ಕಾರಿಗೆ ಟಿಪ್ಪರ್ ಡಿಕ್ಕಿ : ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ
Team Udayavani, Jan 19, 2021, 6:39 PM IST
ಉಳ್ಳಾಲ: ಕಿನ್ಯಾ ಗ್ರಾಮದ ನಡುಕುಮೇರ್ ಪಡುವಾಳ್ ಫಾಮ್ಸ್ 9ರ ಬಳಿ ಟಿಪ್ಪರ್ ಲಾರಿ ಮತ್ತು ಓಮ್ನಿ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ.
ಕೆ.ಸಿ ನಗರದ ಪೂಮಣ್ಣು ನಿವಾಸಿ ನೂರುದ್ದೀನ್ , ಇಮ್ರಾನ್ ಗಂಭೀರ ಗಾಯಾಳುಗಳಾಗಿದ್ದು ನಾಟೆಕಲ್ ನಿಂದ ಕೆ.ಸಿ. ರೋಡ್ ಕಡೆ ಸಂಚರಿಸುತ್ತಿದ್ದಾಗ ತಲಪಾಡಿ ಕಡೆಯಿಂದ ಮರಳು ಹೇರಿಕೊಂಡು ಬರುತ್ತಿದ್ದ ಕೇರಳ ನೋಂದಾವಣಿ ಹೊಂದಿರುವ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಮರಳುಗಾರಿಕೆ ಆರಂಭದ ಬಳಿಕ ತಲಪಾಡಿ, ಹರೇಕಳ, ಪಾವೂರು ಅಂಬ್ಲಮೊಗರು ವ್ಯಾಪ್ತಿಯಲ್ಲಿ ಮರಳು ಸಾಗಾಟದ ಲಾರಿಗಳು ಅತೀ ವೇಗ ಸಂಚರಿಸುತ್ತಿದ್ದು ದ್ವಿಚಕ್ರ ವಾಹನ ಚಾಲಕರು ಮತ್ತು ಇತರ ವಾಹನಗಳ ಚಾಲಕರು ಅಪಾಯದಲ್ಲಿಯೇ ಸಂಚರಿಸುವಂತಾಗಿದೆ.
ಇದನ್ನೂ ಓದಿ :ನಾವೆಲ್ಲರೂ ಸಂತೋಷರಾಗಿದ್ದೇವೆ : ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಶ್ಲಾಘನೆ
ಕಿನ್ಯದಲ್ಲಿ ನಡೆದ ಅಪಘಾತದ ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ