Muddebihal: ಕಾಣೆಯಾಗಿದ್ದ ಎಮ್ಮೆ ಗಂಭೀರ ಸ್ಥಿತಿಯಲ್ಲಿ ಪತ್ತೆ… ಆ್ಯಸಿಡ್ ಎರಚಿರುವ ಶಂಕೆ
Team Udayavani, Sep 4, 2023, 11:55 AM IST
ಮುದ್ದೇಬಿಹಾಳ: ಎರಡು ಮೂರು ದಿನಗಳಿಂದ ಕಾಣೆಯಾಗಿದ್ದ ಎಮ್ಮೆಯೊಂದು ಮೈಯೆಲ್ಲಾ ಸುಟ್ಟ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡು ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಹೊರಪೇಟೆ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಭೀಮು ಶಂಕ್ರಪ್ಪ ಅಂಬಿಗೇರ ಅವರಿಗೆ ಸೇರಿರುವ ಎಮ್ಮೆ ಮೇಯಲು ಬಿಟ್ಟಿದ್ದು ಕಳೆದ ಮೂರು ದಿನಗಳಿಂದ ಮನೆಗೆ ಮರಳಿ ಬಾರದೆ ಕಾಣೆಯಾಗಿತ್ತು. ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಮೂರು ದಿನಗಳ ನಂತರ ದೇಹದ ಎಡಭಾಗ ಸಂಪೂರ್ಣ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ಆ್ಯಸಿಡ್ ಸುರಿದಿರಬಹುದು ಎಂದು ಶಂಕಿಸಲಾಗಿದೆ. ಪಶು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದು ಎಮ್ಮೆ ಚೇತರಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Vijayapura ಅಖಂಡ ಜಿಲ್ಲೆಗೆ ಕಾರಜೋಳ ಕೊಡುಗೆ ಏನು?: ಕಾಂಗ್ರೆಸ್ ವಕ್ತಾರ ಗಣಿಹಾರ ಪ್ರಶ್ನೆ