ಅಕ್ಷಯ ತೃತೀಯ: Kalyan ಜ್ಯುವೆಲರ್ಸ್ನಲ್ಲಿ ಅತ್ಯಾಕರ್ಷಕ ಕೊಡುಗೆ
Team Udayavani, Apr 15, 2023, 7:49 AM IST
ಬೆಂಗಳೂರು: ದೇಶದ ಪ್ರಮುಖ ಬ್ರ್ಯಾಂಡ್ಗಳಲ್ಲಿ ಒಂದಾದ ಕಲ್ಯಾಣ್ ಜುವೆಲರ್ಸ್ ಅಕ್ಷಯ ತೃತೀಯ ಅಂಗವಾಗಿ ಆಭರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಯ ಅಭಿಯಾನವನ್ನು ಶುಕ್ರವಾರದಿಂದ ಪ್ರಾರಂಭಿಸಿದೆ.
ಕಲ್ಯಾಣ್ ಜುವೆಲರ್ಸ್ನ ಎಲ್ಲ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ ಶೇ. 25ರಷ್ಟು ರಿಯಾಯಿತಿ ಘೋಷಿಸಿದ್ದು, ಮೇಕಿಂಕ್ ಶುಲ್ಕವು ಶೇ. 3ರಿಂದ ಪ್ರಾರಂಭವಾಗುತ್ತದೆ. ಆಭರಣಗಳ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿ ಹಾಗೂ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ವಿಶೇಷ ಕೊಡುಗೆಯನ್ನು ಕರ್ನಾಟಕ ಮತ್ತು ಕೇರಳದ ಎಲ್ಲ ಕಲ್ಯಾಣ್ ಜುವೆಲರ್ಸ್ ಶೋರೂಂಗಳಲ್ಲಿ ಮೇ 31ರ ವರೆಗೆ ಪಡೆಯಬಹುದಾಗಿದೆ.
ಈ ಕುರಿತು ಮಾತನಾಡಿದ ಕಲ್ಯಾಣ್ ಜುವೆಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್, ಅಕ್ಷಯ ತೃತೀಯ ಯಾವಾಗಲೂ ಚಿನ್ನದ ಖರೀದಿಗೆ ಸಮಾನಾರ್ಥಕವಾಗಿದೆ. ನಮ್ಮ ಮಳಿಗೆಗಳಲ್ಲಿ ಗ್ರಾಹಕರ ಭಾವನೆಯೊಂದಿಗೆ ಆಭರಣ ಖರೀದಿ ಸಂಬಂಧ ಹೊಂದಿರುತ್ತದೆ. ಈ ಕೊಡುಗೆಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಗ್ರಾಹಕರು ಅಕ್ಷಯ ತೃತೀಯದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕಲ್ಯಾಣ್ನ ಜನಪ್ರಿಯ ಮನೆ ಬ್ರ್ಯಾಂಡ್ಗಳಾದ ತೇಜಸ್ವಿ (ಪೋಲ್ಕಿ ಆಭರಣಗಳು), ಮುದ್ರಾ (ಕರಕುಶಲ ಪುರಾತನ ಆಭರಣಗಳು), ನಿಮಾಹ್ (ಟೆಂಪಲ್ ಜುವೆಲರಿ) ಮತ್ತು ಗ್ಲೋ (ನೃತ್ಯ- ವಜ್ರಗಳನ್ನು ಒಳಗೊಂಡಿರುವ ವಿಶೇಷ ವಿಭಾಗಗಳು) ವಿನ್ಯಾಸಗಳನ್ನು ಒಳಗೊಂಡಿದೆ. ಕಲ್ಯಾಣ್ನ ಎಲ್ಲ ಆಭರಣಗಳು ಬಿಐಎಸ್ ಹಾಲ್ಮಾರ್ಕ್ ಹೊಂದಿದ್ದು, ನಾಲ್ಕು ಹಂತದ ಭರವಸೆ ಪ್ರಮಾಣಪತ್ರವನ್ನು ಗ್ರಾಹಕರು ಸ್ವೀಕರಿಸಬಹುದಾಗಿದೆ. ಇದು ಶುದ್ಧತೆ, ಆಭರಣಗಳ ಉಚಿತ ಜೀವಿತಾವಧಿ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತು ಮರುಖರೀದಿ ನೀತಿಗಳನ್ನು ಖಾತರಿಪಡಿಸುತ್ತದೆ ಎಂದು ತಿಳಿಸಿದರು.