ಇಫಿ ಚಿತ್ರೋತ್ಸವ : ಫಿಲ್ಮ್‌ ಬಜಾರ್ ನಲ್ಲಿ ಕಂಗೊಳಿಸಿದ ‘ನೀವಿನ್ನೂ ನೋಡದ ಮಣಿಪುರʼ!


Team Udayavani, Nov 25, 2022, 3:42 PM IST

ಇಫಿ ಚಿತ್ರೋತ್ಸವ : ಫಿಲ್ಮ್‌ ಬಜಾರ್ ನಲ್ಲಿ ಕಂಗೊಳಿಸಿದ ‘ನೀವಿನ್ನೂ ನೋಡದ ಮಣಿಪುರʼ!

ಪಣಜಿ: 53 ನೇ ಇಫಿ ಭಾಗವಾಗಿ ಎನ್‌ಎಫ್‌ ಡಿಸಿಯ ಫಿಲ್ಮ್‌ ಬಜಾರ್‌ ನಲ್ಲಿ ಮಣಿಪುರ ರಾಜ್ಯದ ವಾರ್ತಾ ಇಲಾಖೆ ಹಾಗೂ ಮಣಿಪುರ ಫಿಲ್ಮ್‌ ಡೆವಲಪ್‌ ಮೆಂಟ್‌ ಸೊಸೈಟಿ ಪ್ರಸ್ತುತಪಡಿಸಿದ “ನೀವಿನ್ನೂ ನೋಡದ ಮಣಿಪುರʼ ಈ ಬಾರಿಯ ವಿಶೇಷವೆನಿಸಿತು.

ಪ್ರತಿ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರದ ಸರಕಾರಗಳು ತಮ್ಮ ಪ್ರವಾಸೋದ್ಯಮ ತಾಣಗಳ ಕುರಿತು ಇಂಥ ಬಜಾರ್‌ ಗಳಲ್ಲಿ ಸಿನಿಮಾ ಮಂದಿಗೆ ಪರಿಚಯಿಸಲೆತ್ನಿಸುವುದು ಸಹಜ. ಈಶಾನ್ಯ ಭಾರತದಿಂದ ಬರುವುದೇ ಕಡಿಮೆ. ಈ ಬಾರಿ ಇದಕ್ಕೆ ಅಪವಾದವೆಂಬಂತೆ ಮೊದಲ ಬಾರಿಗೆ ಮಣಿಪುರದ ಸಿನಿಮಾ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮಣಿಪುರದ ಪೆವಿಲಿಯನ್ ಏರ್ಪಡಿಸಲಾಗಿತ್ತು.

ಇದರೊಂದಿಗೆ ಈ ಬಾರಿ ಇಫಿ ಚಲನಚಿತ್ರೋತ್ಸವದಲ್ಲಿ ಮಣಿಪುರ ಸಿನಿಮಾದ ಸುವರ್ಣ ವರ್ಷಾಚರಣೆಯೂ ನಡೆಯುತ್ತಿದೆ. 1972 ರಲ್ಲಿ ಮೊದಲ ಮಣಿಪುರ ಸಿನಿಮಾ ಮಾತಂಗಿ ಮಣಿಪುರ್‌ ಬಿಡುಗಡೆಯಾಗಿತ್ತು. ದೇಬ್‌ ಕುಮಾರ್‌ ಬೋಸ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಹಾಗಾಗಿ ಮಣಿಪುರಕ್ಕೆ ಎಲ್ಲಿಲ್ಲದ ಮಹತ್ವ ಬಂದಿತ್ತು.

ಮಣಿಪುರದಲ್ಲಿ ಸಿನಿಮಾ ಮಾಡುವವರಿಗೆ, ಅಲ್ಲಿನ ತಾಣಗಳನ್ನು ದೃಶ್ಯೀಕರಿಸುವವರಿಗೆ ಎಲ್ಲ ರೀತಿಯ ಪೂರಕ ಸಹಕಾರ ಒದಗಿಸಲು ಮಣಿಪುರ ಸರಕಾರ ನಿರ್ಧರಿಸಿದೆ. ಮಣಿಪುರ ಸರಕಾರದ ಈ ಬಾರಿಯ ಥೀಮ್‌ “ನೀವಿನ್ನೂ ನೋಡದ ಮಣಿಪುರ’. ಹೊಸ ಸಿನಿಮಾ ನಿರ್ದೇಶಕರು, ನಿರ್ಮಾಪಕರಿಗೆ ಮಣಿಪುರದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಂಪರೆಯನ್ನು ವಿವರಿಸಿ ತಮ್ಮ ಚಿತ್ರಗಳ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದು ಇದರ ಮೂಲ ಉದ್ದೇಶ ಈ ಪೆವಿಲಿಯನ್‌ ದ್ದಾಗಿತ್ತು.

ಮಣಿಪುರದ ಪ್ರಾಕೃತಿಕ ಲೋಕತಕ್‌ ಲೇಕ್‌, ಕೈಬುಲ್‌ ಲಾಮ್ಜಾವೊ- ಜಗತ್ತಿನಲ್ಲೇ ಏಕೈಕ ತೇಲುವ ರಾಷ್ಟ್ರೀಯ ಅಭಯಾರಣ್ಯ, ಜಗತ್ತಿನಲ್ಲೇ ಬರೀ ಮಹಿಳೆಯರಿಂದ ನಡೆಯುವ ಇಮಾ ಮಾರ್ಕೆಟ್‌ ಎಲ್ಲದರ ಬಗ್ಗೆಯೂ ಆಸಕ್ತರಿಗೆ ಮಾಹಿತಿ ಒದಗಿಸಲಾಯಿತು.

ಸೊಸೈಟಿಯ ಕಾರ್ಯದರ್ಶಿ ಸುಂಝು ಬಚಸ್ಪತಿಮಾಯುಂ, ಕಥೆ ಹೇಳುವ ಬೃಹತ್‌ ಪರಂಪರೆ ಮಣಿಪುರದಲ್ಲಿದೆ. ಖೊಂಗ್ಜೊಂ ಪರ್ವ ಹಲವಾರು ಶತಮಾನಗಳಿಂದ ಇಂದಿಗೂ ಹರಿದು ಬಂದಿರುವ ಹಾಡುಗಳ ಜಾನಪದ ಪರಂಪರೆ ಮತ್ತಿತರ ಸಂಗತಿ ಕುರಿತು ವಿವರಿಸಲಾಯಿತು.

2020 ರಲ್ಲಿ ಮಣಿಪುರ ಸರಕಾರವೂ ನೂತನ ಸಿನಿಮಾ ನೀತಿಯನ್ನು ಜಾರಿಗೊಳಿಸಿದೆ. ಈ ಮೂಲಕ ಸ್ಥಳೀಯರ ಹಾಗೂ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗುವ ಎಲ್ಲರ ಹಿತವನ್ನು ಕಾಯುವುದು ಈ ನೀತಿಯ ಉದ್ದೇಶ ಎಂದು ವಿವರಿಸಿದರು.

ಇದರೊಂದಿಗೆ ಬಿಹಾರ, ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ್‌, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್‌, ಮಧ್ಯಪ್ರದೇಶ, ಗುಜರಾತ್‌, ಛತ್ತೀಸ್‌ ಗಡ, ದಿಲ್ಲಿ, ಪುದುಚರಿಯ ದೇಶಗಳು ಫಿಲ್ಮ್‌ ಬಜಾರ್‌ ನಲ್ಲಿ ಫೆವಿಲಿಯನ್‌ ಗಳನ್ನು ನಿರ್ಮಿಸಿದ್ದವು.

ಕರ್ನಾಟಕದ್ದೇನೂ ಕಾಣಲೇ ಇಲ್ಲ

ಫಿಲ್ಮ್‌ ಬಜಾರ್ ನಲ್ಲಿ ಈ ಬಾರಿಯೂ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯಾಗಲೀ, ಸಿನಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ಪೆವಿಲಿಯನ್‌ ಆಗಲೀ, ಮಾಹಿತಿಯಾಗಲೀ ಇರಲಿಲ್ಲ. ಕರ್ನಾಟಕದಲ್ಲಿ ಉಳಿದೆಲ್ಲ ರಾಜ್ಯ ಹಾಗೂ ವಿದೇಶಗಳಿಗಿಂತ ಒಳ್ಳೆಯ ತಾಣಗಳಿವೆ. ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕ, ಅರಣ್ಯ, ಜಲಪಾತ ಹಾಗೂ ಸಮುದ್ರ ತೀರಗಳಿವೆ. ವಿಶೇಷವಾಗಿ ಪಡುಬಿದ್ರಿ ಸಮುದ್ರ ತೀರಕ್ಕೆ ಪ್ರತಿಷ್ಠಿತ ಬ್ಲ್ಯೂ ಟ್ಯಾಗ್ ಗೌರವ ಸಿಕ್ಕಿದೆ. ಇವೆಲ್ಲವುಗಳನ್ನು ಸರಿಯಾಗಿ ಪ್ರೊಮೋಷನ್‌ ಮಾಡಿದರೆ ಪ್ರವಾಸಿಗರು ಹಾಗೂ ಸಿನಿಮಾ ಮಂದಿಯ ಸಂಖ್ಯೆ ಹೆಚ್ಚಾಗಬಹುದು. ಸುಮಾರು ಹತ್ತು ಸಾವಿರ ಮಂದಿಗಳು ಭಾಗವಹಿಸುವಂತೆ ಮಾಡಬಹುದು. ಆದರೆ ಫಿಲ್ಮ್‌ ಬಜಾರ್‌ ನಲ್ಲಿ ಯಾವುದೂ ಕಾಣ ಬರಲಿಲ್ಲ.

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.