ಹೆಸರು ಹೇಳಿದ್ರೆ ಜನ ಭಯಪಡುತ್ತಿದ್ದ ಈ ರೈಲ್ವೆ ನಿಲ್ದಾಣ 42 ವರ್ಷಗಳ ಕಾಲ ಮುಚ್ಚಲು ಕಾರಣವೇನು?

ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಕೂಡಾ ರೈಲ್ವೆ ನಿಲ್ದಾಣದಲ್ಲಿ ಕಾಣಸಿಗುವುದಿಲ್ಲ

ನಾಗೇಂದ್ರ ತ್ರಾಸಿ, Mar 25, 2023, 4:35 PM IST

ಹೆಸರು ಹೇಳಿದ್ರೆ ಜನ ಭಯಪಡುತ್ತಿದ್ದ ಈ ರೈಲ್ವೆ ನಿಲ್ದಾಣ 42 ವರ್ಷಗಳ ಕಾಲ ಮುಚ್ಚಲು ಕಾರಣವೇನು?

ಬಹುತೇಕ ನಾವೆಲ್ಲರೂ Horror(ಭಯಾನಕ) ಸಿನಿಮಾಗಳನ್ನು ನೋಡಿರುತ್ತೇವೆ. ಆದರೆ ಭಾರತದ ಹಲವಾರು ಪ್ರದೇಶಗಳಲ್ಲಿ ದೆವ್ವಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ? ಅಂತಹ ಒಂದು ಕುತೂಹಲಕಾರಿ ಘಟನೆ ಬಗ್ಗೆ ನೀವು ತಿಳಿದುಕೊಳ್ಳಬೇಕು. ಪಶ್ಚಿಮಬಂಗಾಳದ “ಈ” ರೈಲ್ವೆ ನಿಲ್ದಾಣ ಕಳೆದ 42 ವರ್ಷಗಳಿಂದ ಯಾಕೆ ಬಂದ್ ಮಾಡಲಾಗಿದೆ ಎಂಬುದೇ ವಿಚಿತ್ರ ಸಂಗತಿಯಾಗಿದೆ.

ಇದನ್ನೂ ಓದಿ:ಮತ್ತೆ ಮದುವೆ ಎಂದ ನರೇಶ್-ಪವಿತ್ರಾ ಲೋಕೇಶ್

ಈ ಭಯಾನಕ ರೈಲ್ವೆ ನಿಲ್ದಾಣ ಜಾರ್ಖಂಡ್ ಗಡಿ ಸಮೀಪದ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕೋಟ್ಶಿಲಾ ಮುರಿ ವಿಭಾಗದಲ್ಲಿದೆ. ಜನರು ಎಷ್ಟು ಭಯಗೊಂಡಿದ್ದಾರೆಂದರೆ ಈ ರೈಲ್ವೆ ನಿಲ್ದಾಣದ ಹೆಸರನ್ನು ಕೇಳಿಸಿಕೊಳ್ಳಲು ಹೆದರುತ್ತಾರಂತೆ. ಇಂತಹ ಭೀತಿಯ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕಳೆದ 42 ವರ್ಷಗಳಿಂದಲೂ ಕೋಟ್ಶಿಲಾ ರೈಲ್ವೆ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಇಂದಿಗೂ ಕೂಡಾ ಈ ಸ್ಟೇಷನ್ ಮೂಲಕ ರೈಲು ಹಾದು ಹೋಗುವಾಗ ರೈಲಿನೊಳಗಿರುವ ಪ್ರಯಾಣಿಕರು ಮೌನಕ್ಕೆ ಶರಣಾಗುತ್ತಾರಂತೆ.

ವರದಿಯ ಪ್ರಕಾರ, ಈ ರೈಲ್ವೆ ನಿಲ್ದಾಣಕ್ಕೆ ಯಾರೂ ಕೂಡಾ ಭೇಟಿ ನೀಡುವುದಿಲ್ಲ. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಕೂಡಾ ರೈಲ್ವೆ ನಿಲ್ದಾಣದಲ್ಲಿ ಕಾಣಸಿಗುವುದಿಲ್ಲ ಎಂದು ತಿಳಿಸಿದೆ.

Ghost ನಿಲ್ದಾಣವಾಗಿದ್ದು ಹೇಗೆ?

ಭಯಾನಕ ಕಥೆಯನ್ನು ಹೊಂದಿರುವ ರೈಲ್ವೆ ನಿಲ್ದಾಣದ ಹೆಸರು ಬೇಗಂಕೋಡರ್ . ಇದು 1960ರ ದಶಕದಲ್ಲಿ ಜನನಿಬಿಢ ನಿಲ್ದಾಣವಾಗಿತ್ತು. ಪುಟ್ಟ ಕುಗ್ರಾಮವಾಗಿರುವ ಬೇಗಂಕೋಡರ್ ನಲ್ಲಿ ರಾಣಿ ಸಂತಾಲ್ಸ್ ಅವರ ನೆರವಿನೊಂದಿಗೆ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಅಂದು ಊರಿನ ಜನರು ತುಂಬಾ ಖುಷಿಪಟ್ಟಿದ್ದರು. ಆದರೆ ಗ್ರಾಮಸ್ಥರ ಸಂತೋಷ ಹೆಚ್ಚು ಸಮಯ ಮುಂದುವರಿಯಲಿಲ್ಲ. ಮೂಲಗಳ ಪ್ರಕಾರ, 1967ರಲ್ಲಿ ಬೇಗಂಕೋಡರ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್, ತಾನು ರಾತ್ರಿ ರೈಲ್ವೆ ಹಳಿ ಮೇಲೆ ದೆವ್ವವನ್ನು ಕಂಡಿರುವುದಾಗಿ ಹೇಳಿದ್ದರು. ಮಹಿಳೆಯ ಪ್ರೇತ ರೈಲು ಬರುತ್ತಿದ್ದಂತೆ ಅದರ ಜೊತೆ ಓಡೋಡಿ ಬರುತ್ತಾ, ನಿಲ್ದಾಣ ತಲುಪುತ್ತಿದ್ದಂತೆಯೇ ಮಾಯವಾಗುತ್ತಿದ್ದಳಂತೆ!

ಅಂದು ಸ್ಟೇಷನ್ ಮಾಸ್ಟರ್ ಘಟನೆ ಬಗ್ಗೆ ವಿವರಿಸಿದ್ದು ಹೀಗೆ, ರಾತ್ರಿ ಹೊತ್ತು ರೈಲ್ವೆ ಹಳಿ ಮೇಲೆ ಬಿಳಿ ಸೀರೆಯುಟ್ಟ ದೆವ್ವ ಓಡಾಡುತ್ತದೆ ಎಂಬುದಾಗಿತ್ತು. ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದಾದ ನಂತರ ತಾವೂ ಕೂಡಾ ಭೂತವನ್ನು ಕಂಡಿರುವುದಾಗಿ ಹೇಳತೊಡಗಿದ್ದರು. ಹಿಂದೆ ಇದೇ ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯೇ ದೆವ್ವವಾಗಿದ್ದಾಳೆ ಎಂದು ಜನರು ಮಾತನಾಡತೊಡಗಿದ್ದರು. ಇಷ್ಟೆಲ್ಲಾ ಊಹಾಪೋಹಗಳ ನಡುವೆ ರೈಲ್ವೆ ಇಲಾಖೆ ಈ ಸುದ್ದಿಯನ್ನು ನಂಬಲು ನಿರಾಕರಿಸಿತ್ತು. ಇದಾದ ಕೆಲವು ದಿನಗಳ ನಂತರ ಸ್ಟೇಷನ್ ಮಾಸ್ಟರ್ ಮತ್ತು ಕುಟುಂಬ ಸದಸ್ಯರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಇದು ಊಹಾಪೋಹವಲ್ಲ, ನೈಜ ಘಟನೆ ಎಂದು ಜನರು ನಂಬತೊಡಗಿದರು. ಸ್ಟೇಷನ್ ಮಾಸ್ಟರ್ ಕೊನೆಯುಸಿರೆಳೆದ ಘಟನೆ ನಂತರ ಯಾವ ಉದ್ಯೋಗಿಯೂ ಬೇಗಂಕೋಡರ್ ಸ್ಟೇಷನ್ ನಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರು. ಆದರೂ ಉದ್ಯೋಗಿಗಳನ್ನು ಬೇಗಂಕೋಡರ್ ಗೆ ಕಳುಹಿಸಲು ಪ್ರಯತ್ನಿಸಿದ್ದರೂ ಯಾರೂ ಕೂಡಾ ಅಲ್ಲಿಗೆ ತೆರಳಲು ಸಿದ್ದರಾಗಿಲ್ಲವಾಗಿತ್ತು. ಕೊನೆಗೆ ರೈಲ್ವೆ ನಿಲ್ದಾಣವನ್ನು ಬಂದ್ ಮಾಡುವುದಾಗಿ ಅಧಿಕಾರಿಗಳು ಘೋಷಿಸಿಬಿಟ್ಟಿದ್ದರು.

ದೆವ್ವದ ನಿಲ್ದಾಣ ಎಂದು ಪ್ರಚಾರವಾದ ಮೇಲೆ ಬೇಗಂಕೋಡರ್ ರೈಲ್ವೆ ಸ್ಟೇಷನ್ ಬಿಕೋ ಎನ್ನತೊಡಗಿತ್ತು. ಹೀಗೆ 1990ರಲ್ಲಿ ಮತ್ತೆ ರೈಲ್ವೆ ನಿಲ್ದಾಣ ಪುನರಾರಂಭಿಸಬೇಕು ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಸುಮಾರು 42 ವರ್ಷದ ನಂತರ 2009ರಲ್ಲಿ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ, ಬೇಗರಕೋಡಮ್ ರೈಲ್ವೆ ನಿಲ್ದಾಣವನ್ನು ಪುನರಾರಂಭಿಸಿದ್ದರು. ಇಲ್ಲಿ ರೈಲುಗಳು ಬಂದು ನಿಲ್ಲುತ್ತವೆ ವಿನಃ ಇಂದಿಗೂ ಯಾವುದೇ ಒಬ್ಬ ರೈಲ್ವೆ ಉದ್ಯೋಗಿ ಕಾರ್ಯನಿರ್ವಹಿಸುತ್ತಿಲ್ಲ!

ಟಾಪ್ ನ್ಯೂಸ್

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

ಕಡಬ: ವಿದ್ಯುತ್‌ ಲೈನ್ ಸರಿಪಡಿಸುವ ವೇಳೆ ಆಘಾತ: ಲೈನ್‌ಮನ್‌ ಸಾವು

ಕಡಬ: ವಿದ್ಯುತ್‌ ಲೈನ್ ಸರಿಪಡಿಸುವ ವೇಳೆ ಆಘಾತ: ಲೈನ್‌ಮನ್‌ ಸಾವು

ಜಾನುವಾರು ಸಾಗಾಟಕ್ಕೆ ಆನ್‌ಲೈನ್‌ ಪರವಾನಿಗೆ: ಸೂಚನೆ

ಜಾನುವಾರು ಸಾಗಾಟಕ್ಕೆ ಆನ್‌ಲೈನ್‌ ಪರವಾನಿಗೆ: ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DAIRY FARMING

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

AKHAND BHARATH

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

ONDC

ONDC ಡಿಜಿಟಲ್‌ ಸರ್ಕಾರಿ ಕಾಮರ್ಸ್‌ ವ್ಯವಸ್ಥೆ: ಏನಿದು ವ್ಯವಸ್ಥೆ? ಯಾರಿಗೆ ತರಲಿದೆ ಲಾಭ?

CIGERATTE

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

ipl 2023

16ನೇ IPL ನೊಳಗೊಂದು ಸುತ್ತು

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!