17 ಮಂದಿ ಡಿವೈಎಸ್ಪಿ ವರ್ಗಾವಣೆಗೊಳಿಸಿ ಗೃಹ ಇಲಾಖೆ
Team Udayavani, Dec 19, 2022, 10:57 PM IST
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು, ಸೋಮವಾರ 17 ಮಂದಿ ಡಿವೈಎಸ್ಪಿ (ಸಿವಿಎಲ್) ಗಳನ್ನು ವರ್ಗಾವಣೆ ಗೊಳಿಸಿ ಗೃಹ ಇಲಾಖೆ ಆದೇಶಿಸಿದೆ.
ವಿಶೇಷವೆಂದರೆ 17 ಮಂದಿ ಪೈಕಿ ಇಬ್ಬರನ್ನು ಹೊರತುಪಡಿಸಿ 15 ಮಂದಿಯನ್ನು ಕರ್ನಾಟಕ ಲೋಕಾ ಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಎ.ಆರ್.ಭರತ್ ರೆಡ್ಡಿ, ಬಿ. ಉಮಾಶಂಕರ್, ಮಂಜುನಾಥ ಕೆ.ಗಂಗಲ್, ಎಂ.ಎಸ್.ಸುರೇಶ್ ರೆಡ್ಡಿ, ವಿಜಯ್ ಬಿರಾದಾರ್, ಸಿ.ಎಸ್.ಮಲ್ಲಿಕಾರ್ಜುನ, ಹನುಮಂತರಾಯ ಶ್ರೀಮಂತರಾಯ, ಕೆ.ಟಿ.ಮಾಥು ಥಾಮಸ್, ಉಮೇಶ್ ಈಶ್ವರ ನಾಯಕ್, ಕೆ.ಸಿ.ಪ್ರಕಾಶ್, ಎಚ್.ಟಿ. ಸುನಿಲ್ ಕುಮಾರ್, ವಿ.ಸೂರ್ಯ ನಾರಾಯಣ ರಾವ್, ಬಿ.ಗಿರೀಶ್, ಪಿ.ವೀರೇಂದ್ರ ಕುಮಾರ್, ಎಸ್.ಸುಧೀರ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಇನ್ನುಳಿದ ಮಲ್ಲೇಶ್ ದೊಡ್ಡ ಮನಿ(ದಾವಣಗೆರೆ ನಗರ ಉಪ ವಿಭಾಗ) ಬಿ.ಎಸ್.ಅಬ್ದುಲ್ ಖಾದರ್(ನಗರ ಸಂಚಾರ ಮತ್ತು ರಸ್ತೆ ಸುರಕ್ಷ ಕೋಶ, ಬೆಂಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.