ಮಾದಾಪಟ್ಟಣ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಲಿಂಗೈಕ್ಯ
Team Udayavani, Feb 7, 2023, 12:03 AM IST
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಮಾದಾಪಟ್ಟಣದ ವಿರಕ್ತ ಮಠದ ಹಿರಿಯ ಶ್ರೀಗಳಾದ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮೀಜಿ (80) ಅವರು ಸೋಮವಾರ ರಾತ್ರಿ 10.45 ರಲ್ಲಿ ಲಿಂಗೈಕ್ಯರಾದರು.
ಸ್ವಾಮೀಜಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಶ್ರೀಗಳ ಅಂತಿಮ ಸಂಸ್ಕಾರವು ಮಠದ ಆವರಣದಲ್ಲಿರುವ ಗದ್ದಿಗೆಯಲ್ಲಿ ಮಂಗಳವಾರ ಸಾಯಂಕಾಲ 4 ಗಂಟೆಗೆ ನಡೆಯಲಿದ್ದು, ಹಲವು ಮಠಾಧೀಶರು ಭಾಗವಹಿಸಲಿದ್ದಾರೆ. ಪೂಜ್ಯರು ಐವತ್ತು ವರ್ಷಗಳ ಕಾಲ ಶ್ರೀ ಮಠವನ್ನು ಮುನ್ನಡೆಸುವ ಮೂಲಕ ಭಕ್ತಾದಿಗಳ ಹೃನ್ಮನಗಳಲ್ಲಿ ನೆಲೆಸಿದ್ದರು. ಶ್ರೀ ಗಳು ಉತ್ತಮವಾದ ಸಂಗೀತಗಾರರಾಗಿದ್ದೂ, ಪಿಟೀಲು ವಾದನ ಮಾಡುವ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ: ನ್ಯೂ ಬ್ಯಾಲೆನ್ಸ್ ಒಳಾಂಗಣ ಗ್ರ್ಯಾನ್ ಪ್ರಿ: ಚಿನ್ನ ಗೆದ್ದ ತೇಜಸ್ವಿನ್ ಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!
Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್
ಸ್ಟಾರ್ಟ್ಅಪ್ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು
ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ