ಹೋಳಿ: ಗಂಗಾವತಿ ಪತ್ರಕರ್ತರ ಫೋಟೋ ಶೇರ್ ಮಾಡಿದ ಅನುಪಮ್ ಖೇರ್
Team Udayavani, Mar 20, 2022, 2:31 PM IST
ಗಂಗಾವತಿ : ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪಾತ್ರಗಳಂತೆ ಹೋಳಿ ಹಬ್ಬದಂದು ಗಂಗಾವತಿಯ ಪತ್ರಕರ್ತರು ಮುಖಕ್ಕೆ ಬಣ್ಣ ಹಚ್ಚಿಕೊಂಡಿದ್ದ ಫೋಟೋಗಳನ್ನ ನಟ ಅನುಪಮ್ ಖೇರ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಮೆಚ್ಚಿಕೊಂಡಿದ್ದಾರೆ .
ಕಾಶ್ಮೀರಿ ಫೈಲ್ಸ್ ಚಿತ್ರ ರಿಲೀಸ್ ಆದ ನಂತರ ದೇಶದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಈ ಮಧ್ಯೆ ಗಂಗಾವತಿಯಲ್ಲಿ ಶನಿವಾರ ಜರುಗಿದ ಹೋಳಿ ಹಬ್ಬದಂದು ಕೆಲವು ಪತ್ರಕರ್ತರು ನಟ ಅನುಪಮ್ ಖೇರ್ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಶಿವನ ವೇಷದಲ್ಲಿ ಮುಖಕ್ಕೆ ಬಣ್ಣವನ್ನು ಹಚ್ಚಿಕೊಂಡಂತೆ ಚಿತ್ರವನ್ನ ಬಿಡಿಸಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದ್ದರು .ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಫೋಟೋಗಳನ್ನು ಕಾಶ್ಮೀರ್ ಫೈಲ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮ್ ಖೇರ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.
This is the #TheKasmirFiles effect. People in Gangavati Karnataka were seen playing holi with this colour make up face which Anupam Kher ji had in movie.?@vivekagnihotri @AnupamPKher pic.twitter.com/L9jW0RD7wH
— Adarsh Hegde (@adarshahgd) March 19, 2022
ಹೋಳಿ ಹಬ್ಬ ಭಾವೈಕ್ಯತೆಯ ಹಬ್ಬವಾಗಿದೆ ಈ ಹಬ್ಬದ ಸಂದರ್ಭದಲ್ಲಿ ನನ್ನ ಸಹೋದರ ಭೀಮರಾಯ ದೇವಿಕೇರಿ ಒಬ್ಬ ಹವ್ಯಾಸಿ ಚಿತ್ರಕಲಾ ಕಲಾವಿದನಾಗಿದ್ದು ರಾಷ್ಟ್ರೀಯ ಅಂತಾರಾಷ್ಟ್ರೀಯ ಬಹುಮಾನ ಪಡೆದಿದ್ದಾರೆ .ಪ್ರತಿವರ್ಷ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ವಿಶೇಷ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ .ಹೋಳಿ ಹಬ್ಬದ ಸಂದರ್ಭದಲ್ಲಿ ನನಗೆ ಮತ್ತು ಇತರೆ ಪತ್ರಕರ್ತ ಗೆಳೆಯರಿಗೆ ಈ ವರ್ಷ ಮುಖಕ್ಕೆ ಶಿವನಂತೆ ಚಿತ್ರಿಸಿ ಗಮನ ಸೆಳೆದಿದ್ದಾರೆ . ನಗರದ ಕೆಲ ಪತ್ರಕರ್ತರು ಸೇರಿ ಹೋಳಿ ಹಬ್ಬವನ್ನು ಮುಖದ ಮೇಲೆ ಶಿವನಂತೆ ಚಿತ್ರವನ್ನು ಬಿಡಿಸಿಕೊಳ್ಳುವ ಮೂಲಕ ನಗರದಲ್ಲಿ ಬೈಕ್ ನಲ್ಲಿ ಸುತ್ತಾಡುವ ಮೂಲಕ ಹಬ್ಬ ಆಚರಿಸಿದ್ದೇವೆ ಈ ಫೋಟೋಗಳನ್ನ ನನ್ನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಇದನ್ನು ಹಿರಿಯ ನಟ ಅನುಪಮ್ ಖೇರ್ ಅವರು ಗಮನಿಸಿ ತಮ್ಮ ಟ್ವೀಟ್ ಖಾತೆಯಲ್ಲಿ ಹಾಕಿರುವುದು ನನಗೆ ಸಂತೋಷ ತಂದಿದೆ ಎಂದು ಪತ್ರಕರ್ತರಾದ ಶ್ರೀನಿವಾಸ್ ದೇವಿಕೆರೆ ಸಂಭ್ರಮ ಹೊರ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ