ಬಹನಾಗ ರೈಲು ನಿಲ್ದಾಣ ಸೀಲ್ ಮಾಡಿದ CBI
Team Udayavani, Jun 11, 2023, 7:19 AM IST
ಭುವನೇಶ್ವರ: ತ್ರಿವಳಿ ರೈಲು ದುರಂತದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಒಡಿಶಾದ ಬಹನಾಗ ರೈಲು ನಿಲ್ದಾಣದಲ್ಲಿನ ಲಾಗ್ ಬುಕ್, ರಿಲೇ ಪ್ಯಾನೆಲ್ ಮತ್ತು ಇತರೆ ಕೆಲವು ಸಾಧನಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಶನಿವಾರ ರೈಲು ನಿಲ್ದಾಣವನ್ನೇ ಸೀಲ್ ಮಾಡಿದೆ. ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ, ಮುಂದಿನ ಆದೇಶದವರೆಗೆ ಬಹನಾಗ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ಅಥವಾ ಸರಕು ಸಾಗಣೆ ರೈಲುಗಳು ನಿಲುಗಡೆಯಾಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ದುರಂತದ ನಂತರ ಎರಡೂ ರೈಲು ಮಾರ್ಗಗಳ ಪುನಸ್ಥಾಪನೆಯ ಬಳಿಕ ಈ ಮಾರ್ಗಗಳಲ್ಲಿ ಕನಿಷ್ಠ 7 ರೈಲುಗಳು(ಲೋಕಲ್) ಬಹನಾಗ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದವು. ಸದ್ಯಕ್ಕೆ ಇವುಗಳ ನಿಲುಗಡೆಗೆ ನಿರ್ಬಂಧಿಸಲಾಗಿದೆ.
ಶವವಲ್ಲ, ಕೊಳೆತ ಮೊಟ್ಟೆ!:
ನೂರಾರು ಮಂದಿಯ ಸಾವಿಗೆ ಕಾರಣವಾದ ಬಹನಾಗ ರೈಲು ನಿಲ್ದಾಣದಲ್ಲಿ ಹಾನಿಗೀಡಾದ ಬೋಗಿಯೊಂದರ ಸಮೀಪದಿಂದ ದುರ್ವಾಸನೆ ಬರುತ್ತಿದ್ದು, ಮೃತದೇಹಗಳು ಇನ್ನೂ ಒಳಗೆ ಉಳಿದಿರಬಹುದೇ ಎಂಬ ಶಂಕೆಯನ್ನು ಅಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಅದು ಮನುಷ್ಯನ ದೇಹ ಕೊಳೆತು ಬರುತ್ತಿರುವ ವಾಸನೆಯಲ್ಲ, ಬದಲಿಗೆ ಕೊಳೆತ ಮೊಟ್ಟೆಗಳ ವಾಸನೆ’ ಎಂದು ಹೇಳಿದ್ದಾರೆ. ಅವಘಡ ನಡೆದ ದಿನ ಯಶವಂತಪುರ-ಹೌರಾ ರೈಲಿನಲ್ಲಿ ಮೂರು ಟನ್ ಮೊಟ್ಟೆಗಳನ್ನು ಸಾಗಿಸಲಾಗುತ್ತಿತ್ತು. ಬೋಗಿಗಳು ಹಳಿತಪ್ಪಿದಾಗ ಆ ಮೊಟ್ಟೆಗಳೆಲ್ಲ ಅಲ್ಲೇ ಬಿದ್ದು, ಅವುಗಳು ಕೊಳೆತು ದುರ್ವಾಸನೆ ಬರುತ್ತಿವೆ. ಮೂರು ಟ್ರ್ಯಾಕ್ಟರ್ಗಳ ಮೂಲಕ ಅವುಗಳ ತೆರವು ಕಾರ್ಯ ನಡೆಸುತ್ತಿದ್ದೇವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
MUST WATCH
ಹೊಸ ಸೇರ್ಪಡೆ
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ