ಹಾರಾಡಿ ಪರಂಪರೆಯ ಮೇರು ಯಕ್ಷಗಾನ ಕಲಾವಿದ ಕೋಡಿ ಶಂಕರ ಗಾಣಿಗರು

ನಡು ಬಡಗು ತಿಟ್ಟಿನ ಕೀರ್ತಿ ಪತಾಕೆ ಉತ್ತುಂಗಕ್ಕೆ ಏರಿಸಿದವರು...

ವಿಷ್ಣುದಾಸ್ ಪಾಟೀಲ್, Dec 14, 2022, 8:03 PM IST

web exclusive vishnudas yakshagana sdm

ಯಕ್ಷಗಾನದ ಗಂಡು ಮೆಟ್ಟಿದ ನೆಲ ಬ್ರಹ್ಮಾವರ ಮತ್ತು ಆಸು ಪಾಸಿನಲ್ಲಿ ಹಲವು ದಿಗ್ಗಜ ಕಲಾವಿದರು ರಂಗಕ್ಕೆ ಅದರಲ್ಲಿಯೂ ನಡು ಬಡಗು ತಿಟ್ಟಿನ ಶ್ರೀಮಂತಿಕೆ ಹೆಚ್ಚಿಸಿದವರಿದ್ದಾರೆ. ಆ ಪೈಕಿ ದೊಡ್ಡ ಹೆಸರು ಯಕ್ಷರಂಗದಲ್ಲೇ ಮೊದಲಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಹಾರಾಡಿ ರಾಮ ಗಾಣಿಗರದ್ದು, ಅದೇ ಪರಂಪರೆಯ ಇನ್ನೊಂದು ಕೊಂಡಿ ಕೋಡಿ ಶಂಕರ ಗಾಣಿಗರು.

ಹಾರಾಡಿಯಲ್ಲಿ ಬಚ್ಚ ಗಾಣಿಗ ಮತ್ತು ಕಾವೇರಿಯಮ್ಮ ದಂಪತಿಗಳ ಸುಪುತ್ರನಾಗಿ 1932ರಲ್ಲಿ ಜನಿಸಿದರು. ಎರಡು ವರ್ಷದ ಮಗುವಾಗಿದ್ದಾಗ ಕಲಾವಿದರಾಗಿದ್ದ ತಂದೆ ಮಾರಣಕಟ್ಟೆ ಮೇಳದಲ್ಲೆ ವಿಧಿವಶರಾದ ಬಳಿಕ ಮೂಲಮನೆ ಕುಂದಾಪುರದ ಕೋಡಿಯಲ್ಲಿ ನೆಲೆ ನಿಲ್ಲುವ ಅನಿವಾರ್ಯತೆ ಎದುರಾಯಿತು. ಅದೇ ಹೆಸರು ಕೋಡಿ ಯಕ್ಷಗಾನದಲ್ಲಿ ಬಹುಖ್ಯಾತಿ ಪಡೆಯಿತು.

ಪ್ರಖ್ಯಾತ ಕಲಾವಿದ ಯಕ್ಷಗಾನ ರಂಗದ ಸರ್ವ ಶ್ರೇಷ್ಠ ದಿಗ್ಗಜ ಹಾರಾಡಿ ರಾಮ ಗಾಣಿಗರ ಅಣ್ಣನ ಮಗ ಮತ್ತು ಖ್ಯಾತ ಪುರುಷ ವೇಷಧಾರಿ ಕುಷ್ಟ ಗಾಣಿಗರ ಸೋದರಳಿಯರಾದ ಶಂಕರ ಗಾಣಿಗರನ್ನು ಯಕ್ಷರಂಗ ಕೈ ಬೀಸಿ ಕರೆಯಿತು. ಹಾರಾಡಿ ಮನೆತನದ ದಿಗ್ಗಜರ ಖ್ಯಾತಿಯ ಕಿರೀಟದಲ್ಲಿ ಶೋಭಿಸಿದ ಒಂದು ಅಮೂಲ್ಯ ರತ್ನವಾಗಿ ಇಂದಿಗೂ ಯಕ್ಷರಂಗದಲ್ಲಿ ನೆನಪಿನ ಆಳದಲ್ಲಿ ಉಳಿದಿದ್ದಾರೆ.

ಐದನೇ ತರಗತಿ ವಿಧ್ಯಾಭ್ಯಾಸ ಪಡೆದು ಯಕ್ಷಗಾನ ರಂಗದ ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್ ಅವರಿಂದ ಗೆಜ್ಜೆ ಕಟ್ಟಿಸಿ ಕೊಂಡು ಹಾರಾಡಿ ಬಾಬು ಗಾಣಿಗ, ಬಸವ ಗಾಣಿಗ, ಸುರಗಿಕಟ್ಟೆ ಬಸವ ಗಾಣಿಗ, ಹಾರಾಡಿ ಮಹಾಬಲ ಗಾಣಿಗ, ಸರ್ವಗಾಣಿಗ ಹೀಗೆ ದೊಡ್ಡ ಕಲಾವಿದರೆಲ್ಲ ಇವರ ಬಂಧುಗಳೇ ಇದ್ದುದರಿಂದ ಕಲಾ ಸೇವೆಯಲ್ಲಿ ದೊಡ್ಡ ಖ್ಯಾತಿಯನ್ನು ಪಡೆಯಲು ಅನುಕೂಲವಾಯಿತು. 15 ವರ್ಷ ಸ್ತ್ರೀವೇಷಧಾರಿಯಾಗಿ, 15 ವರ್ಷ ಪುರುಷವೇಷಧಾರಿಯಾಗಿ ಹವವು ವೇಷಗಳನ್ನು ಮಾಡಿ ನಂತ್ರ 30 ವರ್ಷಗಳ ಕಾಲ ಪ್ರಧಾನ (ಎರಡನೆ) ವೇಷಧಾರಿಯಾಗಿ ರಂಗಸ್ಥಳವನ್ನು ಶ್ರೀಮಂತಗೊಳಿಸಿದರು.

ಸೌಕೂರು ಮೇಳದಲ್ಲಿ ಪ್ರಥಮವಾಗಿ ಗೆಜ್ಜೆ ಕಟ್ಟಿ ಬಳಿಕ ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ, ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದರು. ಕರ್ಣಾರ್ಜುನದ ಕರ್ಣ,ಶಶಿಪ್ರಭಾ ಪರಿಣಯದ ಮಾರ್ತಾಂಡ ತೇಜ, ಲವಕುಶ ಕಾಳಗದ ವಿಭೀಷಣ, ಪ್ರಹ್ಲಾದ ಚರಿತ್ರೆಯ ಹಿರಣ್ಯಕಶ್ಯಪು, ಕೃಷ್ಣಾರ್ಜುನದ ಅರ್ಜುನ, ಜಾಂಬವತಿ ಕಲ್ಯಾಣದ ಜಾಂಬವ ಪಾತ್ರಗಳನ್ನು ಹಿರಿಯ ಯಕ್ಷಗಾನ ವಿಮರ್ಶಕರು ಮತ್ತು ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಯಕ್ಷರಂಗಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಶಂಕರ ಗಾಣಿಗರು ತನ್ನ 84 ನೇ ವಯಸ್ಸಿನಲ್ಲಿ 2016 ಸೆಪ್ಟೆ೦ಬರ್ 1 ರಂದು ಇಹಲೋಕದ ಯಾತ್ರೆ ಮುಗಿಸಿದರು.

ಡಾ. ಶಿವರಾಮ ಕಾರಂತರು ಅರವತ್ತರ ದಶಕದಲ್ಲಿ ನಿರೂಪಿಸಿದ ನೃತ್ಯ ನಾಟಕಗಳಲ್ಲಿ ಅಂಬೆ, ಶಲ್ಯ, ಭೀಮ ಮೊದಲಾದ ಪಾತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದರು ಎನ್ನುವುದನ್ನು ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

ದೇವಿ ಮಹಾತ್ಮೆಯ ಶುಂಭಾಸುರ, ರೇಣುಕಾ ಮಹಾತ್ಮೆಯ ಜಮದಗ್ನಿ, ರುಕ್ಮಾಂಗದ ಚರಿತ್ರೆಯ ರುಕ್ಮಾಂಗದ, ವೀರಮಣಿ, ಅಂಗಾರವರ್ಮ, ಚಿತ್ರಸೇನ, ಸುಲೋಚನ, ಕಂಸ, ಕಾಲನೇಮಿ ಭಸ್ಮಾಸುರ, ಮಧು, ಕೈಟಭ, ರಕ್ತಬೀಜಾಸುರ ಮುಂತಾದ ಪಾತ್ರಗಳು ಇಂದಿಗೂ ಹಿರಿಯ ಯಕ್ಷ ಪ್ರೇಮಿಗಳ ನೆನಪಿನಂಗಳದಲ್ಲಿ ಉಳಿದಿವೆ. ಸಾಧನೆಗೆ ಅರ್ಹವಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿ ಹಲವು ಸನ್ಮಾನಗಳನ್ನು ಶಂಕರ ಗಾಣಿಗರು ಪಡೆದಿದ್ದರು.

ಇವರ ಸಹೋದರಳಿಯ ಕೋಡಿ ವಿಶ್ವನಾಥ ಗಾಣಿಗರು ಖ್ಯಾತ, ಪ್ರಬುದ್ಧ ಕಲಾವಿದರಾಗಿದ್ದು ಸದ್ಯ ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿದ್ದು ಪರಂಪರೆಯನ್ನು ನೆನಪಿಸಿಕೊಡುವಲ್ಲಿ ಸಮರ್ಥರಾಗಿದ್ದಾರೆ ಎಂದು ಯಕ್ಷಗಾನ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.