Travel;ಜಗತ್ತಿನ ಯಾವುದೇ ದೇಶಕ್ಕೆ ತೆರಳಲು ಈ ಮೂವರು ವ್ಯಕ್ತಿಗಳಿಗೆ Passport ಅಗತ್ಯವಿಲ್ಲ!

ಯಾರು ಆ ಮೂರು ವ್ಯಕ್ತಿಗಳು

Team Udayavani, Jul 8, 2023, 12:38 PM IST

ಜಗತ್ತಿನ ಯಾವುದೇ ದೇಶಕ್ಕೆ ತೆರಳಲು “ಈ ಮೂವರು” ವ್ಯಕ್ತಿಗಳಿಗೆ Passport ಅಗತ್ಯವಿಲ್ಲ!

ಜಗತ್ತಿನಲ್ಲಿ ಪಾಸ್‌ ಪೋರ್ಟ್‌ ವ್ಯವಸ್ಥೆ ಜಾರಿಗೆ ಬಂದು ಒಂದು ಶತಮಾನವೇ ಕಳೆದು ಹೋಗಿದೆ. ಯಾವುದೇ ದೇಶದ ಅಧ್ಯಕ್ಷರಾಗಲಿ ಅಥವಾ ಪ್ರಧಾನಿಯಾಗಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭೇಟಿ ನೀಡಲು Diplomatic ಪಾಸ್‌ ಪೋರ್ಟ್‌ ನ ಅಗತ್ಯವಿದೆ. ಆದರೆ ಜಗತ್ತಿನ ಈ ಮೂರು ವಿಶೇಷ ವ್ಯಕ್ತಿಗಳು ಮಾತ್ರ ಪಾಸ್‌ ಪೋರ್ಟ್‌ ರಹಿತವಾಗಿ ವಿಶ್ವದ 200ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಹಾಗಾದರೆ ಆ ಮೂವರು ವ್ಯಕ್ತಿಗಳು ಯಾರು ಎಂದು ತಿಳಿದುಕೊಳ್ಳುವ ಕುತೂಹಲವಿದೆಯೇ?

ಯಾರು ಆ ಮೂರು ವ್ಯಕ್ತಿಗಳು…

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು Passport  ಅಗತ್ಯವಿಲ್ಲದ ಮೂವರು ವಿಶೇಷ ವ್ಯಕ್ತಿಗಳು ಯಾರೆಂದರೆ…ಬ್ರಿಟನ್‌ ರಾಜ ಹಾಗೂ ಜಪಾನ್‌ ರಾಜ ಮತ್ತು ರಾಣಿ. ಚಾರ್ಲ್ಸ್‌ ಬ್ರಿಟನ್‌ ರಾಜನಾಗುವ ಮೊದಲು ಈ ಸೌಲಭ್ಯ ರಾಣಿ ಎಲಿಜಬೆತ್‌ ಗೆ ಇತ್ತು ಎಂದು ವರದಿ ವಿವರಿಸಿದೆ.

ಚಾರ್ಲ್ಸ್‌ ಅವರು ಬ್ರಿಟನ್‌ ರಾಜನಾಗಿ ನಿಯುಕ್ತಗೊಂಡ ಹಿನ್ನೆಲೆಯಲ್ಲಿ, ಚಾರ್ಲ್ಸ್‌ ಅವರ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಎಲ್ಲಾ ದೇಶಗಳಿಗೂ ಸಂದೇಶದ ದಾಖಲೆಯನ್ನು ಕಳುಹಿಸಿದ್ದರು. ಆ ಪ್ರಕಾರ ಚಾರ್ಲ್ಸ್‌ ಅವರು ಬ್ರಿಟನ್‌ ರಾಜನಾಗಿದ್ದು, ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ದೇಶಕ್ಕೂ ಯಾವ ನಿರ್ಬಂಧವಿಲ್ಲದೆ ಪ್ರಯಾಣಿಸಲು ಅನುವು ನೀಡಬೇಕೆಂದು ತಿಳಿಸಲಾಗಿತ್ತು.

ಪ್ರಸ್ತುತ ಹಿರೊನೋಮಿಯಾ ನರುಹಿಟೋ ಜಪಾನ್‌ ನ ಚಕ್ರವರ್ತಿಯಾಗಿದ್ದು, ಅವರ ಪತ್ನಿ ಮಸಾಕೋ ಒವಾಡಾ ಮಹಾರಾಣಿಯಾಗಿದ್ದಾರೆ. ಜಪಾನ್‌ ನ ಡಿಪ್ಲೊಮ್ಯಾಟಿಕ್‌ ದಾಖಲೆಯ ಪ್ರಕಾರ, ಜಪಾನ್‌ ಚಕ್ರವರ್ತಿ ಮತ್ತು ಮಹಾರಾಣಿ ಯಾವುದೇ ದೇಶಕ್ಕೆ ಪ್ರವಾಸ ಕೈಗೊಂಡರು ಪಾಸ್‌ ಪೋರ್ಟ್‌ ಅಗತ್ಯವಿಲ್ಲ ಎಂದು ತಿಳಿಸಿದೆ.

ನಮ್ಮ ಚಕ್ರವರ್ತಿ ಮತ್ತು ಮಹಾರಾಣಿಯವರು ನಿಮ್ಮ ದೇಶಗಳಿಗೆ ಪಾಸ್‌ ಪೋರ್ಟ್‌ ರಹಿತವಾಗಿ ಭೇಟಿ ನೀಡಲು ಅವಕಾಶ ನೀಡಬೇಕೆಂದು ಜಪಾನ್‌ ಅಧಿಕೃತವಾಗಿ ಜಗತ್ತಿನ ಎಲ್ಲಾ ದೇಶಗಳಿಗೆ ಲಿಖಿತ ಪತ್ರವನ್ನು ಕಳುಹಿಸಿದೆ.

ರಾಜತಾಂತ್ರಿಕ ಪಾಸ್‌ ಪೋರ್ಟ್‌:

ಜಗತ್ತಿನ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಾಸ್‌ ಪೋರ್ಟ್‌ ಅನ್ನು ಹೊಂದಿರಬೇಕು. ಅವರ ಪಾಸ್‌ ಪೋರ್ಟ್‌ ಗಳು ರಾಜತಾಂತ್ರಿಕ (Diplomatic) ಪಾಸ್‌ ಪೋರ್ಟ್‌ ಗಳಾಗಿವೆ. ಆದರೆ ಬೇರೆ ದೇಶದ ಪ್ರಧಾನಮಂತ್ರಿ, ಅಧ್ಯಕ್ಷರು ಭೇಟಿ ನೀಡಿದ ವೇಳೆ ಆತಿಥೇಯಾ ದೇಶವು ಸಂಪೂರ್ಣ ಸವಲತ್ತು ಮತ್ತು ಗೌರವ ನೀಡಿ ಸ್ವಾಗತಿಸುವುದು ಪದ್ಧತಿಯಾಗಿದೆ.

ಯಾವುದೇ ದೇಶದ ಪ್ರಧಾನಿಯಾಗಲಿ ಅಥವಾ ಅಧ್ಯಕ್ಷರಾಗಲಿ ಅವರು ವಲಸೆ ಅಧಿಕಾರಿಗಳ ಮುಂದೆ ದೈಹಿಕವಾಗಿ ಹಾಜರಾಗಬೇಕಾಗಿಲ್ಲ ಮತ್ತು ಭದ್ರತಾ ತಪಾಸಣೆ, ಇನ್ನಿತರ ಪ್ರಕ್ರಿಯೆಗಳಿಂದ ವಿನಾಯ್ತಿ ಪಡೆದಿರುತ್ತಾರೆ. ಭಾರತದಲ್ಲಿ ಈ ಸ್ಥಾನಮಾನ ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗೆ ಲಭ್ಯವಿದೆ.

ಟಾಪ್ ನ್ಯೂಸ್

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.