Viral Video: ಮೆಕ್ಯಾನಿಕ್‌, ಡೆಲಿವರಿ ಬಾಯ್‌ ಆಯ್ತು…ಈಗ ರೈಲ್ವೇ ಸ್ಟೇಷನ್‌ ಕೂಲಿಯಾದ ರಾಗಾ!


Team Udayavani, Sep 21, 2023, 6:57 PM IST

RAGA COOLIE

ನವದೆಹಲಿ: ತಳ ಮಟ್ಟದ ಜನರನ್ನು ತಲುಪುವ ಸಲುವಾಗಿ ಬೇರೆ ಬೇರೆ ವರ್ಗದ ಕಾರ್ಮಿಕರೊಂದಿಗೆ ಬೆರೆತು ಗಮನ ಸೆಳೆದಿರುವ ಕಾಂಗ್ರೆಸ್‌ ಯುವರಾಜ ಈಗ ಹೊಸ ವೇಷ ಧರಿಸಿದ್ದಾರೆ. ಈ ಬಾರಿ ಅವರು ದೆಹಲಿಯ ಆನಂದ್‌ ವಿಹಾರ್‌ ರೈಲ್ವೇ ಸ್ಟೇಷನ್‌ನಲ್ಲಿ ಕೆಂಪು ಅಂಗಿ ಧರಿಸಿ ಕೂಲಿಯಾಗಿ ಕಾಣಿಸಿಕೊಂಡಿದ್ದಾರೆ. ತೋಳಿಗೆ ಬ್ಯಾಜ್‌ ಒಂದನ್ನು ಕಟ್ಟಿಕೊಂಡು ತಲೆಯ ಮೇಲೊಂದು ಸೂಟ್‌ಕೇಸ್‌ ಇಟ್ಟು ಥೇಟ್‌ ಕೂಲಿಯ ರೀತಿಯೇ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಹುಲ್‌ ಗಾಂಧಿ ಅವರ ವಿಡಿಯೋ ಈಗ ಫುಲ್‌ ವೈರಲ್‌ ಆಗಿದೆ.

ರೈಲ್ವೇ ನಿಲ್ದಾಣದ ಕೂಲಿಗಳ ಜೊತೆಗೆ ಬೆರೆತು ಅವರೊಂದಿಗೆ ರಾಹುಲ್‌ ಗಾಂಧಿ ಸಂವಾದ ನಡೆಸಿದ್ದಾರೆ. ಕೂಲಿಯೊಬ್ಬ ರಾಹುಲ್‌ ಗಾಂಧಿ ಅವರ ತೋಳಿಗೆ ಬ್ಯಾಜ್‌ ಒಂದನ್ನು ಕಟ್ಟುತ್ತಿರುವ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರೈಲ್ವೇ ನಿಲ್ದಾಣದಲ್ಲಿ ದುಡಿಯುತ್ತಿರುವ ಕೂಲಿಗಳ ಸಂಕಷ್ಟ ಅರಿಯಲು ರಾಹುಲ್‌ ಗಾಂಧಿ ದೆಹಲಿಯ ಆನಂದ್‌ ವಿಹಾರ್‌ ರೈಲ್ವೇ ಸ್ಟೇಷನ್‌ಗೆ ತೆರಳಿದ್ದರು. ಈ ವೇಳೆ ಕೂಲಿಗಳ ಜೊತೆ ಸಂವಾದ ನಡೆಸಿದ ಅವರೊಂದಿಗೆ ಕೂಲಿಗಳು ತಾವು ಎದುರಿಸುತ್ತಿರುವ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.

“ಜನರ ನಾಯಕ ರಾಹುಲ್‌ ಗಾಂಧಿ ಅವರು ಇಂದು ದೆಹಲಿಯ ಆನಂದ್‌ ವಿಹಾರ್‌ ರೈಲ್ವೇ ಸ್ಟೇಷನ್‌ನಲ್ಲಿ ದುಡಿಯುತ್ತಿರುವ ಕೂಲಿಗಳ ಜೊತೆ ಬೆರೆತು ಅವರ ಸಂಕಷ್ಟ ಆಲಿಸಿದ್ದಾರೆ. ಇತ್ತೀಚೆಗೆ ರೈಲ್ವೇ ನಿಲ್ದಾಣದಲ್ಲಿ ದುಡಿಯುತ್ತಿರುವ ಕೂಲಿಗಳು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಅವರೊಂದಿಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ರಾಹುಲ್‌ ಗಾಂಧಿ ಸ್ವತಃ ಇಂದು ರೈಲ್ವೇ ಸ್ಟೇಷನ್‌ಗೆ ಆಗಮಿಸಿ ಕೂಲಿ ಜನರ ಸಂಕಷ್ಟ ಆಲಿಸಿದ್ದಾರೆ” ಎಂದು ಕಾಂಗ್ರೆಸ್‌ನ ಅಧಿಕೃತ `X’ ಖಾತೆ ಟ್ವೀಟ್‌ ಮಾಡಿದೆ.

ಭಾರತದ ತಳಮಟ್ಟದ ಜನರನ್ನು ತಲುಪುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಕಾರ್ಮಿಕರನ್ನು ರಾಹುಲ್‌ ಗಾಂಧಿ ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್‌ಗಳ ಜೊತೆ ಬೆರೆತಿದ್ದ ರಾಗಾ ಬಳಿಕ ಅವರೊಂದಿಗೆ ಸ್ಕೂಟರ್‌ನಲ್ಲಿ ಸುತ್ತಿದ್ದರು. ದೆಹಲಿಯ ಆಜಾದ್‌ಪುರ್‌ ಮಂದಿಯ ಗಲ್ಲಿಗಲ್ಲಿಗಳಲ್ಲಿ ಸುತ್ತಾಡಿ ಮೆಕ್ಯಾನಿಕ್‌ಗಳು, ಕಾರ್ಮಿಕರು, ವರ್ತಕರ ಜೊತೆಗೂ ಸಂವಾದ ನಡೆಸಿದ್ದರು.

ಇದನ್ನೂ ಓದಿFugitive economic offender: ಚೋಕ್ಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

 

 

 

 

 

 

 

ಟಾಪ್ ನ್ಯೂಸ್

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

adhar

Aadhaar: ಬೆರಳಿಲ್ಲವೇ? ಕಣ್ಣಿಂದಲೇ ಆಧಾರ್‌ ನೋಂದಣಿ

kidney

ತಾಂಜೇನಿಯಾ-ಭಾರತದ ಕುಟುಂಬದ ನಡುವೆ ಹೊಸ ಬಂಧ: ‌ಇಬ್ಬರ ಜೀವ ಉಳಿಸಿದ ಕಿಡ್ನಿ ಸ್ವ್ಯಾಪಿಂಗ್‌!

climate change

Climate: ಹವಾಮಾನ ರಕ್ಷಣೆಗೆ 100 ಬಿಲಿಯನ್‌ ಡಾಲರ್‌ ಮೀಸಲು ವಾಗ್ಧಾನಕ್ಕೆ ಭಾರತ ಆಕ್ಷೇಪ

narayan murthy

Infosys: 90 ಗಂಟೆ ದುಡಿಯುತ್ತಿದ್ದೆ- ಇನ್ಫೋಸಿಸ್‌ ನಾರಾಯಣ ಮೂರ್ತಿ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ELEPHANT HINDU

Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

beml

BEML: ಬೆಮೆಲ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.