ಮಮತಾ ನಿಮ್ಮನ್ನೂ ನಡುನೀರಲ್ಲೇ ಕೈಬಿಡುತ್ತಾರೆ: ಟಿಎಂಸಿ ಶಾಸಕರಿಗೆ ಬಿಜೆಪಿ ಎಚ್ಚರಿಕೆ
ಇದು ಇತರ ಸಚಿವರು, ಶಾಸಕರು, ಟಿಎಂಸಿ ಕಾರ್ಯಕರ್ತರಿಗೂ ಅನ್ವಯವಾಗಲಿದೆ
Team Udayavani, Aug 12, 2022, 10:28 AM IST
ಕೋಲ್ಕತಾ: ಒಂದು ವೇಳೆ ನೀವೂ ಕೂಡಾ ಯಾವುದೇ ರೀತಿಯಲ್ಲೂ ಸಿಕ್ಕಿಹಾಕಿಕೊಂಡರು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುನೀರಿನಲ್ಲೇ ಕೈಬಿಡುತ್ತಾರೆ…ಇದು ತೃಣಮೂಲ ಕಾಂಗ್ರೆಸ್ ಶಾಸಕರು ಮತ್ತು ಕಚೇರಿ ಸಿಬ್ಬಂದಿಗಳಿಗೆ ಭಾರತೀಯ ಜನತಾ ಪಕ್ಷ ನೀಡಿರುವ ಎಚ್ಚರಿಕೆಯಾಗಿದೆ!
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಮತ್ತೊಬ್ಬ ವಲಸೆ ಕಾರ್ಮಿಕ ಸಾವು
ಭ್ರಷ್ಟಾಚಾರ ಹಾಗೂ ಇತರ ಪ್ರಕರಣಗಳಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಟಿಎಂಸಿ ಮುಖಂಡರಾದ ಪಾರ್ಥ ಚಟರ್ಜಿ ಹಾಗೂ ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ ನಂತರ ಪಶ್ಚಿಮಬಂಗಾಳದ ಬಿಜೆಪಿ ಮಾಧ್ಯಮ ಸೆಲ್ ನ ಅಮಿತ್ ಮಾಳ್ವಿಯಾ ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಬಂಧಿತ ಪಾರ್ಥ ಮತ್ತು ಅನುಬ್ರತಾ ಮೊಂಡಲ್ ಅವರಿಗೆ ತುರ್ತು ಅಗತ್ಯವಿರುವ ಸಂದರ್ಭದಲ್ಲಿಯೂ ಮೊಬೈಲ್ ಕರೆಯನ್ನೂ ಕೂಡಾ ಮಮತಾ ಬ್ಯಾನರ್ಜಿ ಸ್ವೀಕರಿಸುತ್ತಿಲ್ಲ. ತಮಗೆ ತೊಂದರೆಯಾಗುತ್ತಿದೆ ಅಂತ ತಿಳಿದಾಗ ಮಮತಾ ಇದೇ ರೀತಿ ಕೈಬಿಡುತ್ತಾರೆ. ಇದು ಇತರ ಸಚಿವರು, ಶಾಸಕರು, ಟಿಎಂಸಿ ಕಾರ್ಯಕರ್ತರಿಗೂ ಅನ್ವಯವಾಗಲಿದೆ ಎಂದು ಮಾಳ್ವಿಯಾ ಆರೋಪಿಸಿದ್ದಾರೆ.
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಬ್ರತಾ ಮೊಂಡಲ್ ನಂತಹ ಹಲವಾರು ಕ್ರಿಮಿನಲ್ ಗಳನ್ನು ಪೋಷಿಸಿರುವುದಾಗಿ ಮಾಳ್ವಿಯಾ ದೂರಿದ್ದಾರೆ. ಮಮತಾ ಬ್ಯಾನರ್ಜಿ ತನ್ನ ಕಣ್ಗಾವಲಿನಲ್ಲಿ ಅಪರಾಧ ಮತ್ತು ಸುಲಿಗೆ ಮಾಡುವ ಗುಂಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ