ಕುಜ ಕ್ರೂರ ಗ್ರಹ: ಜಾತಕದ ಯಾವ ಸ್ಥಾನದಲ್ಲಿ ಕುಜ ಗ್ರಹ ಇದ್ದರೆ ದೋಷ ಬರುತ್ತದೆ?

ಮದುವೆ ಎಂಬುದು ಜೀವನದ ಒಂದು ಮಹತ್ವದ ಘಟ್ಟ

Team Udayavani, Sep 2, 2021, 1:19 PM IST

ಕುಜ ಕ್ರೂರ ಗ್ರಹ: ಜಾತಕದ ಯಾವ ಸ್ಥಾನದಲ್ಲಿ ಕುಜ ಗ್ರಹ ಇದ್ದರೆ ದೋಷ ಬರುತ್ತದೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ, ಚಂದ್ರನ ಆದಿಯಾಗಿ ರಾಹು, ಕೇತು ತನಕ 9 ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ಆ ಗ್ರಹಗಳು ಇರುವ ಸ್ಥಾನಗಳ ಆಧಾರದ ಮೇಲೆ ಫಲಗಳನ್ನು ಹೇಳುವುದು ಪದ್ಧತಿ. ಆದರೆ ಜ್ಯೋತಿಷ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿ ಬರುವ ಒಂದು ದೋಷ ಎಂದರೆ ಕುಜ(ಮಂಗಳ) ದೋಷ. ಆದರೆ ಕುಜ ದೋಷ ಎಂದರೇನು, ಅದನ್ನು ದೋಷ ಎಂದು ಪರಿಗಣಿಸಬೇಕೆ ಎಂಬ ಬಗ್ಗೆ ವಿಶ್ಲೇಷಿಸೋಣ…

ನವಗ್ರಹಗಳಲ್ಲಿ ಯಾವ ಗ್ರಹಗಳೂ ಅಶುಭವಲ್ಲ. ಜಾತಕ ಹೊಂದಿರುವ ವ್ಯಕ್ತಿಯ ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಗ್ರಹಗಳು ಶುಭ ಮತ್ತು ಅಶುಭ ಸ್ಥಾನಗಳನ್ನು ಹೊಂದುತ್ತವೆ. ಅದೇ ರೀತಿ ಕುಜ (ಮಂಗಳ) ಗ್ರಹ ಕೂಡಾ ಅಶುಭ ಗ್ರಹ ಅಲ್ಲ. ಕರ್ಕಾಟಕ ಲಗ್ನದವರಿಗೆ ಕುಜ ಯೋಗಕಾರಕ ಗ್ರಹ. 5 (ವೃಶ್ಚಿಕ) ಮತ್ತು 10 (ಮೇಷ)ನೇ ರಾಶಿಗಳ ಅಧಿಪತಿ. (ಕೇಂದ್ರ, ತ್ರಿಕೋನ ಸ್ಥಾನದ ಅಧಿಪತಿ). ಅದೇ ರೀತಿ ಸಿಂಹ ಲಗ್ನದವರಿಗೆ 4 ಮತ್ತು 9ನೇ ಸ್ಥಾನದ ಅಧಿಪತಿ.

ಕುಜ ದೋಷ ಕೇವಲ ಮದುವೆ, ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆ ಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಅಂಶ. ಸ್ವಾಭಾವಿಕವಾಗಿ ಕುಜ ಒಂದು ಕ್ರೂರಗ್ರಹ. ಅದು ಯಾವ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ತನ್ನ ಕ್ರೂರ ಸ್ವಭಾವವನ್ನು ತೋರಿಸುತ್ತದೆ. ಕುಜನು ಲಗ್ನದಿಂದ 1,2,4,7, 8 ಮತ್ತು 12ನೇ ಮನೆಗಳಲ್ಲಿ ಇದ್ದರೆ ಅದನ್ನು ಕುಜ ದೋಷ ಎಂದು ಪರಿಗಣಿಸುತ್ತಾರೆ. ಮದುವೆ ಎಂಬುದು ಜೀವನದ ಒಂದು ಮಹತ್ವದ ಘಟ್ಟ. ಗಂಡು, ಹೆಣ್ಣಿನ ಮದುರವಾದ ಜೀವನಕ್ಕೆ ಅಡಿಪಾಯ ಕುಂಡಲಿಯ ಮೊದಲಿನ ಮನೆಯನ್ನು ಲಗ್ನ ಎಂದು, ಶರೀರ, ವೈಯಕ್ತಿಕ ಜೀವನ, ಸ್ವಭಾವ ಎಂದೂ, ದ್ವಿತೀಯ ಮನೆಯನ್ನು ಕುಟುಂಬ ಸ್ಥಾನವೆಂದು, ಧನ, ವಾಕ್ ಸ್ಥಾನವೆಂದೂ, ನಾಲ್ಕನೇ ಮನೆಯನ್ನು ಸುಖ ಸ್ಥಾನ, ಏಳನೇ ಮನೆಯನ್ನು ಕಳತ್ರ ಸ್ಥಾನ (ದಾಂಪತ್ಯ), ಎಂಟನೇ ಮನೆಯನ್ನು ಮಾಂಗಲ್ಯ ಸ್ಥಾನ, ಹಾಗೇ ಹನ್ನೆರಡನೇ ಮನೆಯನ್ನು ಶಯನ ಸುಖ ಸ್ಥಾನವೆಂದು ಕೇಳಬಹುದು. ಆ ಸ್ಥಾನಗಳಲ್ಲಿ ಕ್ರೂರ ಸ್ವಭಾವದ ಕುಜ ಸ್ಥಾನ ಪಡೆದುಕೊಂಡರೆ, ಆ ಮನೆಗಳ ಪಾವಿತ್ರತೆಯನ್ನು ಹಾಳು ಮಾಡುತ್ತಾನೆ.

ಕುಜನಿಗೆ ಎಲ್ಲ ಗ್ರಹಗಳ ತರ 7ನೇ ದೃಷ್ಠಿ ಅಲ್ಲದೆ (ರಾಹು ಕೇತು ಹೊರತುಪಡಿಸಿ) 4ನೇ ಮತ್ತು 8ನೇ ವಿಶೇಷ ದೃಷ್ಠಿ ಇದೆ. ತಾನು ಇರುವ ಮನೆಯಿಂದ 4ನೇ, 7ನೇ ಮತ್ತು 8ನೇ ಮನೆಗಳನ್ನು (ಸ್ಥಾನಗಳನ್ನು) ವೀಕ್ಷಣೆ ಮಾಡುತ್ತಾನೆ.

12ನೇ ಮನೆಯಲ್ಲಿ ಉಪಸ್ಥಿತನಿದ್ದು ತನ್ನ 8ನೇ ದೃಷ್ಠಿಯಿಂದ ಸಪ್ತಮ ಸ್ಥಾನವನ್ನು, 1ನೇ ಮನೆಯಲ್ಲಿ ಉಪಸ್ಥಿತನಿದ್ದು ತನ್ನ 7ನೇ ದೃಷ್ಟಿಯಿಂದ ಸಪ್ತಮ ಸ್ಥಾನವನ್ನೂ, ಹಾಗೇ 4ನೇ ಮನೆಯಲ್ಲಿದ್ದು, ತನ್ನ 4ನೇ ದೃಷ್ಟಿಯಿಂದ ಸಪ್ತಮ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಇದೇ ರೀತಿ ಚಂದ್ರನಿಂದಲೂ, ಶುಕ್ರ ಇರುವ ಸ್ಥಾನದಿಂದಲೂ ಕುಜ ದೋಷನ್ನು ಪರಿಗಣಿಸುವ ಪದ್ಧತಿ ಇದೆ.

ರವೀಂದ್ರ. ವಿ. (ಜ್ಯೋತಿಷ್ಯ ಶಾಸ್ತ್ರ ವಿಶಾರದ)

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

ಟಾಪ್ ನ್ಯೂಸ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.