ದೆಹಲಿಗೆ ಬಿಜೆಪಿ ಬೆಟ್ಟದಷ್ಟು ಕಸದ ರಾಶಿ ಬಿಟ್ಟು ಬೇರೆ ಏನೂ ಕೊಡುಗೆ ಕೊಟ್ಟಿಲ್ಲ: ಕೇಜ್ರಿವಾಲ್
ಘಾಜಿಪುರದ ಬೃಹತ್ ಕಸದ ರಾಶಿಯನ್ನು ವೀಕ್ಷಿಸಲು ಆಗಮಿಸಿರುವುದಾಗಿ ಕೇಜ್ರಿವಾಲ್ ಹೇಳಿದರು.
Team Udayavani, Oct 27, 2022, 2:38 PM IST
ನವದೆಹಲಿ: “ಸ್ವಲ್ಪ ಯೋಚಿಸಿ, ಭಾರತೀಯ ಜನತಾ ಪಕ್ಷ ದೆಹಲಿಗೆ ಬೆಟ್ಟದಷ್ಟು ಕಸದ ರಾಶಿಯನ್ನು ಹೊರತುಪಡಿಸಿ ಬೇರೆ ಏನೂ ಕೊಡುಗೆ ನೀಡಿಲ್ಲ. ಒಂದು ಬಾರಿ ನಿಮ್ಮ ಪಕ್ಷವನ್ನು ಮರೆತು, ದೇಶಕ್ಕಾಗಿ ಮತ ಚಲಾಯಿಸಿ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ (ಅಕ್ಟೋಬರ್ 27) ಉತ್ತರಪ್ರದೇಶದ ಘಾಜಿಪುರದ ಕಸ ರಾಶಿ ಹಾಕುವ ಸ್ಥಳಕ್ಕೆ ಆಗಮಿಸಿದ ವೇಳೆ ಬಿಜೆಪಿ ಬೆಂಬಲಿಗರಿಗೆ ಈ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನ.11 ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ
ಮುಂಬರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ರಾಜಧಾನಿ ನವದೆಹಲಿಯ ಅತೀ ದೊಡ್ಡ ಗಾರ್ಬೆಜ್ ಡಮ್ಸ್ (ಕಸದ ರಾಶಿ ಹಾಕುವ) ಸ್ಥಳಕ್ಕೆ ಭೇಟಿ ನೀಡಿರುವುದಾಗಿ ವರದಿ ಹೇಳಿದೆ.
ಕಳೆದ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ದೆಹಲಿಯಾದ್ಯಂತ ಕಸದ ರಾಶಿ ತುಂಬಿಸಿ ಇಟ್ಟಿದೆ. ಆ ಹಿನ್ನೆಲೆಯಲ್ಲಿ ನಾನು ಇಂದು ಘಾಜಿಪುರದ ಬೃಹತ್ ಕಸದ ರಾಶಿಯನ್ನು ವೀಕ್ಷಿಸಲು ಆಗಮಿಸಿರುವುದಾಗಿ ಕೇಜ್ರಿವಾಲ್ ಹೇಳಿದರು.
पिछले 15 से दिल्ली नगर निगम में बैठी भाजपा ने पूरी दिल्ली में हर जगह कूड़ा फैला रखा है, आज इनका ग़ाज़ीपुर वाला कूड़े का पहाड़ देखने आया हूँ। LIVE https://t.co/c9Fs1KTTGv
— Arvind Kejriwal (@ArvindKejriwal) October 27, 2022
ಒಂದು ದಿನ ಸಂಬಿತ್ ಪಾತ್ರಾ ಕೂಡಾ ಬಿಜೆಪಿ ಕೊಳಕು ಪಕ್ಷ, ಆಮ್ ಆದ್ಮಿ ಒಳ್ಳೆಯ ಪಕ್ಷ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಎಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಆಮ್ ಆದ್ಮಿ ಪಕ್ಷದ ಜತೆ ಕೈಜೋಡಿಸುವ ದಿನ ಬರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!