ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ
ಒಟ್ಟು 9.62 ಕೋಟಿ ರೂಪಾಯಿ ದಂಡ ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, Mar 31, 2023, 12:09 PM IST
ನವದೆಹಲಿ: ಆಗ್ನೇಯ ರೈಲ್ವೆಯ ಹೌರಾ-ಖರಗ್ ಪುರ್ ಶಾಖೆಯ ಟಿಕೆಟ್ ಪರೀಕ್ಷಕ ಪಿಂಟು ದಾಸ್ ಎಂಬವರು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ದಂಡ ವಸೂಲಿ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!
ಆಗ್ನೇಯ ರೈಲ್ವೆಯ ಪ್ರಕಟನೆ ಪ್ರಕಾರ, ಹೌರಾ ಖರಗ್ ಪುರ್ ಶಾಖೆಯ ಸಂತಾರಾಗಾಚಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ದಾಸ್ ಅವರು 2023ರ ಮಾರ್ಚ್ 26ರವರೆಗೆ ಒಟ್ಟು 1,00,53,400 ರೂ. ದಂಡ ಸಂಗ್ರಹಿಸಿದ್ದಾರೆ.
ರೈಲ್ವೆ ಇಲಾಖೆ ಪ್ರಕಾರ, ಆಗ್ನೇಯ ರೈಲ್ವೆ ಶಾಖೆಯಲ್ಲಿ ದಾಸ್ ಅವರು ಅತೀ ಹೆಚ್ಚು ದಂಡ ಸಂಗ್ರಹಿಸಿದ ಟಿಕೆಟ್ ಪರೀಕ್ಷಕರಾಗಿದ್ದಾರೆ. ದಕ್ಷಿಣ ಸೆಂಟ್ರಲ್ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಯಕ್ತಿಕ ಟಿಕೆಟ್ ತಪಾಸಣೆ ಪರೀಕ್ಷಕರೊಬ್ಬರು 1 ಕೋಟಿಗೂ ಅಧಿಕ ದಂಡ ವಿಧಿಸಿರುವುದು ದಾಖಲೆಯಾಗಿದೆ ಎಂದು ತಿಳಿಸಿದೆ.
ಪಿಂಟು ದಾಸ್ ಅವರು ದೂರ ಪ್ರಯಾಣದ ಪ್ರಯಾಣಿಕರ ಟಿಕೆಟ್ ಗಳನ್ನು ಪರಿಶೀಲಿಸುತ್ತಿದ್ದು, ಅದೇ ರೀತಿ ಸ್ಥಳೀಯ ಹೌರಾದಿಂದ ಖರಗ್ ಪುರ್, ಖರಗ್ ಪುರದಿಂದ ಬಲೇಶ್ವರ್, ಹೌರಾದಿಂದ ದಿಘಾ ಮತ್ತು ಶಾಲಿಮಾರ್ ನಿಂದ ಟಾಟಾ ವಿಭಾಗಗಳ ನಡುವೆ ಓಡಾಡುವ ರೈಲು ಪ್ರಯಾಣಿಕರ ಟಿಕೆಟ್ ಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.
ಸುಮಾರು 1.16 ಲಕ್ಷ ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದನ್ನು ರೈಲ್ವೆ ಸಿಬಂದಿಗಳು ಪತ್ತೆ ಹಚ್ಚಿದ್ದು, ಒಟ್ಟು 9.62 ಕೋಟಿ ರೂಪಾಯಿ ದಂಡ ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Viral Video… ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನಿಗೆ ಪಾಠ ಕಲಿಸಿದ ವಿದ್ಯಾರ್ಥಿಗಳು…
Wedding Invitation: ಮಗನ ಮದುವೆಗೆ ಉಡುಗೊರೆ ಬೇಡ, ಮೋದಿಗೆ ಮತ ನೀಡಿ: ವ್ಯಕ್ತಿ ಮನವಿ
ಫ್ಯಾಂಟಸಿ ಗೇಮ್ ನಲ್ಲಿ 1 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಯುವಕ.!
Reel shooting ವೇಳೆ ಮಹಿಳೆಯ ಸರ ಗಳ್ಳತನ!: ವೈರಲ್ ವಿಡಿಯೋ ನೋಡಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ