‘Spy’ Pigeon; ಕಾಲಿನಲ್ಲಿ ಕ್ಯಾಮರಾ, ಮೈಕ್ರೋಚಿಪ್…ಬೋಟ್ ನಲ್ಲಿ “ಗೂಢಚಾರಿ” ಪಾರಿವಾಳ ಪತ್ತೆ!
ಕರಾವಳಿ ಪೊಲೀಸರಿಗೆ ಪಾರಿವಾಳವನ್ನು ಹಸ್ತಾಂತರಿಸಲಾಗಿತ್ತು
Team Udayavani, Mar 9, 2023, 4:44 PM IST
ಭುವನೇಶ್ವರ: ರಾಜ ಮಹಾರಾಜರ ಕಾಲದಲ್ಲಿ ಕೋಟೆಗಳನ್ನು ಏರಲು ಉಡವನ್ನು ಬಳಕೆ ಮಾಡೋದು, ಬೇಹುಗಾರಿಕೆ ನಡೆಸಲು ಪಾರಿವಾಳಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ಕೇಳಿದ್ದೀರಿ. ಅದೇ ರೀತಿ ಒಡಿಶಾದ ಜಗತ್ ಸಿಂಗ್ ಪುರ್ ಜಿಲ್ಲೆಯಲ್ಲಿ ಪುಟ್ಟ ಕ್ಯಾಮರಾ ಮತ್ತು ಮೈಕ್ರೋಚಿಪ್ ಅಳವಡಿಸಿದ ಗೂಢಚಾರಿ(Spy Pigeon) ಪಾರಿವಾಳವೊಂದು ಪತ್ತೆಯಾಗಿದೆ.
ಇದನ್ನೂ ಓದಿ:ಹೋಳಿ ಬಣ್ಣ ತೊಳೆಯಲು ಬಾತ್ ರೂಮ್ ಒಳಗೆ ಹೋದ ದಂಪತಿ ಉಸಿರುಗಟ್ಟಿ ಮೃತ್ಯು: ಕಾರಣವೇನು?
ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ನಲ್ಲಿ ಈ ಪಾರಿವಾಳ ಪತ್ತೆಯಾಗಿದ್ದು, ಅದರ ಕಾಲಿನಲ್ಲಿ ಪುಟ್ಟ ಕ್ಯಾಮರಾ ಮತ್ತು ಮೈಕ್ರೋಚಿಪ್ ಅಳವಡಿಸಿರುವುದನ್ನು ಮೀನುಗಾರರು ಗಮನಿಸಿದ್ದರು.
ಮಾರ್ಚ್ 7ರಂದು ಪರದೀಪ್ ಕರಾವಳಿ ಪೊಲೀಸರಿಗೆ ಪಾರಿವಾಳವನ್ನು ಹಸ್ತಾಂತರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಪಾರಿವಾಳವನ್ನು(Spy Pigeon) ಗೂಢಚರ್ಯೆ ನಡೆಸಲು ಬಳಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಷ್ಟೇ ಅಲ್ಲ ಪಾರಿವಾಳದ ರೆಕ್ಕೆಗಳ ಮೇಲೆ ಅಪರಿಚಿತ ಭಾಷೆಯಲ್ಲಿ ಏನನ್ನೊ ಬರೆಯಲಾಗಿದೆ. ಪಾರಿವಾಳದ ಕಾಲಿಗೆ ಕಟ್ಟಿರುವ ಕ್ಯಾಮರಾ, ಮೈಕ್ರೋಚಿಪ್ ಅನ್ನು ಸೈಬರ್ ತಜ್ಞರಿಗೆ ನೀಡಲಾಗುವುದು ಎಂದು ಪರಾದೀಪ್ ಎಎಸ್ ಪಿ ನಿಮಾಮಿ ಚರಣ್ ಸೇಠಿ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸಿದ್ದು, ಅದರ ಕಾಲಿಗೆ ಕಟ್ಟಿರುವ ಕ್ಯಾಮರಾ ಮತ್ತು ಮೈಕ್ರೋಚಿಪ್ ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಾಗಿದೆ ಎಂದು ಜಗತ್ ಪುರ್ ಸಿಂಗ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಆರ್ ಆರ್ ಪಿಟಿಐಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪಾರಿವಾಳದ ರೆಕ್ಕೆಗಳಲ್ಲಿ ಯಾವ ಭಾಷೆಯಲ್ಲಿ ಏನು ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ತಜ್ಞರ ನೆರವು ಪಡೆಯಲಾಗಿದ್ದು, ಎಲ್ಲಾ ಮಾಹಿತಿ ಬಂದ ನಂತರ ಗೂಢಚರ್ಯೆ ಪಾರಿವಾಳದ ಬಗ್ಗೆ ಇನ್ನಷ್ಟು ವಿವರ ಲಭ್ಯವಾಗಲಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ