ಒಡಿಶಾದಲ್ಲಿ ಮತ್ತೊಂದು ಶಂಕಿತ ಗೂಢಚಾರಿಕೆ ಪಾರಿವಾಳ ಪತ್ತೆ; ತನಿಖೆ
Team Udayavani, Mar 16, 2023, 4:25 PM IST
ಪುರಿ: ಒಡಿಶಾದ ಪುರಿ ಜಿಲ್ಲೆಯಲ್ಲಿ ಶಂಕಿತ ಗೂಢಚಾರಿಕೆ ಪಾರಿವಾಳ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಾರ್ಚ್ 8 ರಂದು ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯ ಮೀನುಗಾರಿಕಾ ದೋಣಿಯಿಂದ ಅಂತಹ ಮತ್ತೊಂದು ಪಾರಿವಾಳವನ್ನು ಹಿಡಿದಿದ್ದು, ಒಂದು ವಾರದಲ್ಲಿ ರಾಜ್ಯದಲ್ಲಿ ಇದು ಎರಡನೇ ಘಟನೆಯಾಗಿದೆ.
ಪುರಿಯ ಅಸ್ತರಾಂಗ್ ಬ್ಲಾಕ್ನ ನಾನ್ಪುರ್ ಗ್ರಾಮದಲ್ಲಿ ಈ ಹೊಸ ಪಾರಿವಾಳವನ್ನು ಬುಧವಾರ ಹಿಡಿಯಲಾಗಿದ್ದು, ಇತರ ಪಾರಿವಾಳಗಳೊಂದಿಗೆ ಬೆರೆಯಲು ಬಂದಾಗ ಸ್ಥಳೀಯರೊಬ್ಬರು ಅದನ್ನು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದರ ಕಾಲುಗಳಿಗೆ ಹಿತ್ತಾಳೆ ಮತ್ತು ಪ್ಲಾಸ್ಟಿಕ್ ರಿಂಗ್ ಗಳನ್ನು ಜೋಡಿಸಲಾಗಿತ್ತು. ಒಂದು ಟ್ಯಾಗ್ನಲ್ಲಿ ‘ರೆಡ್ಡಿ ವಿಎಸ್ಪಿ ಡಿಎನ್’ ಎಂದು ಬರೆಯಲಾಗಿದ್ದು, ಇನ್ನೊಂದು ಟ್ಯಾಗ್ನಲ್ಲಿ 31 ಸಂಖ್ಯೆ ಇತ್ತು ಎಂದು ಪೊಲೀಸರು ಹೇಳಿದರು.
ಒಂದು ವಾರದಿಂದ ಪಾರಿವಾಳ ಈ ಪ್ರದೇಶದಲ್ಲಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ನಮ್ಮ ಮನೆಯಲ್ಲಿ ಸಾಕಿದ ಪಾರಿವಾಳಗಳಿವೆ. ಈ ಪಾರಿವಾಳವು ನಮ್ಮ ಪಾರಿವಾಳಗಳೊಂದಿಗೆ ಬೆರೆಯಲು ಬಂದಿತು, ಮತ್ತು ನಾವು ಅದರ ಬಗ್ಗೆ ಅಚ್ಚರಿಯಾದುದ್ದನ್ನು ಕಂಡುಕೊಂಡಿದ್ದೇವೆ. ಅದು ದೂರ ಉಳಿಯಿತು ಮತ್ತು ಇತರ ಪಾರಿವಾಳಗಳೊಂದಿಗೆ ಮುಕ್ತವಾಗಿ ಬೆರೆಯಲಿಲ್ಲ. ಅದರ ಕಾಲುಗಳ ಮೇಲೆ ಕೆಲವು ಟ್ಯಾಗ್ಗಳನ್ನು ಸಹ ನಾವು ಗಮನಿಸಿದ್ದೇವೆ. ಹೀಗಾಗಿ ಅದನ್ನು ಹಿಡಿಯಲು ನಿರ್ಧರಿಸಿ, ಮೀನು ಹಿಡಿಯುವ ಬಲೆ ಬಳಸಿದ್ದೇವೆ’ ಎಂದು ಪಾರಿವಾಳ ಹಿಡಿದ ಬಿಕ್ರಮ್ ಪತಿ ತಿಳಿಸಿದ್ದಾರೆ.
ಈ ಪಾರಿವಾಳವನ್ನೂ ಬೇಹುಗಾರಿಕೆಗೆ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 8 ರಂದು ಸಿಕ್ಕಿದ್ದ ಪಾರಿವಾಳದಲ್ಲಿ ಕ್ಯಾಮರಾದಂತೆ ಕಾಣುವ ಸಾಧನಗಳು ಮತ್ತು ಮೈಕ್ರೋಚಿಪ್ ಅಳವಡಿಸಲಾಗಿತ್ತು. ಇದನ್ನು ಪರೀಕ್ಷೆಗಾಗಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (CFSL) ಕಳುಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ