
Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…
Team Udayavani, Sep 30, 2023, 3:54 PM IST

ಕೇರಳ: ಸಾಮಾಜಿಕ ಜಾಲತಾಣದಲ್ಲಿ ದಿನಾಲೂ ಒಂದಕ್ಕಿಂತ ಒಂದು ವಿಶೇಷವಾದ ವಿಡಿಯೋಗಳು ಹರಿದಾಡುತ್ತಿರುತ್ತವೆ ಕೆಲವೊಂದು ಮನಸ್ಸಿಗೆ ಕಿರಿ ಕಿರಿ ನೀಡಿದರೆ ಇನ್ನೂ ಕೆಲವು ನಮ್ಮ ಜೀವನಕ್ಕೆ ಪ್ರೇರಣೆ ನೀಡುವಂತ್ತಿರುತ್ತದೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರಿ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.
ಕೇರಳ ಮೂಲದ ರೈತರೊಬ್ಬರು ಆಡಿ ಎ4 ಐಷಾರಾಮಿ ಸೆಡಾನ್ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿರುವ ಸುಜಿತ್ ‘ವೆರೈಟಿ ಫಾರ್ಮರ್’ ಎಂಬ ಇನ್ಸ್ಟಾಗ್ರಾಮ್ ಚಾನೆಲ್ ಮೂಲಕ ಪ್ರಸಿದ್ದಿ ಪಡೆದಿದ್ದಾನೆ. ಈ ವ್ಯಕ್ತಿ ತನ್ನದೇ ತೋಟದಲ್ಲಿ ಬೆಳೆದ ತರಕಾರಿಗಳನ್ನು ಕಟಾವು ಮಾಡಿ ತಂದು ನಗರದ ಪ್ರಮುಖ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚಿಗೆ ಸುಜಿತ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಕ್ಲಿಪ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ ಅದು ಹೇಗೆಂದರೆ ಸುಜಿತ್ ತೋಟದಲ್ಲಿ ಬೆಳೆದ ಹರಿವೆ ಸೊಪ್ಪನ್ನು ಕಟಾವು ಮಾಡಿ ಬಳಿಕ ಮಾರುಕಟ್ಟೆಯಲ್ಲಿ ಸೊಪ್ಪು ಮಾರಲು ಆಡಿ ಎ4 ಕಾರಿನಲ್ಲಿ ಬರುತ್ತಾನೆ ಬಳಿಕ ರಿಕ್ಷಾದಲ್ಲಿದ್ದ ತರಕಾರಿ ಸೊಪ್ಪನ್ನು ಒಂದು ಟಾರ್ಪಲ್ ಬಿಡಿಸಿ ಅದರಲ್ಲಿ ಹಾಕಿ ರಸ್ತೆ ಬದಿಯಲ್ಲೇ ಜನರಿಗೆ ಮಾರಾಟ ಮಾಡಿ ಬಳಿಕ ತನ್ನ ಕಾರಿನಲ್ಲೇ ಹೊರಟು ಹೋಗುತ್ತಾನೆ.
View this post on Instagram
ಈ ವಿಡಿಯೋ ಅಪ್ ಲೋಡ್ ಆದ ಎರಡೇ ದಿನಕ್ಕೆ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು ಅಲ್ಲದೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಅಂದಹಾಗೆ ಸುಜಿತ್ ತನ್ನದೇ ಪರಿಶ್ರಮದಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದು ತಾನೊಂದು ಐಷಾರಾಮಿ ಕಾರು ತೆಗೆದುಕೊಳ್ಳಬೇಕು ಎಂಬ ಆತನ ಅಸೆ ಈಡೇರಿದೆ.
ಇದನ್ನೂ ಓದಿ:World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indore: ಪ್ರೇಯಸಿಯನ್ನು ಮದುವೆಯಾಗಲು ಲಿಂಗ ಬದಲಾಯಿಸಿ ಗಂಡಾಗಿ ಬದಲಾದ ಮಹಿಳೆ.!

Fake Toll Plaza; ಒಂದೂವರೆ ವರ್ಷದಿಂದ ಜನರಿಂದ ಹಣ ಸಂಗ್ರಹ ಮಾಡುತ್ತಿದೆ ನಕಲಿ ಟೋಲ್ ಗೇಟ್

Video: ಕಾಡಾನೆ ಜೊತೆ ಯುವಕರ ಹುಚ್ಚಾಟ… ಭಯ ಹುಟ್ಟಿಸುವ ವಿಡಿಯೋ ವೈರಲ್

Video: ಬಿಡದ ಛಲ… ದೈತ್ಯ ಮೊಸಳೆಯ ಬಾಯಿಯಿಂದ ತಪ್ಪಿಸಿಕೊಂಡು ಈಜಿ ದಡ ಸೇರಿದ ಜಿಂಕೆ

Video: ಬಿರಿಯಾನಿ ತಿನ್ನುವ ಎಂದು ಆರ್ಡರ್ ಮಾಡಿದರೆ ಬಿರಿಯಾನಿ ಜೊತೆ ಸತ್ತ ಹಲ್ಲಿ ಕೂಡ ಬಂದಿದೆ
MUST WATCH
ಹೊಸ ಸೇರ್ಪಡೆ

Congress ಸರಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ:ಜಗದೀಶ್ ಶೆಟ್ಟರ್

Dalit; ದಲಿತ ಸಮ್ಮಾನ್ ಸಮಾರೋಹ್ ದಲ್ಲಿ ಪಾಲ್ಗೊಂಡ ರಾಜ್ ನಾಥ್ ಸಿಂಗ್

Chhattisgarh: ಕಾರು – ಟ್ರಕ್ ನಡುವೆ ಭೀಕರ ಅಪಘಾತ; ವಧು – ವರ ಸೇರಿ ಐವರು ಮೃತ್ಯು

Chhattisgarh: ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ ಬಿಜೆಪಿ

ಹುಟ್ಟುಹಬ್ಬದಂದು ಹಿಮಾಲಯದ ತಪ್ಪಲಿನಲ್ಲಿ ಬೆತ್ತಲಾದ ನಟ ವಿದ್ಯುತ್; ಹಂಚಿಕೊಂಡ ಫೋಟೋ ವೈರಲ್