ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ

ಮನೆ ಹಸ್ತಾಂತರ ಮಾಡಿದ ಕೊರಟಗೆರೆ ತಹಶೀಲ್ದಾರ್

Team Udayavani, Feb 1, 2023, 7:32 PM IST

ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ

ಕೊರಟಗೆರೆ: ತನ್ನ ಸ್ವಂತ ಅಜ್ಜಿಯನ್ನೇ ಮನೆಯಿಂದ ಹೊರಹಾಕಿದ ಮೊಮ್ಮಗ, ನ್ಯಾಯಕ್ಕಾಗಿ ಮಧುಗಿರಿ ಎಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅಜ್ಜಿ ಕಾವಲಮ್ಮ, ಬೀದಿ ಪಾಲಾಗಿದ್ದ ವಯೋವೃದ್ದೆ ಅಜ್ಜಿಗೆ ಆಸರೆಯಾದ ಮಧುಗಿರಿ ಎಸಿ ನ್ಯಾಯಾಲಯ, ಹಿರಿಯ ನಾಗರೀಕ ಕಾಯ್ದೆಯ ಅನ್ವಯ ಅಜ್ಜಿಯ ಪರವಾಗಿ ಆದೇಶ ಬಂದಿದ್ದು ಅದರಂತೆ ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರ ಭದ್ರತೆಯಲ್ಲಿ ಅಜ್ಜಿ ಮತ್ತೇ ಮನೆ ಸೇರುವಂತಾಗಿದೆ.

ಕೊರಟಗೆರೆ ಪಟ್ಟಣದ ೩ನೇ ವಾರ್ಡಿನ ಹನುಮಂತಪುರ ವಾಸಿಯಾದ ಲೇ.ರಾಮಯ್ಯನ ಮಡದಿಯಾದ ಕಾವಲಮ್ಮ ಎನ್ನುವ ವೃದ್ದೆಯ ತನ್ನ ಮಗಳಾದ ಲೇ. ಲಕ್ಷ್ಮಮ್ಮನ ಮಗನಾದ ಮಾರುತಿ ಎಂಬಾತ ಕಳೆದ 6 ತಿಂಗಳ ಹಿಂದೆಯಷ್ಟೆ ಮನೆಯಿಂದ ಹೊರಹಾಕಿದ ದಾರುಣ ಘಟನೆ ನಡೆದಿದೆ. ಹಿರಿಯ ನಾಗರೀಕ ಕಾಯ್ದೆಯಂತೆ ವಯೋವೃದ್ದೆ ಅಜ್ಜಿಯು ಮತ್ತೇ ಪೊಲೀಸರ ಭದ್ರತೆಯಲ್ಲಿ ಮನೆ ಸೇರಿದ್ದಾರೆ.

ವಯೋವೃದ್ದೆ ಕಾವಲಮ್ಮ ನ್ಯಾಯಕ್ಕಾಗಿ ವಿಶೇಷ ಚೇತನ ಮಗನ ಜೊತೆಗೂಡಿ ಮನೆಗಾಗಿ ಕೊರಟಗೆರೆ ತಹಶೀಲ್ದಾರ್ ಮೂಲಕ ಮಧುಗಿರಿ ಎಸಿ ನ್ಯಾಯಾಲಯಕ್ಕೆ ಕಳೆದ 6 ತಿಂಗಳ ಹಿಂದೆಯಷ್ಟೆ ಅರ್ಜಿ ಸಲ್ಲಿಸುತ್ತಾರೆ. ಮನೆ ಕಂದಾಯ, ಮನೆ ಕ್ರಯ, ವಿದ್ಯುತ್ ಪಾವತಿ ಶುಲ್ಕದ ರಸಿದಿ ಪತ್ರ ಸೇರಿದಂತೆ ಇನ್ನೀತರ ದಾಖಲೆ ಪರಿಶೀಲಿಸಿದ ಮಧುಗಿರಿ ಎಸಿ ನ್ಯಾಯಾಲಯವು 78 ವರ್ಷ ವಯಸ್ಸಿನ ಕಾವಲಮ್ಮನ ಪರವಾಗಿ ತೀರ್ಪುನೀಡಿ ಆದೇಶ ಮಾಡಿದ್ದಾರೆ.

ಮಧುಗಿರಿ ಉಪವಿಭಾಗಾಧಿಕಾರಿ ರಿಸಿ ಆನಂದ್‌ರವರ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ಪೊಲೀಸ್ ಇಲಾಖೆಯ ಎಎಸೈ ಧರ್ಮೆಗೌಡ, ರಾಮಚಂದ್ರಪ್ಪ ಸೇರಿದಂತೆ ಕಂದಾಯ ಇಲಾಖೆಯ ಪ್ರತಾಪ್‌ಕುಮಾರ್, ಬಸವರಾಜು, ಪವನಕುಮಾರ್, ರಘು ನೇತೃತ್ವದ ಪೊಲೀಸರ ತಂಡ ವಯೋವೃದ್ದೆ ಅಜ್ಜಿ ಕಾಮಲಮ್ಮ ಮತ್ತು ವಿಶೇಷ ಚೇತನ ಬೈರೇಗೌಡನಿಗೆ ಮತ್ತೇ ಮನೆ ಹಸ್ತಾಂತರ ಮಾಡುವಲ್ಲಿ ಯಶಸ್ವಿ ಆಗಿರುವ ಘಟನೆ ನಡೆದಿದೆ.

ಮನೆಮುಂದೆ ಮೊಮ್ಮಗನ ಹೈಡ್ರಾಮ..
ವಯೋವೃದ್ದೆ ಅಜ್ಜಿಯಾದ ಕಾವಲಮ್ಮ ಮನೆಯ ಹಸ್ತಾಂತರಕ್ಕೆ ಮನೆಯ ಹತ್ತಿರ ಬಂದ ತಹಶೀಲ್ದಾರ್ ಮತ್ತು ಪೊಲೀಸರ ಮುಂದೆಯೇ ಅಜ್ಜಿಯ ಮೊಮ್ಮಗ ಮಾರುತಿ ಎಂಬಾತ ಹೈಡ್ರಾಮ ಸೃಷ್ಟಿಸಿದ್ದಾರೆ. ಮತ್ತೇ ಅಜ್ಜಿಗೆ ಭಯಗೊಳಿಸುವ ರೀತಿಯಲ್ಲಿ ಯುವಕರನ್ನು ಸೇರಿಸಿ ಗಲಾಟೆ ಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಪೊಲೀಸರ ತಂಡ ಪುಂಡ ಯುವಕರಿಗೆ ಬಿಸಿಮುಟ್ಟಿಸಿ ಮನೆಯನ್ನು ಕಾಲಿ ಮಾಡಿಸಿ ಅಜ್ಜಿಗೆ ಹಸ್ತಾಂತರ ಮಾಡಿರುವ ಘಟನೆಯು ನಡೆದಿದೆ.

ನನ್ನ ಮೊಮ್ಮಗ ಮಾರುತಿ ಎಂಬಾತ ನನಗೇ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗಡೆ ಹಾಕಿದ. ಏನು ತಿಳಿಯದ ನನ್ನ ವಿಶೇಷ ಚೇತನ ಮಗನಿಗೆ ನಾನೇ ದಿಕ್ಕು. ಮತ್ತೇ ನನಗೇ ಏನಾದ್ರು ಸಮಸ್ಯೆ ಆದರೇ ಅದಕ್ಕೆ ಮಾರುತಿನೇ ಪ್ರಮುಖ ಕಾರಣ. ಮಧುಗಿರಿ ಎಸಿ, ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರಿಗೆ ದೇವರು ಒಳ್ಳೆಯದು ಮಾಡಲಿ.
– ಕಾವಲಮ್ಮ. ವಯೋವೃದ್ದೆ. ಕೊರಟಗೆರೆ

ಮನೆಗಾಗಿ ಮೊಮ್ಮಗನ ವಿರುದ್ದ ವಯೋವೃದ್ದೆ ಅಜ್ಜಿಯು ದೂರು ನೀಡಿದ್ದಾರೆ. ಹಿರಿಯ ನಾಗರೀಕರ ಕಾಯ್ದೆಯಡಿ ಅಜ್ಜಿಯ ಪರವಾಗಿ ಮಧುಗಿರಿ ಎಸಿ ನ್ಯಾಯಾಲಯ ಆದೇಶ ಮಾಡಿದೆ. ಹಿರಿಯ ನಾಗರೀಕರ ರಕ್ಷಣೆ ಮತ್ತು ಪೋಷಣೆ ನಮ್ಮೇಲ್ಲರ ಪ್ರಮುಖ ಕರ್ತವ್ಯ. ವಯೋವೃದ್ದೆ ಕಾಮಲಮ್ಮನಿಗೆ ಮತ್ತೇ ಏನಾದ್ರು ತೊಂದರೇ ಆದ್ರೇ ತಕ್ಷಣ ನಾವು ಸ್ಥಳಕ್ಕೆ ಬರುತ್ತೇವೆ.
– ನರಸಿಂಹಮೂರ್ತಿ. ತಹಶೀಲ್ದಾರ್. ಕೊರಟಗೆರೆ

ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಶಕ್ತಿ ತುಂಬಿದೆ: ಬಾಲಚಂದ್ರ ಜಾರಕಿಹೊಳಿ 

ಟಾಪ್ ನ್ಯೂಸ್

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌. ಒನ್‌ ಎ. 2ರಂದು ಲೋಕಾರ್ಪಣೆ

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

sss

ತಂದೆಯ ಸಾವಿನ ದುಃಖದಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ಮಗಳು

Food

ವಾವ್! ಏನ್ ರುಚಿ ಈ ಸಿಗಡಿ ಘೀ ರೋಸ್ಟ್..ಸಿಗಡಿ ತಂದರೆ ಒಮ್ಮೆ ಹೀಗೆ ಮಾಡಿ ನೋಡಿ…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-bneki

ಎಲೆಕ್ಟ್ರಿಕ್ ಸ್ಕೂಟರ್‌ ಏಕಾಏಕಿ ಸ್ಫೋಟ; ಅಕ್ಕಪಕ್ಕದಲ್ಲಿದ್ದ ನಾಲ್ಕು ಬೈಕ್‌ಗಳು ಭಸ್ಮ

1-sadsadad

ಕಲಬುರಗಿಯಲ್ಲಿ ಬಂಜಾರಾ ಸಮುದಾಯದ ಬೃಹತ್ ಪ್ರತಿಭಟನೆ

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?

ವಿಧಾನಸಭೆ ಚುನಾವಣೆ: ಟಿಕೆಟ್‌ ಆಕಾಂಕ್ಷಿಗಳಲ್ಲಿ  ತಳಮಳ

ವಿಧಾನಸಭೆ ಚುನಾವಣೆ: ಟಿಕೆಟ್‌ ಆಕಾಂಕ್ಷಿಗಳಲ್ಲಿ  ತಳಮಳ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-sadsad-d

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌. ಒನ್‌ ಎ. 2ರಂದು ಲೋಕಾರ್ಪಣೆ

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ