
ಅಭಿಮಾನಿಯ ಔದಾರ್ಯ! ಸಂಜಯ್ ದತ್ ಹೆಸರಿಗೆ ಕೋಟ್ಯಂತರ ರೂ.ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ
ಕೆಜಿಎಫ್ 2 ಭಾಗದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಕಮಾಲ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
Team Udayavani, Jan 25, 2023, 6:04 PM IST

ಸಿನಿಮಾ ನಟ, ನಟಿಯರ ಅಭಿಮಾನಿಗಳು ಹುಟ್ಟುಹಬ್ಬಕ್ಕೆ, ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿಶಿಷ್ಟವಾದ ಮಾರ್ಗಗಗಳನ್ನು ಅನುಸರಿಸುವ ಮೂಲಕ ಪ್ರಚಾರಗಿಟ್ಟಿಸಿಕೊಳ್ಳುವುದನ್ನು ಕಂಡಿದ್ದೇವೆ. ಅದೇ ರೀತಿ ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ಮಹಿಳಾ ಅಭಿಮಾನಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಬರೆದಿಟ್ಟಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ:
2018ರಲ್ಲಿ ಸಂಜಯ್ ದತ್ ಗೆ ಪೊಲೀಸ್ ಠಾಣೆಯಿಂದ ಕರೆಯೊಂದು ಬಂದಿದ್ದು, ನಿಶಾ ಪಾಟೀಲ್ (65ವರ್ಷ0 ಎಂಬಾಕೆ ಸುಮಾರು 15 ದಿನಗಳ ಹಿಂದೆ ನಿಧನರಾಗಿದ್ದು, ಅವರು ತಮ್ಮೆಲ್ಲಾ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿಟ್ಟಿರುವುದಾಗಿ ಮಾಹಿತಿ ನೀಡಿದ್ದರು!
ತನ್ನ ನೆಚ್ಚಿನ ನಟನಿಗೆ ತನ್ನೆಲ್ಲಾ ಆಸ್ತಿಯ ವಿಲ್ ಬರೆದಿಟ್ಟಿದ್ದು, ಅವೆಲ್ಲವೂ ಸಂಜಯ್ ದತ್ ಗೆ ಸೇರಬೇಕು ಎಂದು ನಿಶಾ ಪಾಟೀಲ್ ಬ್ಯಾಂಕ್ ಗೆ ಹಲವಾರು ಪತ್ರಗಳನ್ನೂ ಬರೆದಿದ್ದರಂತೆ. ನಿಶಾ ಪಾಟೀಲ್ ಚಿನ್ನಾಭರಣ, ಫ್ಲ್ಯಾಟ್ ಸೇರಿದಂತೆ ಬರೋಬ್ಬರಿ ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟಿದ್ದರು.
ಅಭಿಮಾನಿಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆದಿಟ್ಟಿರುವ ವಿಚಾರ ಕೇಳಿ ಶಾಕ್ ಆಗಿತ್ತು ಎಂದು ಸಂಜಯ್ ದತ್ ಹೇಳಿದ್ದು, ನನಗೆ ನಿಶಾ ಪಾಟೀಲ್ ಯಾರೆಂಬುದೇ ಗೊತ್ತಿಲ್ಲ. ಆದರೆ ಅವರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ನನಗೆ ಅವರ ಚಿನ್ನಾಭರಣ, ಆಸ್ತಿ ಯಾವುದು ಬೇಡ ಅವೆಲ್ಲವನ್ನೂ ಅವರ ಮಕ್ಕಳಿಗೆ ವರ್ಗಾಯಿಸಲು ಸಂಜಯ್ ದತ್ ತಿಳಿಸಿದ್ದರು.
ಈ ವಿಚಾರವನ್ನು ಸಂಜಯ್ ದತ್ ಮುಜುಗರದಿಂದಲೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ದತ್ ಕನ್ನಡದ ಕೆಜಿಎಫ್ 2 ಭಾಗದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಕಮಾಲ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್ ರೆಸಿಪಿ…

ಸ್ಕಾಲರ್ಶಿಪ್ಗಾಗಿ ಕ್ರಿಕೆಟ್ ತ್ಯಜಿಸಿ ಜಾವೆಲಿನ್ ತ್ರೋವರ್ ಆದ ಒಲಿಂಪಿಕ್ ಮೆಡಲಿಸ್ಟ್ ಕಥೆ…

ಪ್ರತಿ ವರ್ಷದಂತೆ ಈ ವರ್ಷವೂ ಕೋಟಿ ಕೋಟಿ ಬ್ಯುಸಿನೆಸ್: ʼಸಂಕ್ರಾಂತಿ ಹಬ್ಬʼಕ್ಕೆ ಕಾಲಿವುಡ್, ಟಾಲಿವುಡ್ ಕಿಂಗ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
