ವಾವ್! ಏನು ರುಚಿ ಅಂತೀರಾ ಈ ಕಟ್ಲೆಟ್….ಸುಲಭ ವಿಧಾನ ಇಲ್ಲಿದೆ…
ಈ ರೀತಿ ಹಾಗಲಕಾಯಿ ಕಟ್ಲೆಟ್ ಮಾಡಿದ್ರೆ ಎಲ್ಲರೂ ಇಷ್ಟ ಪಟ್ಟು ತಿಂತಾರೆ....
ಶ್ರೀರಾಮ್ ನಾಯಕ್, Nov 25, 2022, 5:45 PM IST
ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿಯೆಂದರೆ ಅದು ಹಾಗಲಕಾಯಿ. ಆರೋಗ್ಯದ ದೃಷ್ಟಿಯಲ್ಲಿ ಈ ತರಕಾರಿ ಉತ್ತಮ ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹಾಗೂ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಮಾತ್ರವಲ್ಲದೇ ಹಾಗಲಕಾಯಿ ಸೇವನೆಯಿಂದ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.ಹಾಗಲಕಾಯಿಯಿಂದ ಸಾಕಷ್ಟು ರುಚಿಯಾದ ಅಡುಗೆಯನ್ನು ಮಾಡುತ್ತಾರೆ. ಉದಾಃ ಪಲ್ಯ,ಗೊಜ್ಜು, ಸಾಂಬಾರ್,ಚಟ್ನಿ,ಕಿಸ್ಮುರಿ,ಚಿಪ್ಸ್.. ಹೀಗೆ ಪಟ್ಟಿ ಬಳೆಯುತ್ತ ಹೋಗುತ್ತದೆ.ಆದರೆ ನೀವು ಹಾಗಲಕಾಯಿಯ ಕಟ್ಲೆಟ್ ಮಾಡಿ ತಿಂದಿದ್ದೀರಾ..ಹಾಗಿದ್ದರೆ ಅತಿ ಕಡಿಮೆ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು.ಈ ರೆಸಿಪಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ….
ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ-1, ಬೇಯಿಸಿದ ಆಲೂಗಡ್ಡೆ (ಬಟಾಟೆ)-2 , ತುರಿದ ಕ್ಯಾರೆಟ್-ಅರ್ಧ ಕಪ್, ಬೇಯಿಸಿದ ಹಸಿ ಬಟಾಣಿ-5ಚಮಚ, ಅಮ್ಚೂರ್ ಪುಡಿ-1ಟೀ ಸ್ಪೂನ್, ಖಾರದ ಪುಡಿ-1ಚಮಚ, ಧನಿಯಾ ಪುಡಿ-ಅರ್ಧ ಚಮಚ, ಹಸಿಮೆಣಸು-2. ಬಾಂಬೆ ರವೆ-ಸ್ವಲ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಹಾಗಲಕಾಯಿ ತಿರುಳು ತೆಗೆದು ತುರಿದುಕೊಳ್ಳಿ. ತದನಂತರ ಒಂದು ಬೌಲ್ಗೆ ಹಾಗಲಕಾಯಿಯ ತುರಿ ಮತ್ತು ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಮತ್ತೊಂದು ಪಾತ್ರೆಗೆ ಬೇಯಿಸಿದ ಬಟಾಟೆ, ತುರಿದಿಟ್ಟ ಕ್ಯಾರೆಟ್, ಬೇಯಿಸಿದ ಹಸಿ ಬಟಾಣಿ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ತುರಿದಿಟ್ಟ ಹಾಗಲಕಾಯಿ, ಧನಿಯಾ ಪುಡಿ, ಅಮ್ಚೂರ್ ಪುಡಿ, ಖಾರದ ಪುಡಿ, ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿ. ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಕಟ್ಟಿ, ತುಸು ಒತ್ತಿ ಚಪ್ಪಟೆ ಮಾಡಿ ರವೆಯಲ್ಲಿ ಹೊರಳಿಸಿ ತೆಗೆಯಿರಿ. ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಸವರಿ ಕಾದ ನಂತರ 4ರಿಂದ 5 ಕಟ್ಲೆಟ್ ಗಳನ್ನಿಟ್ಟು ಎರಡೂ ಬದಿ ಹುರಿಯಿರಿ ನೀವು ಇದನ್ನು ಎಣ್ಣೆಯಲ್ಲಿಯೂ ಸಹ ಕರಿದು ತೆಗೆಯಬಹುದು). ಟೊಮೆಟೋ ಸಾಸ್ ಜೊತೆಗೆ ಬಿಸಿ ಬಿಸಿಯಾದ ಹಾಗಲಕಾಯಿ ಕಟ್ಲೆಟ್ ಸವಿಯಿರಿ.
ಸೂಚನೆ: ಕಟ್ಲೆಟ್ ಕೋಟಿಂಗ್ ಗೆ ರವೆ ಬದಲಿಗೆ ಬ್ರೆಡ್ ಕ್ರಂಬ್ಸ್ ಸಹ ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್ ಪಡೆ
Sullia ಮರ ಕಡಿಯುತ್ತಿದ್ದಾಗ ದುರ್ಘಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ