ಬಿಜೆಪಿ v/s ಎಸ್ ಪಿ; ಗುಜರಾತ್ ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಿದು
ಮೋದಿ ತವರಲ್ಲಿ ತನ್ನದೇ ಆದ ಪ್ರಾಬಲ್ಯ ತೋರಿರುವ ಕಂಧಲ್ ಜಡೇಜಾ
Team Udayavani, Nov 23, 2022, 2:16 PM IST
ಗಾಂಧಿನಗರ : ಗುಜರಾತ್ ನಲ್ಲಿ ವಿಧಾನಸಭಾ ಚುನಾವಣಾ ಕದನ ತೀವ್ರ ರಂಗು ಪಡೆದಿದ್ದು,ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಬಿಜೆಪಿಯ ಮಹಿಳಾ ಅಭ್ಯರ್ಥಿಯೊಬ್ಬರ ವಿರುದ್ಧ ಕಣದಲ್ಲಿರುವ ಕ್ಷೇತ್ರವೊಂದು ಆರೋಪ-ಪ್ರತ್ಯಾರೋಪಗಳಿಂದ ದೇಶದ ಗಮನ ಸೆಳೆದಿದೆ.
ಕುಟಿಯಾನದಿಂದ ಎಸ್ಪಿ ಅಭ್ಯರ್ಥಿಯಾಗಿ ಕಂಧಲ್ ಜಡೇಜಾ ಅವರು ಸ್ಪರ್ಧಿಸಿದ್ದು, ಜನರಿಗೆ ಮತ ಹಾಕುವಂತೆ ಬೆದರಿಕೆ ಹಾಕುತ್ತಾರೆ. ನಾನು ಯಾರಿಗೂ ಬೆದರಿಕೆ ಹಾಕುವುದಿಲ್ಲ. ನನ್ನ ಮತದಾರರಿಗೆ ನಾನು ಇಷ್ಟಪಟ್ಟರೆ ನನಗೆ ಮತ ನೀಡಿ ಎಂದು ಪ್ರೀತಿಯಿಂದ ಹೇಳುತ್ತೇನೆ. ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಧೆಲಿಬೆನ್ ಒಡೆದಾರ ಹೇಳಿದ್ದಾರೆ.
‘ಕಂಧಲ್ ಜಡೇಜಾ ವಿರುದ್ಧ ಸ್ಪರ್ಧಿಸಲು ನನಗೆ ಧೈರ್ಯವಿದೆ. ನಾನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ…ಕುಟಿಯಾನ ಕ್ಷೇತ್ರದ ಮತದಾರರು ನನ್ನನ್ನು ತಿಳಿದಿದ್ದಾರೆ ಮತ್ತು ಗೌರವಿಸುತ್ತಾರೆ. ನಾನು ಬಡವರನ್ನು ಮತ್ತು ಎಲ್ಲರನ್ನೂ ನೋಡಿಕೊಳ್ಳುತ್ತೇನೆ. ಹಾಗಾಗಿ, ಅವರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಧೆಲಿಬೆನ್ ಹೇಳಿದ್ದಾರೆ.
‘2012ರಲ್ಲಿ ಎನ್ಸಿಪಿಯನ್ನು ಇಲ್ಲಿಗೆ ತಂದಾಗ ಯಾರಿಗೂ ಗೊತ್ತಿರಲಿಲ್ಲ. ನಾನು ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಜನ ನನ್ನ ಹೆಸರಿನ ಮೇಲೆ ಮತ ಹಾಕಿದ್ದಾರೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ, ಎಲ್ಲರೂ ಅನುಸರಿಸಿದರು ಮತ್ತು ರಾಜೀನಾಮೆ ನೀಡಿದರು. ಗುಜ್ನಲ್ಲಿ ಎನ್ಸಿಪಿ ಮುಗಿದಿದೆ. ನಾನು ಈಗ ಸೈಕಲ್ ತುಳಿಯುತ್ತಿದ್ದೇನೆ’ ಎಂದು ಕುಟಿಯಾನ ಎಸ್ಪಿ ಅಭ್ಯರ್ಥಿ ಕಂಧಲ್ ಜಡೇಜಾ ಹೇಳಿಕೆ ನೀಡಿದ್ದಾರೆ.
‘ಕಂಧಲ್ ಜಡೇಜಾ ಅವರ ಕುಟುಂಬದ ಹಿನ್ನೆಲೆಯನ್ನು ಗಮನಿಸಿದರೆ ಜನರು ಭಯದಿಂದ ಅಥವಾ ಪ್ರೀತಿಯಿಂದ ಮತ ಚಲಾಯಿಸುತ್ತಾರೆಯೇ ?’ಎಂದು ಸುದ್ದಿಗಾರರು ಕೇಳಿದಾಗ,’80-90 ರ ದಶಕದಲ್ಲಿ ನೀವು ಇದನ್ನು ನನ್ನನ್ನು ಕೇಳಿದ್ದರೆ, ನಾನು ಭಯದಿಂದ ಹೇಳುತ್ತಿದ್ದೆ. ಆಗ ಬ್ಯಾಲೆಟ್ ಪೇಪರ್ ಇತ್ತು. ಈಗ ಇವಿಎಂ ಇದೆ. ನನ್ನ ಕೆಲಸದಿಂದ ಮಾತ್ರ ನನಗೆ ಜನರು ನನಗೆ ಮತ ಹಾಕುತ್ತಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ