ಉದ್ಯೋಗಕ್ಕೆ ಆನ್ ಲೈನ್ ಬಲ : ಜಾಬ್ ಪೋಸ್ಟಿಂಗ್ ನಲ್ಲಿ ಹೆಚ್ಚುತ್ತಿದೆ Online ಟ್ರೆಂಡ್
Team Udayavani, Jun 16, 2021, 7:30 AM IST
ಹೊಸದಿಲ್ಲಿ : ಕೊರೊನಾ ನಡುವೆಯೂ ದೇಶದ ಉದ್ಯೋಗ ಮಾರುಕಟ್ಟೆಗೆ ಆನ್ ಲೈನ್ ಜಾಬ್ ಪೋಸ್ಟಿಂಗ್ ಟ್ರೆಂಡ್ ಹೊಸ ಭರವಸೆ ನೀಡಿದೆ. ಬ್ಯಾಂಕ್ ಗಳು ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದ್ದು, ಇದು ದೇಶದ ಆರ್ಥಿಕತೆಗೆ ಹೊಸ ಉತ್ಸಾಹ ತುಂಬುವ ನಿರೀಕ್ಷೆ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಉದ್ಯೋಗ ಭರ್ತಿ ಮಾಡಿಕೊಳ್ಳಲಾಗಿದೆ.
ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಶೇ. 56ರಷ್ಟು ಉದ್ಯಮಗಳು ಆನ್ಲೈನ್ ಉದ್ಯೋಗಕ್ಕೆ ಒತ್ತು ನೀಡಿವೆ ಎಂದು ಮಾನ್ ಸ್ಟರ್ ಎಂಪ್ಲಾಯ್ ಮೆಂಟ್ ಇಂಡೆಕ್ಸ್ ಹೇಳಿದೆ.
ಮುಂಚೂಣಿಯಲ್ಲಿ ಬೆಂಗಳೂರು
ಬೆಂಗಳೂರಿನಲ್ಲಿ ದೇಶದಲ್ಲೇ ಹೆಚ್ಚು ಉದ್ಯೋಗ ಭರ್ತಿಯಾಗಿದೆ. ಇಲ್ಲಿನ ಐಟಿ ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ಉದ್ಯೋಗಗಳಲ್ಲಿ ಶೇ. 67ರಷ್ಟು ಪ್ರಗತಿ ಕಂಡುಬಂದಿದೆ. ಹಾಗೆಯೇ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲೂ ಹೆಚ್ಚಿನ ಪ್ರಗತಿಯಾಗಿದೆ.
ಎಲ್ಲ ನಗರಗಳಲ್ಲಿ ಹಾರ್ಡ್ವೇರ್, ಸಾಫ್ಟ್ ವೇರ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಇಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಶೇ. 79ರಷ್ಟು ಪ್ರಗತಿಕಂಡಿದೆ.
ಪ್ರವಾಸೋದ್ಯಮಕ್ಕೆ ಹೊಡೆತ
ಕಚೇರಿ ಬಳಕೆ ವಸ್ತುಗಳು/ ಆಟೋಮೇಶನ್, ಆರೋಗ್ಯ ಸೇವೆ, ಬಯೋಟೆಕ್ನಾಲಜಿ, ಜೀವ ವಿಜ್ಞಾನ ಮತ್ತು ಫಾರ್ಮಾಸುಟಿಕಲ್ ನಲ್ಲೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ. ಆದರೆ ಟ್ರಾವೆಲ್ ಮತ್ತು ಟೂರಿಸಂನಲ್ಲಿ ಶೇ. 13, ಆಮದು/ ರಫ್ತು ವಲಯದಲ್ಲಿ ಶೇ. 11 ಮತ್ತು ಪ್ರಿಂಟಿಂಗ್ ಹಾಗೂ ಪ್ಯಾಕೇಜಿಂಗ್ ನಲ್ಲಿ ಶೇ. 8ರಷ್ಟು ಇಳಿಕೆಯಾಗಿದೆ.
ನಿರುದ್ಯೋಗ ಪ್ರಮಾಣ ಇಳಿಮುಖ
ದೇಶಾದ್ಯಂತ ಕೊರೊನಾ ಲಾಕ್ ಡೌನ್ ತೆರವು ಮತ್ತು ಮುಂಗಾರು ಮಳೆ ಆಗಮನವಾಗುತ್ತಿದ್ದಂತೆ ನಿರುದ್ಯೋಗ ಪ್ರಮಾಣವೂ ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐ ಇ) ಪ್ರಕಾರ, ಜೂ. 13ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ. 8.7ಕ್ಕೆ ಇಳಿಕೆಯಾಗಿದೆ. ಇದು ಜೂ. 6ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ.13ರಷ್ಟಿತ್ತು.
ನಗರದ ನಿರುದ್ಯೋಗ ಪ್ರಮಾಣ ಶೇ. 14.4ರಿಂದ ಶೇ. 9.7ಕ್ಕೆ ಇಳಿಕೆಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ. 13.3ರಿಂದ ಶೇ. 8.2ರಷ್ಟಕ್ಕೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ