ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…


ಸುಧೀರ್, Jan 28, 2023, 6:15 PM IST

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ದೇಶದಲ್ಲಿ ಹಲವಾರು ಪುರಾಣ ಪ್ರಸಿದ್ಧ ಸ್ಥಳಗಳನ್ನು ಕಾಣಬಹುದಾಗಿದೆ ಒಂದೊಂದು ಸ್ಥಳಗಳು ಅಲ್ಲಿನ ಕಾರಣಿಕಗಳನ್ನು ಹೊಂದಿರುತ್ತವೆ ಜೊತೆಗೆ ಅಷ್ಟೇ ಪಾವಿತ್ರ್ಯತೆಯನ್ನು ಕೂಡಾ ಪಡೆದುಕೊಂಡಿರುತ್ತದೆ. ಕೆಲವೊಂದು ಪುಣ್ಯ ಕ್ಷೇತ್ರಗಳು ಅಲ್ಲಿನ ಪೌರಾಣಿಕ ಹಿನ್ನೆಲೆಯಿಂದಲೇ ಹೆಚ್ಚು ಮಹತ್ವವನ್ನು ಪಡೆದಿರುತ್ತದೆ ಅತಂತದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಒಂದು.

ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಕರಾವಳಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ.

ಇದೊಂದು ಉದ್ಭವ ಶಿವಲಿಂಗದ ನೆಲೆಯಾಗಿದೆ ಅಂದ ಹಾಗೆ ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶ ಸಿಗುವುದು ವರ್ಷದಲ್ಲಿ ಆರು ತಿಂಗಳು ಮಾತ್ರ ಉಳಿದ ಆರು ತಿಂಗಳು ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಋಷಿಮುನಿಗಳು ಈ ಗುಹೆಯೊಳಗೆ ತಪಸ್ಸನ್ನು ಮಾಡುತ್ತಿರುತ್ತಾರೆ ಎಂಬುದು ಪ್ರತೀತಿ.

ಈ ಗುಹೆಯನ್ನು ನೋಡುವಾಗ ದೈತ್ಯಾಕಾರದ ಮೊಸಳೆಯೊಂದು ಬಾಯ್ತೆರೆದು ನಿಂತ ರೀತಿಯಲ್ಲಿ ಗೋಚರಿಸುತ್ತದೆ, ಅಲ್ಲದೆ ಈ ಗುಹೆ ಕಾಡುಪ್ರಾಣಿಗಳ ಆವಾಸಸ್ಥಾನವಾಗಿದೆ ಎಂದು ಹೇಳಲಾಗುತ್ತಿದೆ ಅದಕ್ಕೆ ಪ್ರತೀತಿ ಎಂಬಂತೆ ಹಾವು, ಕಾಡುಹಂದಿ, ಬಾವಲಿಗಳು ಇಲ್ಲಿ ಕಾಣಸಿಗುತ್ತವೆ.

ಈ ನೆಲ್ಲಿತೀರ್ಥದಲ್ಲಿರುವ ಶಿವ ಲಿಂಗಕ್ಕೆ ಸೋಮನಾಥೇಶ್ವರ ಎಂಬ ಹೆಸರಿದೆ ಈ ಶಿವಲಿಂಗವನ್ನು ತಲುಪಬೇಕಾದರೆ ಗುಹೆಯೊಳಗೆ ಸುಮಾರು 200 ಮೀಟರ್ ದೂರ ಸಾಗಬೇಕು ಕೆಲವೊಂದು ಕಡೆ ತೆವಳಿಕೊಂಡು ಸಾಗಬೇಕಾಗುತ್ತದೆ. ಹೀಗೆ ಸಾಗಿದಾಗ ಸೋಮನಾಥೇಶ್ವರನ ಉದ್ಭವ ಲಿಂಗದ ದರ್ಶನವಾಗುತ್ತದೆ.

ಕೆರೆಯಲ್ಲಿ ಸ್ನಾನಮಾಡಿ ದೇವರ ದರ್ಶನಕ್ಕೆ ಅವಕಾಶ
ಶಿವಲಿಂಗದ ದರ್ಶನ ಪಡೆಯಲು ಬರುವ ಭಕ್ತರು ಗುಹೆಯ ಹೊರಭಾಗದಲ್ಲಿರುವ ನಾಗಪ್ಪ ಕೆರೆಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಗುಹೆಯನ್ನು ಪ್ರವೇಶಿಸಬೇಕು ಎಂಬುದು ಇಲ್ಲಿನ ಪ್ರತೀತಿ, ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬರುವ ಸಂದರ್ಭ ಒಂದು ಜೊತೆ ಬಟ್ಟೆಯನ್ನು ತರಬೇಕಾಗುತ್ತದೆ.

ಕಿರಿದಾದ ಗುಹೆ :
ಗುಹೆಯು ಸುಮಾರು ಇನ್ನೂರು ಮೀಟರ್ ದೂರ ಇರುವುದರಿಂದ ಕೆಲವೊಂದು ಕಡೆ ತುಂಬಾ ಕಿರಿದಾಗಿದೆ ಇಲ್ಲಿ ಮಂಡಿಯೂರಿ ಮುಂದೆ ಸಾಗಬೇಕಾಗುತ್ತದೆ, ಅಲ್ಲದೆ ಬೆಳಕು ಇಲ್ಲದಿರುವುದರಿಂದ ಬೆಳಕಿನ ವ್ಯವಸ್ಥೆ (ಟಾರ್ಚ್ ಅಥವಾ ದೊಂದಿ) ಮಾಡಿಕೊಂಡು ಸಾಗಬೇಕಾಗುತ್ತದೆ.

ನೆಲ್ಲಿತೀರ್ಥ ಹೆಸರು ಬಂದದ್ದು ಹೀಗೆ :
ಗುಹೆಯು ಕೆಂಪು ಕಲ್ಲಿನಿಂದ ಆವರಿಸಿದ್ದು ಒಳ ಪ್ರವೇಶಿಸಿದಂತೆ ಕಲ್ಲಿನ ಸಂದುಗಳಲ್ಲಿ ನೆಲ್ಲಿಕಾಯಿ ಆಕಾರದಲ್ಲಿ ನೀರಿನ ಹನಿಗಳು ಜಿನುಗುತ್ತಿರುತ್ತವೆ ಹಾಗಾಗಿ ಈ ಪ್ರಸಿದ್ಧ ಸ್ಥಳಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.

ಈ ಶಿವಲಿಂಗದ ಸುತ್ತಲೂ ಸದಾ ನೀರು ಹರಿಯುತ್ತಿರುತ್ತದೆ ಇದನ್ನು ಉದ್ಭವ ಗಂಗೆ ಎಂದು ಕರೆಯುತ್ತಾರೆ ಅಲ್ಲದೆ ಇಲ್ಲಿಗೆ ಭೇಟಿ ನೀಡಿದ ಭಕ್ತರು ಈ ನೀರಿನಿಂದಲೇ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಜೊತೆಗೆ ತೀರ್ಥ ರೂಪದಲ್ಲಿ ಈ ನೀರನ್ನು ಕೊಂಡೊಯ್ಯುತ್ತಾರೆ ಅಷ್ಟು ಮಾತ್ರವಲ್ಲದೆ ಇಲ್ಲಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಂಡರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಕಾಶಿಗೆ ಸಂಪರ್ಕ ಹೊಂದುವ ಗುಹೆ
ಅಂದಹಾಗೆ ಈ ಗುಹೆಯಲ್ಲಿ ಭಕ್ತರಿಗೆ ಶಿವ ಲಿಂಗದ ಬಳಿ ತನಕ ಹೋಗಲು ಅವಕಾಶ ಮಾಡಲಾಗಿದೆ ಪುರಾಣದ ಪ್ರಕಾರ ಈ ಗುಹೆಯು ಮುಂದುವರೆದು ಕಾಶಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ. ಮುಂದೆ ಈ ಗುಹೆಯು ತೀರಾ ಕಡಿದಾದ ರೀತಿಯಲ್ಲಿ ಗೋಚರಿಸುತ್ತಿದ್ದು ಶಿವಲಿಂಗದಿಂದ ನಂತರ ಗುಹೆಯೊಳಗೆ ಮುಂದುವರೆಯಲು ಯಾರಿಗೂ ಅವಕಾಶವಿಲ್ಲ.

ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ
ಸ್ಥಳ ಪುರಾಣದ ಪ್ರಕಾರ ಈ ಗುಹೆಯು ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾಗಿತ್ತಂತೆ ಈ ನೆಲ್ಲಿತೀರ್ಥಕ್ಕೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಅನನ್ಯವಾದ ಸಂಬಂಧವಿದೆಯಂತೆ ಜಾಬಾಲಿ ಮಹರ್ಷಿಯ ಬಳಿ ಅರುಣಾಸುರನೆಂಬ ರಾಕ್ಷಸ ಗಾಯತ್ರಿ ಮಂತ್ರ ಕಲಿಯುತ್ತಿದ್ದನಂತೆ ಆದರೆ ಅರುಣಾಸುರ ಕಲಿಯುತ್ತಿರುವ ಗಾಯತ್ರಿ ಮಂತ್ರವನ್ನು ಜನರ ಒಳಿತಿಗಾಗಿ ಬಳಸುವ ಬದಲು ಗಾಯತ್ರಿ ಮಂತ್ರದ ಶಕ್ತಿಯಿಂದ ರಾಕ್ಷಸ ಅರುಣಾಸುರ ಜಗತ್ತಿನಲ್ಲಿ ಪರಾಕ್ರಮವನ್ನು ಮೆರೆಯಲ್ಲು ಆರಂಭಿಸುತ್ತಾನೆ. ಜಾಬಾಲಿ ಮುನಿಗಳು ಅರುಣಾಸುರನ ಪರಾಕ್ರಮವನ್ನು ತಡೆಯಲಾರದೆ ನೆಲ್ಲಿತೀರ್ಥದಲ್ಲಿರುವ ಗುಹೆಯೊಳಗೆ ಆದಿಶಕ್ತಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾರೆ. ಈ ಜಾಬಾಲಿ ಮಹರ್ಷಿಯ ತಪಸ್ಸಿಗೆ ಒಲಿದ ಆದಿಶಕ್ತಿಯು ದುಂಬಿಯ ಆಕಾರದಲ್ಲಿ ಅರುಣಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿಯಾಗಿ ಅವತರಿಸಿ ಕಟೀಲಿನಲ್ಲಿ ನೆಲೆನಿಲ್ಲುತ್ತಾಳೆ.

ಕಟೀಲಿನನಲ್ಲಿರುವ ನಂದಿನಿ ಹೊಳೆಯೇ ಈ ನೆಲ್ಲಿತೀರ್ಥ ಗುಹಾಲಯದಲ್ಲಿ ಅಂತರಗಂಗೆಯಾಗಿ ಹರಿಯುತ್ತಿದ್ದಾಳೆ ಎಂಬುದು ಪ್ರತೀತಿ, ನೆಲ್ಲಿತೀರ್ಥದಲ್ಲಿರುವ ಇನ್ನೊಂದು ಗುಹೆ ಕಟೀಲಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಜಾಬಾಲಿ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವನ್ನು ಇಲ್ಲಿಗೆ ಭೇಟಿ ನೀಡಿದ ಭಕ್ತರು ಕಾಣಬಹುದು.

ಭಕ್ತರಿಗೆ ಗುಹೆ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೂ ಅವಕಾಶವಿದೆ.

ಭಗವಾನ್‌ ಈಶ್ವರ (ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇವೆ. ಇದರ ಜೊತೆಯಲ್ಲಿ ದೇವಾಲಯದ ಪಕ್ಕದಲ್ಲೇ ಪ್ರಮುಖ ದೈವಗಳಾದ ಪಿಲಿಚಾಮುಂಡಿ, ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲಕರ ದೇವಾಲಯವಿದೆ.

ಗುಹಾ ದೇವಾಲಯವನ್ನು ಪ್ರತೀ ವರ್ಷ ತುಲಾ ಸಂಕ್ರಮಣದಂದು ತೆರೆಯಲಾಗುತ್ತದೆ ಅಲ್ಲಿಂದ ಆರು ತಿಂಗಳುಗಳ ಕಾಲ ಭಕ್ತರಿಗೆ ಗುಹೆ ಪ್ರವೇಶಿಸಲು ಅವಕಾಶವಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ.

ದೇವಳಕ್ಕೆ ಮಾರ್ಗ:
ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದಲ್ಲಿದೆ ಗುಹಾಂತರ ದೇವಾಲಯ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದವಿನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವನ್ನು ತಲುಪಬಹುದು. ಕಟೀಲಿನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್‌ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು. ಉಡುಪಿಯಿಂದ ಬರುವವರು ಮೂಲ್ಕಿ, ಕಿನ್ನಿಗೋಳಿ ನಿಡ್ಡೋಡಿಯಿಂದಾಗಿ ನೆಲ್ಲಿತೀರ್ಥಕ್ಕೆ ತಲುಪಬಹುದು.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.