ಐಪಿಎಲ್‌ ಆರಂಭಕ್ಕೂ ಮೊದಲೇ 6 ಕ್ರಿಕೆಟಿಗರು ಔಟ್‌!


Team Udayavani, Mar 29, 2023, 6:41 AM IST

ipl

ಹೊಸದಿಲ್ಲಿ: ಸಾಮಾನ್ಯವಾಗಿ ಸುದೀರ್ಘ‌ ಪಂದ್ಯಾವಳಿ ಅಥವಾ ಲೀಗ್‌ ನಡುವೆ ಆಟಗಾರರು ನಾನಾ ಕಾರಣದಿಂದ ಬೇರ್ಪಡುವುದಿದೆ. ಇದರಲ್ಲಿ ಮುಖ್ಯವಾದುದು ಗಾಯದ ಸಮಸ್ಯೆ. ಆದರೆ ಈ ಬಾರಿಯ ಐಪಿಎಲ್‌ ಇದಕ್ಕೆ ವ್ಯತಿರಿಕ್ತವಾದಂತಿದೆ. ಈ ಕ್ಯಾಶ್‌ ರಿಚ್‌ ಲೀಗ್‌ ಆರಂಭವಾಗುವ ಮೊದಲೇ 6 ಮಂದಿ ಆಟಗಾರರು ದೂರ ಸರಿದಿದ್ದಾರೆ. ಸದ್ಯ ನಾಲ್ವರಷ್ಟೇ ಬದಲಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಜಾನಿ ಬೇರ್‌ಸ್ಟೊ, ವಿಲ್‌ ಜಾಕ್ಸ್‌, ಕೈಲ್‌ ಜೇಮಿಸನ್‌, ಪ್ರಸಿದ್ಧ್ ಕೃಷ್ಣ, ಶ್ರೇಯಸ್‌ ಅಯ್ಯರ್‌, ಜೇ ರಿಚರ್ಡ್‌ಸನ್‌ ಬೇರ್ಪಟ್ಟವರಲ್ಲಿ ಪ್ರಮುಖರು. ಉಳಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಸ್‌ಪ್ರೀತ್‌ ಬುಮ್ರಾ, ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್‌ ಹೊರಗುಳಿಯುವುದು ಅನಿವಾರ್ಯವಾಗಿತ್ತು.

* ವಿಲ್‌ ಜಾಕ್ಸ್‌
ಇಂಗ್ಲೆಂಡ್‌ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ ಆರ್‌ಸಿಬಿ ತಂಡದ ಸದಸ್ಯ. ಅವರು ಗಾಯದ ಕಾರಣದಿಂದ ಹಿಂದೆ ಸರಿದಿದ್ದಾರೆ. ಬದಲಿ ಆಟಗಾರನಾಗಿ ಸ್ಥಾನ ಪಡೆದವರು ನ್ಯೂಜಿಲ್ಯಾಂಡ್‌ ಸವ್ಯಸಾಚಿ ಮೈಕಲ್‌ ಬ್ರೇಸ್‌ವೆಲ್‌.

* ಜಾನಿ ಬೇರ್‌ಸ್ಟೊ
ಪಂಜಾಬ್‌ ಕಿಂಗ್ಸ್‌ ತಂಡದ ಸ್ಟಾರ್‌ ಆಟಗಾರ, ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೊ ಹಿಂದಡಿ ಇಡಲು ಮುಖ್ಯ ಕಾರಣ ಫಿಟ್‌ನೆಸ್‌ ಸಮಸ್ಯೆ. ಇವರ ಬದಲು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್‌ ಆಯ್ಕೆಯಾಗಿದ್ದಾರೆ.

* ಕೈಲ್‌ ಜೇಮಿಸನ್‌
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನ್ಯೂಜಿಲ್ಯಾಂಡ್‌ ವೇಗಿ ಕೈಲ್‌ ಜೇಮಿಸನ್‌ ಈ ಋತುವಿನಲ್ಲಿ ಆಡುವುದಿಲ್ಲ. ಇವರ ಸ್ಥಾನಕ್ಕೆ ಆಯ್ಕೆಯಾದವರು ದಕ್ಷಿಣ ಆಫ್ರಿಕಾದ ಸಿಸಂಡ ಎಮ್‌ಗಾಲ.

* ಪ್ರಸಿದ್ಧ್ ಕೃಷ್ಣ
ಕರ್ನಾಟಕದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿರುವ ಪ್ರಸಿದ್ಧ್ ಕೃಷ್ಣ ರಾಜಸ್ಥಾನ್‌ ರಾಯಲ್ಸ್‌ ಪರ ಆಡಬೇಕಿತ್ತು. ಆದರೆ ಗಾಯಾಳಾದ ಕಾರಣ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಇವರ ಬದಲು ಸಂದೀಪ್‌ ಶರ್ಮ ಅವರನ್ನು ಆರಿಸಲಾಗಿದೆ.

* ಜೇ ರಿಚರ್ಡ್‌ಸನ್‌
ಮುಂಬೈ ಇಂಡಿಯನ್ಸ್‌ ತಂಡದ ಆಸ್ಟ್ರೇಲಿಯದ ವೇಗಿ ಜೇ ರಿಚರ್ಡ್‌ಸನ್‌ ಕೂಡ ಈ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ಮುಂಬೈನ ವೇಗದ ಬೌಲಿಂಗ್‌ ವಿಭಾಗ ಅವಳಿ ಆಘಾತಕ್ಕೆ ಸಿಲುಕಿದೆ. ಬುಮ್ರಾ ಕೂಡ ಇಲ್ಲದಿರುವುದು ದೊಡ್ಡ ಹಿನ್ನಡೆ. ರಿಚರ್ಡ್‌ಸನ್‌ ಬದಲು ಯಾರು ಎಂಬುದಿನ್ನೂ ಖಾತ್ರಿಯಾಗಿಲ್ಲ.

* ಶ್ರೇಯಸ್‌ ಅಯ್ಯರ್‌
ಕೆಕೆಆರ್‌ ತಂಡವನ್ನು ಮುನ್ನಡೆಸಬೇಕಿದ್ದ ಶ್ರೇಯಸ್‌ ಅಯ್ಯರ್‌ ಬೆನ್ನುನೋವಿನಿಂದಾಗಿ ಐಪಿಎಲ್‌ನಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ನಿತೀಶ್‌ ರಾಣಾ ಅವರಿಗೆ ನಾಯಕತ್ವ ವಹಿಸಲಾಗಿದೆ. ಅಯ್ಯರ್‌ ಚೇತರಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಆಡಲಿಳಿಯಬಹುದು.

ಟಾಪ್ ನ್ಯೂಸ್

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GT CSK

IPL 2023: ಫೈನಲ್‌ ಥ್ರಿಲ್‌

Malaysia Masters Badminton: ಪ್ರಣಯ್‌ ಫೈನಲ್‌ಗೆ, ಸಿಂಧು ಪರಾಭವ

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

thumb-5

King Kohli ಹಿಂದೆ ಬಿದ್ದ Prince Gill: ಅಪಾಯದಲ್ಲಿದೆ ಕೊಹ್ಲಿಯ ‘ವಿರಾಟ್’ ದಾಖಲೆ

PATHIRANA FAMILY

ಪತಿರಣ ಪರಿವಾರದೊಂದಿಗೆ ಧೋನಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

ಚುಕ್ಕೆ ಜಿಂಕೆ ಬೇಟೆ: ಆರೋಪಿ ಸೆರೆ; ನ್ಯಾಯಾಂಗ ಬಂಧನ

New Parliament Inauguration; ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು