ಪಾಕ್ನಲ್ಲಿ ಉದ್ರಿಕ್ತ ಗುಂಪಿನಿಂದ ವ್ಯಕ್ತಿ ಹತ್ಯೆ
Team Udayavani, May 8, 2023, 7:22 AM IST
ಪೇಶಾವರ: ಪಾಕಿಸ್ಥಾನದ ಖೈಬರ್ ಪಕ್ತುಂಖ್ವಾ ಪ್ರಾಂತದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ್ಯಾಲಿ ವೇಳೆ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಲಾಗಿದೆ. ಮತೀಯ ನಿಂದನೆ ಆರೋಪದಲ್ಲಿ ವ್ಯಕ್ತಿಯ ಮೇಲೆ ಉದ್ರಿಕ್ತ ಗುಂಪೊಂದು ತೀವ್ರ ಹಲ್ಲೆ ಮಾಡಿದೆ. ಅಫ್ಘಾನಿಸ್ಥಾನದ ಗಡಿ ಸಮೀಪದ ಮರ್ದಾನ್ ನಗರದ ಸವಾಲ್ ದೇರ್ ಪ್ರದೇಶದಲ್ಲಿ ಶನಿವಾರ ಪಾಕಿಸ್ಥಾನ್ ತೆಹ್ರೀಕ್ ಇನ್ಸಾಫ್ ಪಕ್ಷ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಯಲ್ಲಿ ಸಮಾರೋಪ ಪ್ರಾರ್ಥನೆ ಮಾಡುವಂತೆ ನಿಗರ್ ಆಲಂ ಎಂಬುವವರಿಗೆ ಹೇಳಲಾಗಿತ್ತು. ಆದರೆ ಆತ ಪ್ರಾರ್ಥನೆ ಮಾಡಲು ನಿರಾಕರಿಸಿ, ಸ್ಥಳದಿಂದ ಹೊರಟಿದ್ದ. ಇದು ಮತೀಯನಿಂದನೆ ಎಂದು ಆರೋಪಿಸಿದ ಜನರು ಅವನನ್ನು ಹಿಡಿಯಲು ಮುಂದಾದರು. ಆತ ತನ್ನ ಸಂಬಂಧಿಯ ಮನೆಯಲ್ಲಿ ಅವಿತ. ಆದರೂ ಬಿಡದ ಉದ್ರಿಕ್ತ ಗುಂಪು, ಅವನನ್ನು ಪತ್ತೆಹಚ್ಚಿ ದೊಣ್ಣೆಗಳು ಮತ್ತು ಕೋಲುಗಳಿಂದ ಸಾಯುವವರೆಗೂ ಥಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ವಿಫಲರಾದ ಪೊಲೀಸರಿಗೆ, ಆಲಂ ಮೃತದೇಹ ವಶಕ್ಕೆ ಪಡೆಯಲು ಸಹ ಕಷ್ಟವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು