1.3 ಕೋಟಿ ರೂ. ಮೌಲ್ಯದ ಚಿನ್ನ ವಶ
Team Udayavani, Mar 25, 2023, 5:25 AM IST
ಕುಂಬಳೆ: ಕಲ್ಲಿಕೋಟೆಯ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಗಲ್ಫ್ನಿಂದ ಬಂದಿಳಿದ ಮೂವರನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಕಾಸರಗೋಡಿನ ಅಬ್ದುಲ್ ಸಲಾಂ (43) ಮಲಪ್ಪುರಂ ಮೋನವುದ್ ನೂರುದ್ದಿನ್ (24) ಮತ್ತು ಕಲ್ಲಿಕೋಟೆಯ ಹುಸೈನ್ (35) ಅವರನ್ನು ತಪಾಸಣೆ ನಡೆಸಿದಾಗ ಇವರಿಂದ 1.3 ಕೋಟಿ ರೂ. ಬೆಲೆಬಾಳುವ ಚಿನ್ನವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ.