ಬೆಂಗಳೂರು: ವ್ಯಕ್ತಿಯೊಬ್ಬನನ್ನ ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ ದೂರ ಎಳೆದೊಯ್ದ ಮಹಿಳೆ!
ತೀವ್ರ ವಾಗ್ವಾದದ ಬಳಿಕ ಜೀವದೊಂದಿಗೆ ಚಲ್ಲಾಟ ಆಡಿದ್ದಕ್ಕೆ ಕೇಸ್ ಜಡಿದ ಪೊಲೀಸರು....
Team Udayavani, Jan 20, 2023, 4:32 PM IST
ಬೆಂಗಳೂರು : ನಗರದ ಜ್ಞಾನ ಭಾರತಿ ನಗರದಲ್ಲಿ ನಡೆದ ವಾಗ್ವಾದದ ನಂತರ ಮಹಿಳೆಯೊಬ್ಬರು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು ಒಂದು ಕಿಲೋಮೀಟರ್ ವರೆಗೆ ವ್ಯಕ್ತಿಯನ್ನು ಎಳೆದೊಯ್ದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಜ್ಞಾನ ಭಾರತಿ ನಗರ ಪ್ರದೇಶದಲ್ಲಿ ಎರಡು ಕಾರುಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದು,ಒಂದು ಕಾರನ್ನು ಪ್ರಿಯಾಂಕಾ ಎಂಬ ಮಹಿಳೆ ಓಡಿಸುತ್ತಿದ್ದಳು. ದರ್ಶನ್ ಎಂದು ಗುರುತಿಸಿರುವ ವ್ಯಕ್ತಿ ಇನ್ನೊಂದು ಕಾರನ್ನು ಚಲಾಯಿಸುತ್ತಿದ್ದರು.
ಕಾರು ಢಿಕ್ಕಿ ಹೊಡೆದ ಕೂಡಲೇ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು,ದರ್ಶನ್ ತನ್ನ ಕಾರನ್ನು ನಿಲ್ಲಿಸಲು ಹೋದಾಗ, ಪ್ರಿಯಾಂಕಾ ತನ್ನ ವಾಹನದ ವೇಗ ಹೆಚ್ಚಿಸಿದ್ದು, ದರ್ಶನ್ ಕಾರಿನ ಬಾನೆಟ್ ಮೇಲಿದ್ದು, ಪ್ರಿಯಾಂಕಾ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಕಾರು ಓಡಿಸಿದ್ದಾರೆ.ನಿಲ್ಲಿಸಲು ಕೇಳಿದಾಗ, ಆಕೆ ಅಸಭ್ಯ ಚಿಹ್ನೆ ತೋರಿಸಿ ಓಡಿಸುತ್ತಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಿಯಾಂಕಾ ಕಾರು ನಿಲ್ಲಿಸಿದ ನಂತರ, ದರ್ಶನ್ ಮತ್ತು ಅವರ ಸ್ನೇಹಿತರು ಕಾರಿನ ಭಾಗಗಳನ್ನು ಒಡೆದರು, ಎರಡೂ ಕಡೆಯವರು ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ,” ಎಂದು ಡಿಸಿಪಿ ಹೇಳಿದ್ದಾರೆ.
ಪ್ರಿಯಾಂಕಾ ವಿರುದ್ಧ ಐಪಿಸಿಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದರೆ, ಕಾರಿಗೆ ಹನಿ ಮಾಡಿದ್ದಕ್ಕಾಗಿ ಪೊಲೀಸರು ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ