8ರ ಹರೆಯದ ಬಾಲಕನ ಸಾಹಸ: ನದಿಯಲ್ಲಿ ಮುಳುಗುತ್ತಿದ್ದ 11 ವರ್ಷದ ಬಾಲಕನ ರಕ್ಷಣೆ
Team Udayavani, Feb 9, 2023, 6:50 AM IST
ಮುಳ್ಳೇರಿಯ: ಸ್ನಾನಕ್ಕೆಂದು ಹೊಳೆಗಿಳಿದು ಅಪಾಯಕ್ಕೆ ಸಿಲುಕಿದ್ದ 11ರ ಹರೆಯದ ಬಾಲಕನನ್ನು 8 ವರ್ಷ ವಯಸ್ಸಿನ ಬಾಲಕ ರಕ್ಷಿಸಿದ ಘಟನೆ ನಡೆದಿದೆ.
ಸ್ಥಳೀಯ ಬಾಲಕನೊಬ್ಬ ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ. ಆಗ ಆತನ ಜತೆಗಿದ್ದ ಎಂಟರ ಹರೆಯದ ಬಾಲಕ ಪಳ್ಳಂಗೋಡಿನ ಇಬ್ರಾಹಿಂ ನಈಮಿ-ಬುಶ್ರಾ ದಂಪತಿಯ ಪುತ್ರ ಸ್ಥಳೀಯ ಎಲ್ಪಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಹಿಬಾತುಲ್ಲ (8) ಸಾಹಸದಿಂದ ಮೇಲಕ್ಕೆತ್ತಿ ರಕ್ಷಿಸಿದನು.
ಬಾಲಕನ ಸಾಹಸ ಮತ್ತು ಸಕಾಲಿಕ ಕಾರ್ಯಾಚರಣೆಯಿಂದ ಇನ್ನೊಬ್ಬ ಬಾಲಕನ ಜೀವ ಉಳಿಸಿದ ಘಟನೆಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ. ಸಾಹಸಿ ಬಾಲಕನನ್ನು ಎಸ್.ಜೆ.ಎಂ. ಜಿಲ್ಲಾ ಸಮಿತಿ ಅಭಿನಂದಿಸಿದೆ. ಕೇರಳ ಮುಸ್ಲಿಂ ಜಮಾಯತ್, ಎಸ್.ವೈ.ಎಸ್., ಎಸ್ಎಸ್ಎಫ್ ಪಳ್ಳಂಗೋಡು ಘಟಕ ವತಿಯಿಂದ ಅಭಿನಂದನೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ