BHISHM; ಭಾರತದಿಂದ ಜಗತ್ತಿನಲ್ಲೇ ಮೊದಲ ಸ್ಥಳಾಂತರಿ ಆಸ್ಪತ್ರೆ ಸಿದ್ಧ
"ಆರೋಗ್ಯ ಮೈತ್ರಿ ಕ್ಯೂಬ್' ತಯಾರು, ವಿಪತ್ತು ನಿರ್ವಹಣೆಗಾಗಿಯೇ ಈ ಹೆಜ್ಜೆ
Team Udayavani, Sep 3, 2023, 6:50 AM IST
ಹೊಸದಿಲ್ಲಿ: ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಏರ್ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ. ಭೀಷ್ಮ್ (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹಯೋಗ್ ಹಿತ ಆ್ಯಂಡ್ ಮೈತ್ರಿ) ಯೋಜನೆಯಡಿ “ಆರೋಗ್ಯ ಮೈತ್ರಿ ಕ್ಯೂಬ್’ ಅನ್ನು ಭಾರತ ಸಿದ್ಧಪಡಿಸಿದೆ.
ಏನೇನು ಸೌಲಭ್ಯ?
ಇದರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಣ್ಣ ಐಸಿಯು, ವೆಂಟಿಲೇಟರ್, ರಕ್ತ ಪರೀಕ್ಷಾ ಸಾಧನ, ಎಕ್ಸ್ ರೇ ಮೆಷಿನ್, ಅಡುಗೆ ಮನೆ ಸೌಲಭ್ಯ, ಆಹಾರ, ನೀರು, ವಸತಿ, ಪವರ್ ಜನರೇಟರ್ ಮತ್ತು ಇತರ ಸೌಲಭ್ಯಗಳು “ಆರೋಗ್ಯ ಮೈತ್ರಿ ಕ್ಯೂಬ್’ನಲ್ಲಿ ಇರಲಿವೆ. ಇವುಗಳನ್ನು ಒಟ್ಟು 72 ಕ್ಯೂಬ್ಗಳಲ್ಲಿ ಪ್ಯಾಕ್ ಮಾಡಿ, ತಲಾ 12 ಕ್ಯೂಬ್ಗಳಂತೆ ಅವುಗಳನ್ನು ಮೂರು ಫ್ರೆàಮ್ಗಳಲ್ಲಿ ಇಟ್ಟು, ಬೇರೆಡೆ ಸಾಗಿಸಬಹುದಾಗಿದೆ.
200 ಮಂದಿಗೆ ಚಿಕಿತ್ಸೆ: “ಆರೋಗ್ಯ ಮೈತ್ರಿ ಕ್ಯೂಬ್’ನಲ್ಲಿ ಒಟ್ಟು 200 ಮಂದಿ ಗಾಯಾಳುಗಳಿಗೆ ನಿರಂತರ 48 ಗಂಟೆಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರಮುಖವಾಗಿ ಇದರಲ್ಲಿ, ಬುಲೆಟ್ನಿಂದ ಗಾಯಗಳಾದ 40 ಮಂದಿ, ತೀವ್ರ ಗಾಯಗಳಾದ 25 ಮಂದಿ, ತೀವ್ರ ಸುಟ್ಟ ಗಾಯಗಳಾದ 25 ಮಂದಿ, ತಲೆಗೆ ಪೆಟ್ಟಾದ 10 ಮಂದಿ, ಮೂಳೆ ಮುರಿತ, ಎದೆಗೆ ಗಾಯ, ಬೆನ್ನು ಮೂಳೆಯ ಗಾಯ ಮತ್ತು ಮುರಿತಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ “ಭೀಷ್ಮ್ ‘ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು. ಅನಂತರ ಇದಕ್ಕೆ ಸಂಬಂಧಿಸಿದಂತೆ ರಕ್ಷಣ ಸಚಿವಾಲಯವು ಕಾರ್ಯಪಡೆಯನ್ನು ರಚಿಸಿತು. ಜಿ20 ಆರೋಗ್ಯ ಸಚಿವರ ಸಮಾವೇಶದ ನೇಪಥ್ಯದಲ್ಲಿ
ಗುಜರಾತ್ನ ಗಾಂಧಿನಗರದಲ್ಲಿ ಆಗಸ್ಟ್ನಲ್ಲಿ ನಡೆದ ಮೆಡ್ಟೆಕ್ ಎಕ್ಸ್ಪೋದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.
“ಆರೋಗ್ಯ ಮೈತ್ರಿ’ ಯೋಜನೆ
ನೈಸರ್ಗಿಕ ವಿಕೋಪ ಅಥವಾ ಮಾನವ ಬಿಕ್ಕಟ್ಟಿನ ಸಂದರ್ಭ ದಲ್ಲಿ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಭಾರ ತವು ಅಗತ್ಯ ವೈದ್ಯಕೀಯ ಸರಬರಾಜು ಒದಗಿ ಸುವ “ಆರೋಗ್ಯ ಮೈತ್ರಿ’ ಯೋಜನೆಯನ್ನು ಪ್ರಧಾನಿ ಮೋದಿ ಅವರು ಇದೇ ವರ್ಷದ ಜನವರಿ ಯಲ್ಲಿ ನಡೆದ ಜಾಗತಿಕ ದಕ್ಷಿಣ ಶೃಂಗಸಭೆಯಲ್ಲಿ ಘೋಷಿಸಿದರು. ಜುಲೈಯಲ್ಲಿ ಮೊದಲ ಬಾರಿಗೆ “ಆರೋಗ್ಯ ಮೈತ್ರಿ ಕ್ಯೂಬ್’ ಅನ್ನು ಮ್ಯಾನ್ಮಾರ್ ಅಧಿಕಾರಿಗಳಿಗೆ ಪ್ರದರ್ಶಿಸ ಲಾಯಿತು. ಈ ಕ್ಯೂಬ್ಗಳನ್ನು ಮ್ಯಾನ್ಮಾರ್ಗೆ ಭಾರತ ದೇಣಿಗೆ ನೀಡಿದೆ. ಇದೇ ವೇಳೆ ಶ್ರೀಲಂಕಾಕ್ಕೆ ಒಂದು ಕ್ಯೂಬ್ ನೀಡಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್