಕ್ಷಕ ಕೆದ್ಲಾಯರ ಮನೆಯ ಸಾಕು ನಾಯಿಯ ಬೇಟೆಗೆ ಯತ್ನಿಸಿದ ಚಿರತೆ ವಿಫಲವಾಗಿತ್ತು. ಅದರ ಸಿಸಿ ಕೆಮರಾ ದೃಶ್ಯ ವೈರಲ್ ಆಗಿತ್ತು. ಈಗ ಮತ್ತೆ ಚಿರತೆಯ ಉಪಟಳ ಕಂಡುಬಂದಿದೆ.
ಘಟನ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳವಾರ ಬೋನು ಇರಿಸುವ ಭರವಸೆ ನೀಡಿದ್ದಾರೆ.
ತುರ್ತು ಸ್ಪಂದನೆಗೆ ಆಗ್ರಹ
ಚಿರತೆ ಸಹಿತ ಕಾಡುಪ್ರಾಣಿಗಳ ದಾಳಿ ಬಗ್ಗೆ ಆಗಿಂದಾಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅರಣ್ಯ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮನುಷ್ಯರಿಗೆ ಅಪಾಯ ಸಂಭವಿಸಿ ಜನ ರೊಚ್ಚಿಗೆದ್ದ ಬಳಿಕ ಎಚ್ಚರಗೊಳ್ಳುವ ಅರಣ್ಯ ಇಲಾಖೆಯು ತನ್ನ ನಡೆಯನ್ನು ಬದಲಿಸಿಕೊಂಡು ಈಗಾಗಲೇ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…