ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿಂದು 23 ಕೋವಿಡ್-19 ಸೋಂಕು ಪತ್ತೆ
Team Udayavani, Jun 10, 2020, 7:32 PM IST
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 23 ಕೋವಿಡ್-19 ಸೋಂಕು ಪತ್ತೆಯಾಗಿವೆ. ಇದರಲ್ಲಿ ಜಿಂದಾಲ್ ಸಂಸ್ಥೆಯ ಸೋಂಕಿತರೊಅದಿಗೆ ಸಂಪರ್ಕದಲ್ಲಿದ್ದ 19 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮತ್ತೊಂದು ಜ್ಯೂಬ್ಲಿಯಂಟ್ ಕಾರ್ಖಾನೆಯಾಗಿ ಜಿಂದಾಲ್ ಮಾರ್ಪಟ್ಟಂತಾಗಿದೆ. 23 ಸೋಂಕಿತರಲ್ಲಿ 19 ಪುರುಷರು, 4 ಮಹಿಳೆಯರಿಗೆ ಸೋಂಕು ಆವರಿಸಿದೆ.
ಜಿಲ್ಲೆಯ ಸಿರಗುಪ್ಪ ಫೀವರ್ ಕ್ಲಿನಿಕ್ನ ಒಂದು ಪ್ರಕರಣವಾದರೇ ಇನ್ನೆರಡು ಮಹಾರಾಷ್ಟ್ರದಿಂದ ಬಂದ ಟ್ರಾವೆಲ್ ಹಿಸ್ಟರಿ ಇದೆ. ಇನ್ನೊಬ್ಬರು ಆರೋಗ್ಯ ಸಿಬ್ಬಂದಿಯಾಗಿದ್ದಾರೆ. ಸೊಂಕಿತರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.
ಜಿಂದಾಲ್ನಲ್ಲಿ ಇನ್ನೂ ಐದು ದಿನಗಳ ಕಾಲ ಕನಿಷ್ಠ ಸಿಬ್ಬಂದಿಗಳೊಅದಿಗೆ ಕೊರೆಕ್ಸ್ ಪ್ಲಾಂಟ್ ನಿರ್ವಹಿಸಲು ಸೂಚಿಸಲಾಗಿದೆ ಮತ್ತು ಜಿಂದಾಲ್ನಲ್ಲಿ ಅಗತ್ಯ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಂದಾಲ್ ಸಂಸ್ಥೆಯ 36 ಸೋಂಕಿತರು ಸೇರಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 94 ಪ್ರಕರಣಗಳು ಪತ್ತೆಯಾಗಿದ್ದು, 49 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಇನ್ನುಳಿದ 44 ಪ್ರಕರಣಗಳು ಸಕ್ರಿಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ