ಭಾರತ ವಿರುದ್ಧ ಆಸೀಸ್‌ ಬೃಹತ್‌ ಮೊತ್ತ


Team Udayavani, Mar 11, 2023, 5:42 AM IST

kwaja

ಅಹ್ಮದಾಬಾದ್‌: ಮೊದಲೆರಡು ಟೆಸ್ಟ್‌ ಪಂದ್ಯಗಳು ಮೂರೇ ದಿನಕ್ಕೆ ಮುಗಿದುದನ್ನು ಕಂಡು ನಿರಾಶರಾದ ಕ್ರಿಕೆಟ್‌ ಪ್ರೇಮಿಗಳಿಗೆ ಅಹ್ಮದಾಬಾದ್‌ನಲ್ಲಿ ಬ್ಯಾಟಿಂಗ್‌ ರಸದೌತಣವೊಂದು ಲಭಿಸುವ ಸಾಧ್ಯತೆ ಗೋಚರಿಸಿದೆ.

ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್‌ ಮೊತ್ತವನ್ನು 480ಕ್ಕೆ ವಿಸ್ತರಿಸಿದ್ದು, ಭಾರತ ದ್ವಿತೀಯ ದಿನದಾಟದ ಕೊನೆಯ ಅವಧಿಯ 10 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ ವಿಕೆಟ್‌ ನಷ್ಟವಿಲ್ಲದೆ 36 ರನ್‌ ಗಳಿಸಿದೆ.

ಉಸ್ಮಾನ್‌ ಖ್ವಾಜಾ ಅವರ 180 ರನ್‌ ಸಾಹಸ, ಕ್ಯಾಮರಾನ್‌ ಗ್ರೀನ್‌ ಅವರ ಚೊಚ್ಚಲ ಶತಕ, ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ಅವರ 6 ವಿಕೆಟ್‌ ಸಾಧನೆ ಎರಡನೇ ದಿನದಾಟದ ವಿಶೇಷವಾಗಿತ್ತು.

ಆಸ್ಟ್ರೇಲಿಯ 4ಕ್ಕೆ 255 ರನ್‌ ಗಳಿಸಿದಲ್ಲಿಂದ ಶುಕ್ರವಾರದ ಆಟ ಮುಂದುವರಿಸಿತ್ತು. ಆಗ ಆರಂಭಕಾರ ಖ್ವಾಜಾ 104, ಗ್ರೀನ್‌ 49 ರನ್‌ ಮಾಡಿ ಆಡುತ್ತಿದ್ದರು. ದ್ವಿತೀಯ ದಿನದ ಮೊದಲ ಅವಧಿಯ್ದುಕ್ಕೂ ಇವರದೇ ಬ್ಯಾಟಿಂಗ್‌ ವೈಭವ ಮುಂದುವರಿಯಿತು. ಭಾರತ ಈ ಜೋಡಿಯನ್ನು ಬೇರ್ಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿತಾದರೂ ಯಶಸ್ವಿಯಾಗಲಿಲ್ಲ. ಊಟದ ವೇಳೆ ಆಸೀಸ್‌ ಸ್ಕೋರ್‌ 347ಕ್ಕೆ ಏರಿತು. ಆಗಲೇ ಖ್ವಾಜಾ 150ರ ಗಡಿ ತಲುಪಿದ್ದರು. ಗ್ರೀನ್‌ ಶತಕವನ್ನು ಸಮೀಪಿಸಿದ್ದರು(95).

ದ್ವಿತೀಯ ಅವಧಿಯ ಆಟದಲ್ಲಿ ಗ್ರೀನ್‌ ಅವರ ಮೊದಲ ಟೆಸ್ಟ್‌ ಶತಕ ದಾಖಲಾಯಿತು. ಇವರ ಮೊತ್ತ 114ಕ್ಕೆ ಏರಿದೊಡನೆ ಅಶ್ವಿ‌ನ್‌ ದೊಡ್ಡದೊಂದು ಬ್ರೇಕ್‌ ಒದಗಿಸಿದರು. ಕೀಪರ್‌ ಭರತ್‌ ಕೈಗೆ ಕ್ಯಾಚ್‌ ನೀಡಿದ ಗ್ರೀನ್‌ ಪೆವಿಲಿಯನ್‌ ಸೇರಿಕೊಂಡರು. 170 ಎಸೆತಗಳ ಈ ಸೊಗಸಾದ ಆಟದಲ್ಲಿ 18 ಬೌಂಡರಿ ಸೇರಿತ್ತು.
ಖ್ವಾಜಾ-ಗ್ರೀನ್‌ 59.4 ಓವರ್‌ಗಳ ಜತೆಯಾಟದಲ್ಲಿ 5ನೇ ವಿಕೆಟಿಗೆ 208 ರನ್‌ ರಾಶಿ ಹಾಕಿದರು. ಗ್ರೀನ್‌ ನಿರ್ಗಮನದ ಬೆನ್ನಲ್ಲೇ ಆಲೆಕ್ಸ್‌ ಕ್ಯಾರಿ(0) ಮತ್ತು ಮಿಚೆಲ್‌ ಸ್ಟಾರ್ಕ್‌(6) ವಿಕೆಟ್‌ ಕೂಡ ಬೆನ್ನು ಬೆನ್ನಿಗೆ ಬಿತ್ತು. ಟೀ ವೇಳೆ ಆಸೀಸ್‌ 7ಕ್ಕೆ 409 ರನ್‌ ಗಳಿಸಿತ್ತು. 180 ರನ್‌ ಮಾಡಿದ್ದ ಖ್ವಾಜಾ ದ್ವಿಶತಕದ ನಿರೀಕ್ಷೆಯಲ್ಲಿದ್ದರು.
ಆದರೆ ಟೀ ಅನಂತರದ ಪ್ರಥಮ ಎಸೆತದಲ್ಲೇ ಅಕ್ಷರ್‌ ಪಟೇಲ್‌ ಇದಕ್ಕೆ ಅಡ್ಡಗಾಲಿಕ್ಕಿದರು. ಖ್ವಾಜಾ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. 10 ಗಂಟೆ, 11 ನಿಮಿಷಗಳ ಮ್ಯಾರಥಾನ್‌ ಇನ್ನಿಂಗ್ಸ್‌ ಕೊನೆಗೊಂಡಿತು. 422 ಎಸೆತ ಎದುರಿಸಿದ ಖ್ವಾಜಾ 21 ಬೌಂಡರಿ ಹೊಡೆದಿದ್ದರು.

409 ರನ್‌ ಆದಾಗ 8ನೇ ವಿಕೆಟ್‌ ರೂಪದಲ್ಲಿ ಖ್ವಾಜಾ ವಿಕೆಟ್‌ ಬಿದ್ದೊಡನೆಯೇ ಆಸೀಸ್‌ ಇನ್ನಿಂಗ್ಸ್‌ ಕೂಡ ಬೇಗನೇ ಕೊನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬೌಲರ್‌ಗಳಾದ ನಥನ್‌ ಲಿಯಾನ್‌(34) ಮತ್ತು ಟಾಡ್‌ ಮರ್ಫಿ(41) ಕೂಡ ಬ್ಯಾಟ್‌ ಬೀಸತೊಡಗಿದಾಗ ಭಾರತದ ಬೌಲರ್ ಮತ್ತೆ ಬೆವರು ಸುರಿಸತೊಡಗಿದರು. 9ನೇ ವಿಕೆಟಿಗೆ 70 ರನ್‌ ಹರಿದುಬಂತು. ಸ್ಕೋರ್‌ 480ರ ತನಕ ಬೆಳೆಯಿತು.

ದ್ವಿತೀಯ ದಿನ ಉರುಳಿದ 6 ವಿಕೆಟ್‌ಗಳಲ್ಲಿ 5 ಅಶ್ವಿ‌ನ್‌ ಪಾಲಾಯಿತು. ಅವರ ಸಾಧನೆ 91ಕ್ಕೆ 6. ಒಂದು ವಿಕೆಟ್‌ ಅಕ್ಷರ್‌ ಪಟೇಲ್‌ ಉರುಳಿಸಿದರು.
ರೋಹಿತ್‌-ಗಿಲ್‌ ಭರವಸೆಯ ಆರಂಭ ಒದಗಿಸುವ ಸೂಚನೆ ನೀಡಿದ್ದಾರೆ. ಕ್ರಮವಾಗಿ 17 ಮತ್ತು 18 ರನ್‌ ಮಾಡಿ ಆಡುತ್ತಿದ್ದಾರೆ. ಲಿಯಾನ್‌ ಎಸೆತದಲ್ಲಿ ಗಿಲ್‌ ಒಂದು ಸಿಕ್ಸರ್‌ ಕೂಡ ಎತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-480(ಖ್ವಾಜಾ 180, ಗ್ರೀನ್‌ 114, ಮರ್ಫಿ 41, ಲಿಯಾನ್‌ 34, ಹೆಡ್‌ 32, ಅಶ್ವಿ‌ನ್‌ 91ಕ್ಕೆ 6, ಶಮಿ 134ಕ್ಕೆ 2, ಅಕ್ಷರ್‌ 47ಕ್ಕೆ 1, ಜಡೇಜ 89ಕ್ಕೆ 1). ಭಾರತ-ವಿಕೆಟ್‌ ನಷ್ಟವಿಲ್ಲದೆ 36 (ಗಿಲ್‌ ಬ್ಯಾಟಿಂಗ್‌ 18, ರೋಹಿತ್‌ ಬ್ಯಾಟಿಂಗ್‌ 17).

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.