ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ
Team Udayavani, May 15, 2022, 10:52 PM IST
ಹೊಸದಿಲ್ಲಿ: ಥಾಮಸ್ ಕಪ್ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಂಕಾಕ್ನಿಂದ ಭಾರತಕ್ಕೆ ಮರಳಿದ ಬಳಿಕ ತನ್ನ ನಿವಾಸಕ್ಕೆ ಆಗಮಿಸುವಂತೆ ತಂಡದ ಸದಸ್ಯರಿಗೆ ಆಹ್ವಾನ ನೀಡಿದರು.
ಆ್ಯತ್ಲೀಟ್ಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರಧಾನಿ ಎಂದಿಗೂ ಮರೆಯುವುದಿಲ್ಲ. ರವಿವಾರ ಕೂಡ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ರಲ್ಲದೇ ತವರಿಗೆ ಮರಳಿದ ಬಳಿಕ ಸಂವಾದ ನಡೆಸಲು ತನ್ನ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು.
ಪ್ರಧಾನಿ ಜತೆ ಮೊದಲು ಕಿದಂಬಿ ಶ್ರೀಕಾಂತ್ ಮಾತನಾಡಿದರು. ಆಬಳಿಕ ಲಕ್ಷ್ಯ ಸೇನ್, ಪ್ರಣಯ್ ಮತ್ತು ಚಿರಾಗ್ ಶೆಟ್ಟಿ ಜತೆ ಮಾತನಾಡಿದರು. ನೀವೆಲ್ಲರೂ ಸೇರಿ ಈ ಸಾಧನೆ ಮಾಡಿದ್ದೀರಿ. ಇದೊಂದು ಭಾರತದ ಅದ್ಭುತ ಗೆಲುವುಗಳಲ್ಲಿ ಒಂದಾಗಿದೆ ಎಂದವರು ಈ ವೇಳೆ ತಿಳಿಸಿದರು. ಆಟಗಾರರು ವಿಶ್ವಖ್ಯಾತಿಯ ಸಾಧನೆ ಮಾಡಲು ಪ್ರೇರೆಪಿಸಿದ ಹೆತ್ತವರಿಗೂ ಕೂಡ ಈ ಸಂದರ್ಭ ಮೋದಿ ಅವರು ಅಭಿನಂದನೆ ಸಲ್ಲಿಸಿದರು.
ರಾಷ್ಟ್ರಪತಿ ಕೋವಿಂದ್ ಅಭಿನಂದನೆ
ಬ್ಯಾಡ್ಮಿಂಟನ್ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ತಂಡವು ಇತಿಹಾಸ ನಿರ್ಮಿಸಿದೆ. ಭವಿಷ್ಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಇದು ಪ್ರೇರಣೆಯಾಗಲಿ. ಚಾಂಪಿಯನ್ನರ ಸಾಧನೆಯಿಂದ ಭಾರತ ಹೆಮ್ಮೆಪಡುವಂತೆ ಆಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತೀಯ ತಂಡಕ್ಕೆ ಅಭಿನಂದನೆ ಗಳು. ತಂಡವು ಬಲಿಷ್ಠ ತಂಡಗಳಾದ ಮಲೇಶ್ಯ, ಡೆನ್ಮಾರ್ಕ್ ಮತ್ತು ಇಂಡೋ ನೇಶ್ಯ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಸಾಧಾರಣ ಸಾಧನೆ ಮಾಡಿದೆ ಎಂದು ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕುರ್ ತಿಳಿಸಿದ್ದಾರೆ.
ಇದೊಂದು ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೆ ಐತಿಹಾಸಿಕ ದಿನ ವಾಗಿದೆ. ಬ್ಯಾಡ್ಮಿಂಟನ್ ತಂಡದಿಂದ ಅಸಾಮಾನ್ಯ ಸಾಧನೆ ದಾಖಲಾಗಿದೆ. ಹಲವು ಬಾರಿ ಕಠಿನ ಪರಿಸ್ಥಿತಿ ಎದು ರಿಸಿದರೂ ವಿಚಲಿತರಾಗದೇ ಅದ್ಭುತ ನಿರ್ವಹಣೆ ನೀಡಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಆಟಗಾರರಿಗೆ ಮತ್ತು ತರಬೇತುದಾರರಿಗೆ ಅಭಿನಂದನೆಗಳು. ನೀವೆಲ್ಲರೂ ಚಾಂಪಿಯನ್ಸ್ ಎಂದು ಒಲಿಂಪಿಕ್ ಚಿನ್ನ ಗೆದ್ದಿರುವ ಶೂಟರ್ ಅಭಿನವ್ ಬಿಂದ್ರಾ ಹೇಳಿದ್ದಾರೆ.
ಇದೊಂದು ಭಾರತೀಯ ಬ್ಯಾಡ್ಮಿಂಟನ್ ರಂಗದ ಐತಿಹಾಸಿಕ ಕ್ಷಣ ಮತ್ತು ಸಾಧನೆ ಯಾಗಿದೆ. ಭಾರತೀಯ ತಂಡಕ್ಕೆ ಅಭಿನಂದನೆಗಳು ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಯು ಹೊಸ ಎತ್ತರಕ್ಕೆ ಏರುತ್ತಿದೆ. 73 ವರ್ಷಗಳ ಥಾಮಸ್ ಕಪ್ ತಂಡ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆಗಳು. ನಿಮ್ಮಿಂದ ನಾವೆಲ್ಲರೂ ಹೆಮ್ಮೆಪಡುವಂತಾಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಕೂಡ ಜನಪ್ರಿಯವಾಗಲಿ
ಬ್ಯಾಂಕಾಕ್, ಮೇ 15: ಭಾರತೀಯ ತಂಡವು 1983ರ ವಿಶ್ವಕಪ್ ಗೆದ್ದಾಗ ದೇಶವೂ ಕ್ರಿಕೆಟ್ಗೆ ಯಾವ ರೀತಿಯ ಪ್ರೋತ್ಸಾಹ ನೀಡಿತ್ತೋ ಆದೇ ರೀತಿ ಥಾಮಸ್ ಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೂ ಪ್ರೋತ್ಸಾಹ ನೀಡಲಿ ಎಂದು ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ವಿಮಲ್ ಕುಮಾರ್ ಹಾರೈಸಿದ್ದಾರೆ. 1983ರಲ್ಲಿ ಭರಾತ ವಿಶ್ವಕಪ್ ಗೆದ್ದಾಗ ದೇಶ ದೆಲ್ಲಡೇ ವಿಜಯೋ ತ್ಸವ ಆಚರಿಸಲಾಗಿತ್ತು. ಕ್ರಿಕೆಟ್ ಜನಪ್ರಿಯ ಕ್ರೀಡೆ ಯಾಗಿರ ಬಹುದು. ಆದರೆ ಬ್ಯಾಡ್ಮಿಂಟನ್ ಆಟಗಾರರ ಈ ಸಾಧನೆಯಿಂದ ಬ್ಯಾಡ್ಮಿಂಟನ್ ಕ್ರೀಡೆಯೂ ಜನಪ್ರಿಯವಾಗಲಿ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ