79, 29ಕ್ಕೆ ಬರುತ್ತದೆ ….: ಡಿಕೆಶಿ ವಿರುದ್ಧ ಕಿಡಿ ಕಾರಿದ ಹೆಚ್ ಡಿಕೆ
ಖರ್ಗೆ ಅವರನ್ನು ಸಿಎಂ ಮಾಡಿಕೊಳ್ಳಿ ಅಂತ ನಾವು ಹೇಳಿಲ್ವಾ ....
Team Udayavani, Mar 1, 2023, 9:36 PM IST
ಮೂಡಿಗೆರೆ: ಅವರು ರೈತನ ಮಗನಾ? ರೈತರ ಮಕ್ಕಳಿಗೆ ಇಡಿ ನೋಟಿಸು ಕೊಟ್ಟಿರುವುದನ್ನ ಎಲ್ಲಾದರೂ ನೋಡಿದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬುಧವಾರ ಕಿಡಿ ಕಾರಿದ್ದಾರೆ.
ಹಾಸನದಲ್ಲಿ ಡಿಕೆಶಿ ಅವರು ನೀಡಿದ ಹೇಳಿಕೆ ಕುರಿತು ಕೆಂಡಮಂಡಲರಾದ ಕುಮಾರಸ್ವಾಮಿ ಅವರು, ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ. ಅವರು ಯಾರ ಪೂಜೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ, 79, 29ಕ್ಕೆ ಬರುತ್ತದೆ. ಅವರಿಗೆ ಇನ್ನೂ ದುಡ್ಡು ಹೊಡೆಯಲು ಬಿಡಬೇಕಿತ್ತಂತಾ. ನನ್ನನ್ನ ಯಾವ ರೀತಿ ನಡೆಸಿಕೊಂಡರು ಎಂಬುವುದು ಗೊತ್ತಿದೆ. ಇರಿಗೇಶನ್ ಸಚಿವನಾಗಿ ಏನೇನೋ ನಡೆಸಿದ್ದೀಯ ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ. ಮಗೆ ಎಷ್ಟು ಸ್ವತಂತ್ರ ಕೊಟ್ಟಿದ್ದೆ, ನೀವು ಯಾವ ರೀತಿ ನಡೆಸಿಕೊಂಡಿರಿ. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ, ಹುಡುಕಿಕೊಂಡು ಬಂದವರು ನೀವು. ಸಿಎಂ ಸ್ಥಾನ ಕೊಡುತ್ತೇವೆ ಬನ್ನಿ ಅಂತ, ಬೇಡ ಯಾರನ್ನಾದರೂ ಮಾಡಿಕೊಳ್ಳಿ ಅಂತ ಹೇಳಿದ್ದೇವಲ್ಲಾ ಅವರು ಜೀವಂತ ಇಲ್ವಾ ಎಂದು ಕಿಡಿ ಕಾರಿದರು.
ನಿಮಗೆ ಶಕ್ತಿ ಇದ್ದರೆ ಯಾಕೆ ಜೆಡಿಎಸ್ ನಾಯಕರುಗಳ ಮನೆಯ ಬಾಗಿಲನ್ನ ತಟ್ಕೊಂಡಿದ್ದೀರಾ? ನನ್ನ ಬಗ್ಗೆ ಲಘುವಾಗ ಮಾತನಾಡುತ್ತೀರಿ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿಕೊಳ್ಳಿ ಅಂತ ನಾವು ಹೇಳಿಲ್ವಾ. ಜೀವಂತವಾಗಿ ಯಾರು ಬದುಕಿಲ್ವಾ, ದೇವೇಗೌಡರ ಸಮ್ಮುಖದಲ್ಲಿ ಮಾತನಾಡಿದ್ದನ್ನ ಹೇಳಲಿಕ್ಕೆ, ನಿಮಗೆ ಯಾವ ರೀತಿ ನೈತಿಕತೆ ಇದೆ ಜೆಡಿಎಸ್ ಬಗ್ಗೆ ಮಾತನಾಡಲಿಕ್ಕೆ ಎಂದು ಕಿಡಿ ಕಿಡಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ