ಮೈಟ್‌ – Binghamton University ಒಪ್ಪಂದ ಮರುನವೀಕರಣ


Team Udayavani, May 18, 2023, 7:45 AM IST

ಮೈಟ್‌ – Binghamton University ಒಪ್ಪಂದ ಮರುನವೀಕರಣ

ಮಂಗಳೂರು : ಮೂಡು ಬಿದಿರೆಯ ಪ್ರತಿಷ್ಠಿತ ತಾಂತ್ರಿಕ ಮತ್ತು ಆಡಳಿತಾತ್ಮಕ ನಿರ್ವ ಹಣೆ ಯ ಮಂಗಳೂರು ಇನ್‌ಸ್ಟಿಟ್ಯೂ ಟ್‌ ಆಫ್‌ಟೆಕ್ನಾಲಜಿ ಆ್ಯಂಡ್‌ ಎಂಜಿನಿ ಯರಿಂಗ್‌ (ಮೈಟ್‌) ಸಂಸ್ಥೆಯು ಅಮೆರಿಕದ ನ್ಯೂಯಾರ್ಕ್‌ ರಾಜ್ಯ ವಿ.ವಿ.ಯಾದ ಬಿಂಗ್ ಹ್ಯಾಮ್ಟನ್ ವಿ.ವಿ.ಯೊಂದಿಗಿನ ಒಪ್ಪಂದ  ವನ್ನು ಮತ್ತೆ 5 ವರ್ಷಗಳ ಅವಧಿಗೆ ನವೀಕರಿಸಿದೆ.

ಅಮೆರಿಕದಲ್ಲಿ ಆರ್‌1 – ಅತಿ ಹೆಚ್ಚಿನ ಸಂಶೋಧನ ಚಟುವಟಿಕೆ ಎಂದು ಗುರುತಿಸಲ್ಪಟ್ಟಿರುವ ಬಿಂಗ್ ಹ್ಯಾಮ್ಟನ್ ವಿ.ವಿ.ಯೊಂದಿಗಿನ ಈ ಒಡಂ ಬಡಿಕೆ ಎರಡು ಸಂಸ್ಥೆಗಳ ನಡುವಿನ ಪಾಲು ದಾರಿಕೆಯನ್ನು ಮತ್ತಷ್ಟು ಬಲ ಪಡಿಸುವುದು. ಎರಡೂ ಸಂಸ್ಥೆಗಳೂ ಮೇ 2016ರಲ್ಲಿ ಒಪ್ಪಂದ ಮಾಡಿ ಕೊಂಡಿದ್ದು ಇದರಡಿಯಲ್ಲಿ ಅಧ್ಯಾಪಕರ ವಿನಿಮಯ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯ ಕ್ರಮಗಳೊಂದಿಗೆ ಸುಧಾರಿತ ತಂತ್ರ ಜ್ಞಾನಗಳ ಕಾರ್ಯಾಗಾರಗಳು, ಲೀನ್‌ ಸಿಕ್ಸ್‌ ಸಿಗ್ಮಾ ಹಳದಿ ಮತ್ತು ಹಸಿರು ಬೆಲ್ಟ್ ಪ್ರಮಾಣೀಕರಣ, ಸಹಯೋಗದ ಅಂತಾರಾಷ್ಟ್ರೀಯ ಸಮ್ಮೇಳನ, ಜಂಟಿ ಸಂಶೋಧನ ಕಾರ್ಯಕ್ರಮ ನಡೆಸಲಾಗಿದೆ.

ಪಾಲುದಾರಿಕೆಯ ದಾಖಲೆಗಳ ವಿನಿ ಮಯ ಸಮಾರಂಭವು ಬಿಂಗ್ ಹ್ಯಾಮ್ಟನ್ ವಿ.ವಿ. ಕ್ಯಾಂಪಸ್‌ನಲ್ಲಿ ಮೈಟ್‌ನ ಅಧ್ಯಕ್ಷ ರಾಜೇಶ್‌ ಚೌಟ, ಬಿಂಗ್ ಹ್ಯಾಮ್ಟನ್ ವಿ.ವಿ. ಅಧ್ಯಕ್ಷ ಹಾರ್ವೆ ಸ್ಟೆಂಗರ್‌ ಮತ್ತು ಶೈಕ್ಷಣಿಕ ವ್ಯವಹಾರಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡೊನಾಲ್ಡ್‌ ಇ ಹಾಲ್‌ ಅವರ ಸಮ್ಮುಖದಲ್ಲಿ ನಡೆಯಿತು.

ಒಪ್ಪಂದವು 2 ಸಂಸ್ಥೆಗಳ ನಡುವೆ ಶೈಕ್ಷಣಿಕ ಮತ್ತು ಸಂಶೋ ಧನ ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿ ಗಳು ಮತ್ತು ಅಧ್ಯಾಪಕರು ಜಂಟಿ ಸಂಶೋಧನ ಯೋಜನೆಗಳು, ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬಹುದು.

ಬಿಂಗ್ ಹ್ಯಾಮ್ಟನ್ ವಿ.ವಿ.ಯು ಒಪ್ಪಂದವನ್ನು ನವೀಕರಿಸಲು ಹರ್ಷಿತ ರಾಗಿದ್ದೇವೆ, ಈ ಪಾಲುದಾರಿಕೆ ಯು ನಮ್ಮ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ಸದಸ್ಯರಿಗೆ ಅನುಕೂಲವಾಗುವ ಅಂತಾರಾಷ್ಟ್ರೀಯ ಸಹಯೋಗಗಳನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೈಟ್‌ ಅಧ್ಯಕ್ಷ ರಾಜೇಶ್‌ ಚೌಟ ಹೇಳಿದರು.

ಭಾರತದಲ್ಲಿ ಮೈಟ್‌ನೊಂದಿಗೆ ಒಪ್ಪಂದವನ್ನು ನವೀಕರಿಸಲು ನಾವು ರೋಮಾಂಚನಗೊಂಡಿದ್ದೇವೆ, ಈ ಪಾಲುದಾರಿಕೆಯು ನಮ್ಮ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬಂದಿಗಳ ನಡುವಿನ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿನಿಮಯಕ್ಕಾಗಿ ದೃಢತೆಯನ್ನು ಬಲಪಡಿಸುತ್ತದೆ ಎಂದು ಬಿಂಗ್ ಹ್ಯಾಮ್ಟನ್ ವಿ.ವಿ. ಅಧ್ಯಕ್ಷ ಹಾರ್ವೆ ಸ್ಟೆಂಗರ್‌ ಹೇಳಿದರು.

ಬಿಂಗ್ ಹ್ಯಾಮ್ಟನ್ ವಿ.ವಿ.ಯು ಅಮೆರಿಕದ ಉನ್ನತ ಸಾರ್ವಜನಿಕ ಸಂಶೋಧನ ವಿ.ವಿ.ಗಳಲ್ಲೊಂದು, ಅದರ ಪ್ರತಿಭೆ, ಸೌಲಭ್ಯಗಳು, ಪಾಲುದಾರಿಕೆಗಳು ಮತ್ತು ಸಂಶೋಧನ ಅವಕಾಶಗಳಿಗಾಗಿ ಅಮೆರಿಕದಲ್ಲಿ ಪ್ರತಿಷ್ಠಿತ ಸಂಶೋಧನ ವಿ.ವಿ.ಯಾಗಿ ಸ್ಥಾನ ಪಡೆದಿದೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.