World Tourism Day 2023: ಪ್ರಕೃತಿ ಸೌಂದರ್ಯದ “ಕುಕ್ಕೆ ಸುಬ್ರಹ್ಮಣ್ಯ”


Team Udayavani, Sep 27, 2023, 10:34 AM IST

World Tourism Day 2023: ಪ್ರಕೃತಿ ಸೌಂದರ್ಯದ “ಕುಕ್ಕೆ ಸುಬ್ರಹ್ಮಣ್ಯ”

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಧಾರ್ಮಿಕ ಪ್ರಾಮುಖ್ಯತೆಯಿಂದ ಪ್ರಮುಖವಾದ ಸ್ಥಾನಮಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ನಾಗನಿಗೆ ಸಂಬಂಧಿಸಿದಂತಹ ದೋಷಗಳನ್ನು ನಿವಾರಿಸುವ ಗರಿಮೆಯನ್ನು ಎತ್ತಿ ತೋರಿಸುತ್ತಿದೆ. ಸುಂದರವಾದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ  ದೇವಾಲಯವಾಗಿದ್ದು ಪ್ರಕೃತಿ ಪ್ರಿಯರಿಗೆ ಮನಸೆಳೆಯುವಂತಿದೆ. ಐದು ಸಾವಿರ ವರ್ಷಗಳ ಇತಿಹಾಸವಿರುವ  ದೇವಾಲಯಗಳಲ್ಲಿ ಇದೊಂದಾಗಿದೆ . ದೇವಾಲಯದ ಸಮೀಪ ಇರುವ ಕುಮಾರಪರ್ವತವು ಚಾರಣಿಗರ ಜನಪ್ರಿಯ ಟ್ರಕ್ಕಿಂಗ್ ಸ್ಥಳವಾಗಿದೆ.  ಸುತ್ತಲೂ ಹಚ್ಚ ಹಸಿರು ಕಾಡುಗಳಿಂದ ಆವೃತ್ತವಾಗಿ ಹಿಂದೆ ಕುಕ್ಕೆ ಸುಬ್ರಹ್ಮಣ್ಯನನ್ನು ಕುಕ್ಕೆ ಪಟ್ಟಣವೆಂದು ಕರೆಯಲಾಗುತ್ತಿತ್ತು.ಆದಿ ಗುರು ಶಂಕರಾಚಾರ್ಯರು ತಮ್ಮ ದಂಡಯಾತ್ರೆಯ ಸಮಯದಲ್ಲಿ ಈ ಸ್ಥಳದಲ್ಲಿ ಉಳಿದುಕೊಂಡಿದ್ದರುವ ಎನ್ನುವ ಮಾತಿದೆ.

ಸರ್ಪದೋಷ ಎಂದಾಗ ಪ್ರತಿಯೊಬ್ಬರಲ್ಲೂ ಕುಕ್ಕೆ ಸುಬ್ರಹ್ಮಣ್ಯ ನೆನಪಾಗುತ್ತದೆ.ಇಲ್ಲಿ ಇರುವ ನಿಗೂಢವಾದ ಬಿಲದ್ವಾರವು ಎಲ್ಲರ ಕಣ್ಣು ಸೆಳೆಯುವಂತಿದೆ.ಕಷ್ಯಪ ಮಹಾ ಮುನಿ ಎನ್ನುವವರಿಗೆ ವಿನತ ಹಾಗೂ ಕದ್ರು ಸೇರಿ ಇಬ್ಬರೂ ಹೆಂಡತಿಯರು.ವಿನತನ  ಮಗು ಗರುಡ, ಕದ್ರುವಿನ ಮಕ್ಕಳು ಸರ್ಪಗಳು. ಒಂದು ದಿನ ಇದ್ದಕ್ಕಿದ್ದಂತೆ ಗರುಡ ಹಾಗೂ ಸರ್ಪಗಳಿಗೆ ಕದನ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಗರುಡ ಸಹಸ್ರಾರು ಹಾವುಗಳನ್ನು ತಿನ್ನಲು ಪ್ರಾರಂಭಿಸುತ್ತಾನೆ.

ಸರ್ಪಗಳು  ತಪ್ಪಿಸಿಕೊಳ್ಳಲು ಹಲವಾರು ಕಡೆಗಳಲ್ಲಿ ಅಡಗಿಕೊಳ್ಳುತ್ತಾರೆ. ಸರ್ಪಗಳ ರಾಜನಾದ ವಾಸುಕಿಯು ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದಲ್ಲಿರುವ ಗುಹೆಯೊಂದರಲ್ಲಿ ಅಡಗಿಕೊಳ್ಳುತ್ತಾನೆ ಆ ಗುಹೆ ಬಿಲದ್ವಾರ ಗುಹೆಯಾಗಿದೆ .ಈ ವಿಷಯ ತಿಳಿದ ಗರುಡನು ವಾಸುಕಿಯನ್ನು ಕೊಲ್ಲಲು ಬಿಲದ್ವಾರದ ಬಳಿ ಬರುತ್ತಾನೆ.ಆಗ ತಂದೆಯಾದ ಕಷ್ಯಪ್ಪ ಮಹಾ ಮುನಿ ಮಧ್ಯ ಪ್ರವೇಶಿಸುತ್ತಾರೆ. ವಾಸುಕಿಯು ಶಿವಭಕ್ತನಾಗಿರುವುದರಿಂದ ಆತನಿಂದ ಅನೇಕ ಲೋಕ ಕಲ್ಯಾಣ ಕೆಲಸ ಆಗಬೇಕಾಗಿದೆ ಆದ್ದರಿಂದ ಇವನನ್ನು ಕೊಲ್ಲಬೇಡ ಎಂದು ಗರುಡನಿಗೆ ಹೇಳಿದರು. ಹೀಗೆ ತಪ್ಪಿಸಿಕೊಂಡ ವಾಸುಕಿಯು ಸರ್ಪಕುಲವನ್ನು ಗರುಡನಿಂದ ರಕ್ಷಿಸಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿರುವ ಜಾಗದಲ್ಲಿ ಶಿವನ ಕುರಿತು ತಪಸ್ಸನ್ನು ಆಚರಿಸುತ್ತಾನೆ.ಈತನ ತಪಸ್ಸಿಗೆ ಮೆಚ್ಚಿದ ಶಿವ ಪಾರ್ವತಿಯರು ತನ್ನ ಮಗ ಸುಬ್ರಹ್ಮಣ್ಯನು ಸರ್ಪಗಳ ರಕ್ಷಣೆಗೆ ನಿಲ್ಲುತ್ತಾನೆಂದು ಅಭಯ ನೀಡುತ್ತಾನೆ. ಇದರಂತೆಯೇ ನೆಲೆನಿಂತಿರುವುದರಿಂದ ನಾಗಸ್ವರೂಪಿಯಾಗಿ ಈತನನ್ನು ಪೂಜಿಸುವ ಕ್ರಮವಿದೆ.ಇಂದಿಗೂ ಸಹ ಜಾತ್ರಾ ಸಮಯದಲ್ಲಿ ರಥವನ್ನು ಎಳೆಯಲು ಸುಬ್ರಹ್ಮಣ್ಯನ ನೆಲೆಗೆ ಕಾರಣವಾದ ಗರುಡ ಬಂದು ಸ್ಪರ್ಶಿಸಿದ ನಂತರವೇ ರಥವು ಎದ್ದೇಳುವುದು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.

ಅದೇ ರೀತಿ ಬಿಲದ್ವಾರ ಗುಹೆಯ ವಿಷಯ ಹೇಳುವುದಾದರೆ ಗುಹೆಯು ಬಹಳ ಕತ್ತಲಿನಿಂದ ಕೂಡಿದ್ದು ಎರಡು ದಾರಿಯನ್ನು ಹೊಂದಿದೆ. ಒಂದು ಉತ್ತರಕಾದರೇ ಇನ್ನೊಂದು ದಕ್ಷಿಣಕ್ಕೆ. ಉತ್ತರಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ ಕಾಶಿಗೆ ಹೋಗುತ್ತದೆ ಎಂಬುದು ಸ್ಥಳ ಪುರಾಣವಾಗಿದೆ. ನೂರಾರು ವರ್ಷಗಳ ಹಿಂದೆ ಜನರು ಇಲ್ಲಿಂದಾಗಿಯೇ ಕಾಶಿಗೆ ತೆರಳುತ್ತಿದ್ದರಂತೆ. ಹೀಗೇನೆ ದಕ್ಷಿಣದ ದಾರಿಯಲ್ಲಿ ಸುಮಾರು ನೂರು ಮೀಟರ್ ನಷ್ಟು ದೂರ ಸಾಗಬಹುದು. ಗುಹೆಯ ಹಿಂಭಾಗದಲ್ಲಿ ವಾಸುಕಿ ಪುಷ್ಪೋದ್ಯಾನ ಎಂಬ ಉದ್ಯಾನವನವು ಇದೆ. ಇಲ್ಲಿ ವಾಸುಕಿ ಮತ್ತು ಗರುಡ ಕಾದಾಡುವ ಸಂದರ್ಭದ ಕೆತ್ತನೆಯನ್ನು ಕಾಣಬಹುದು. ಬಿಲದ್ವಾರ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು ಪ್ರವೇಶದ್ವಾರ ಹಾಗೂ ನಿರ್ಗಮದ ದ್ವಾರವನ್ನು ಹೊಂದಿದೆ.

ಸುಬ್ರಹ್ಮಣ್ಯನು  ತಾರಾಕಾಸುರನನ್ನು ಕೊಂದು ರಕ್ತವಾದ ಆಯುಧವನ್ನು ಧಾರಾ   ನದಿಯಲ್ಲಿ ತೊಳೆಯುತ್ತಾರೆ ಅಂದಿನಿಂದ ಕುಮಾರಧಾರ ನದಿ ಎಂದು ಹೆಸರು ಪಡೆದುಕೊಳ್ಳುತ್ತದೆ. ನಂತರ ಸುಬ್ರಹ್ಮಣ್ಯ ಕುಮಾರ ಪರ್ವತಕ್ಕೆ ಬಂದಾಗ, ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಬಂದು ವಿವಾಹವಾಗುವಂತೆ ಹೇಳುತ್ತಾನೆ .ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವರುಗಳ ಮುಂದೆ ಕುಮಾರಧಾರ ನದಿಯ ತಪ್ಪಲಿನಲ್ಲಿ ಸುಬ್ರಹ್ಮಣ್ಯ ಮತ್ತು ದೇವಸೇನೆಯ ಮದುವೆ ನಡೆಯುತ್ತದೆ. ವಾಸುಕಿಯ ಇಚ್ಚೆಯಂತೆ ಪತ್ನಿಯೊಂದಿಗೆ ಇರಲು ಸುಬ್ರಹ್ಮಣ್ಯ ಇಚ್ಚಿಸಿದಾಗ  ವಿಶ್ವಕರ್ಮರು  ಮೂರ್ತಿಯನ್ನು ಮಾಡಿ ಕೊಡುತ್ತಾರೆ ಅದನ್ನು ಬ್ರಹ್ಮ ಎಲ್ಲರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಇದೊಂದು ಸುಬ್ರಹ್ಮಣ್ಯನು ನೆಲೆಸಿರುವ ಕಥೆಯಾಗಿದೆ ಹಾಗೂ ಬಿಲದ್ವಾರ ಗುಹೆಯ ರಹಸ್ಯವಾಗಿದೆ.

ಕುಮಾರಧಾರ ನದಿಯಿಂದ  ದೇವಾಲಯದತ್ತ ಸಾಗುವಾಗ ಬಿಲದ್ವಾರ ಎನ್ನುವಲ್ಲಿ ಈ ಗುಹೆಯು ಬಲ ಬದಿಯಲ್ಲಿ ಕಾಣಸಿಗುತ್ತದೆ. ಸುಮಾರು ಒಂದೂವರೆ ಕಿಲೋ ಮೀಟರ್ ಇದೆ. ಹಾಗೇಯೇ ಮಂಗಳೂರಿನಿಂದ 105 ಕಿಲೋಮೀಟರ್, ಪುತ್ತೂರಿನಿಂದ 52 ಕಿಲೋಮೀಟರ್, ಉಪ್ಪಿನಂಗಡಿಯಿಂದ 52 ಕಿಲೋಮೀಟರ್, ಸುಳ್ಯದಿಂದ 40ಕಿಲೋಮೀಟರ್, ಮಡಿಕೇರಿಯಿಂದ 90 ಕಿಲೋಮೀಟರ್ ದೂರದಲ್ಲಿದೆ.

ಈ ಕ್ಷೇತ್ರದಲ್ಲಿ ಆಶ್ಲೇಷಾ ಪೂಜೆ, ಸರ್ಪಸಂಸ್ಕಾರ ನಡೆಸುವುದು ಶ್ರೇಷ್ಠ ಕಾರ್ಯವಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಸುಬ್ರಹ್ಮಣ್ಯನನ್ನು ಬಹಳ ಭಕ್ತಿಯಿಂದ ನಂಬಿ ಹರಕೆ ಹೊತ್ತು ಪೂಜಿಸುತ್ತಾರೆ. ಸಂತಾನ ಭಾಗ್ಯದ ಸಮಸ್ಯೆ ಇರುವವರು  ಸಹ ಸುಬ್ರಹ್ಮಣ್ಯನಿಗೆ ಹರಕೆ ಹೊರುತ್ತಾರೆ.

ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಮೂಲ ಮೃತ್ತಿಕೆ ಪ್ರಸಾದವನ್ನು ನೀಡುವ ಪದ್ಧತಿ ಇದೆ. ಇದನ್ನು ವರ್ಷದಲ್ಲಿ ಒಂದು ಬಾರಿ ಮಾತ್ರ ತೆಗೆಯುತ್ತಾರೆ ಅದು ಯಾವಾಗ ಎಂದರೆ  ಜಾತ್ರೆಗಿಂತ ಮೊದಲು ಕೊಪ್ಪರಿಗೆ ಏರುವ ದಿವಸದಂದು ಎಲ್ಲಾ ಭಕ್ತಾದಿಗಳು ಶುದ್ಧ ಪ್ರಸಾದವೇ ದೊರಕಲಿ ಎನ್ನುವ ಉದ್ದೇಶದಿಂದ ದೇವಾಲಯಕ್ಕೆ ಹೋಗುತ್ತಾರೆ.

ಅನನ್ಯ ಎಚ್ ಸುಬ್ರಹ್ಮಣ್ಯ ✍️

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.