26/11 ಉಗ್ರರ ತರಬೇತುದಾರನ ಹತ್ಯೆ
Team Udayavani, May 31, 2023, 7:55 AM IST
ಇಸ್ಲಾಮಾಬಾದ್: 2008ರ ಮುಂಬಯಿ ದಾಳಿಯ ಉಗ್ರರಿಗೆ ತರಬೇತಿ ನೀಡಿದ್ದ, ಲಷ್ಕರೆ ತಯ್ಯಬಾ ಉಗ್ರಸಂಘಟನೆಯ ನಾಯಕ ಅಬ್ದುಲ್ ಸಲಾಂ ಬುಟ್ಟಾವಿ ಸತ್ತಿದ್ದಾನೆ. ಆತನನ್ನು ಪಾಕಿಸ್ಥಾನದ ಪಂಜಾಬ್ ಪ್ರಾಂತದ ಶೇಖ್ಪುರದ ಜೈಲಲ್ಲಿ ಇರಿಸಲಾಗಿತ್ತು. 26/11 ದಾಳಿಯ ಉಗ್ರರಿಗೆ ವಿತ್ತೀಯ ನೆರವು ಮಾತ್ರವಲ್ಲದೆ, 2002 ಹಾಗೂ 2008 ರಲ್ಲಿ ಪಾಕ್ ಪೊಲೀಸರು ಉಗ್ರ ಹಫೀಜ್ ಸಯ್ಯದ್ನನ್ನು ಸೆರೆ ಹಿಡಿದಾಗ ಎಲ್ಇಟಿ ಮುಖ್ಯಸ್ಥನಾಗಿ ಆ ಉಗ್ರ ಸಂಘಟನೆಯನ್ನು ಮುನ್ನಡೆಸಿದ್ದ. 2012ರಲ್ಲಿ ವಿಶ್ವಸಂಸ್ಥೆ ಬುಟ್ಟಾವಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಗೊಳಿಸಿತ್ತು. ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಆತನಿಗೆ 2020ರಲ್ಲಿ 16 ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆತನ ಅಂತಿಮ ಸಂಸ್ಕಾರದ ವೀಡಿಯೋ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಂಗಳವಾರ ವಿಚಾರ ಬಹಿರಂಗಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ