ಮಿದುಳು ಕ್ಯಾನ್ಸರ್ ಚಿಕಿತ್ಸೆ ಭಾರತೀಯ ವೈದ್ಯೆತಂಡ ಕೊಡುಗೆ
Team Udayavani, May 20, 2023, 7:26 AM IST
ವಾಷಿಂಗ್ಟನ್: ಮಿದುಳಿನ ಕ್ಯಾನ್ಸರ್ಗೆ ಗುರಿಯಾಗಿರುವ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಬಹುದೊಡ್ಡ ಸಹಾಯ ಒದಗಿಸುವಂಥ ಆವಿಷ್ಕಾರವನ್ನು ಭಾರತ ಮೂಲದ ವೈದ್ಯೆ ನೇತೃತ್ವದ ಅಮೆರಿಕ ವೈದ್ಯರ ತಂಡ ಪತ್ತೆಹಚ್ಚಿದ್ದು, ಈ ಆವಿಷ್ಕಾರ ರೋಗಿಗಳ ಜೀವ ಉಳಿಸುವಲ್ಲಿ ಸಹಾಯವಾಗಲಿದೆ ಎಂದು “ನೇಚರ್” ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ವರದಿಗಳ ಪ್ರಕಾರ ಭಾರತದ ಕೇರಳ ಮೂಲದ ವೈದ್ಯೆಯಾದ ಸರಿತಾ ಕೃಷ್ಣಾ ಅವರ ನೇತೃತ್ವದಲ್ಲಿ ಸ್ಯಾನ್ಫ್ಯಾನ್ಸಿಸ್ಕೋ ಮೆಡಿಕಲ್ ಸೆಂಟರ್ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಆ ಪ್ರಕಾರ ಕ್ಯಾನ್ಸರ್ಗೆ ಗುರಿಯಾಗಿರುವ ಮಿದುಳಿನ ಜೀವಕೋಶಗಳು ಇತರೆ ಆರೋಗ್ಯಕರ ಜೀವಕೋಶಗಳೊಂದಿಗೆ ಸಂಪರ್ಕಸಾಧಿಸಬಲ್ಲವು. ಈ ರೀತಿ ಸಂಪರ್ಕ ಸಾಧಿಸಿದರೆ ರೋಗಿಯ ಮಿದುಳಿನ ಕ್ಯಾನ್ಸರ್ ಉಲ್ಬಣಗೊಳ್ಳುವ ಜತೆಗೆ ಆತನ ಅರಿವಿನ ಶಕ್ತಿ ವೇಗವಾಗಿ ನಷ್ಟವಾಗುವುದಲ್ಲದೇ ಬೇಗ ಸಾವಿನ ಅಂಚಿಗೆ ನೂಕಬಲ್ಲದಂತೆ.
ಆದರೆ, ಈ ಕ್ಯಾನ್ಸರ್ಪೀಡಿತ ಹಾಗೂ ಆರೋಗ್ಯಕರ ಜೀವಕೋಶಗಳ ಸಂಪರ್ಕವನ್ನು ಸಾಮಾನ್ಯವಾಗಿ ಬಳಕೆಮಾಡುವ ಆ್ಯಂಟಿ-ಸೀಜರ್ ಡ್ರಗ್ ಗುಣಪಡಿಸಬಲ್ಲದು ಎಂದು ಸಂಶೋಧಕರ ತಂಡ ಪತ್ತೆ ಹಚ್ಚಿದೆ. ಈ ಚಿಕಿತ್ಸೆ ವಿಧಾನವು ಮಿದುಳಿನ ಕ್ಯಾನ್ಸರ್ನಲ್ಲಿ ಅತೀ ಅಪಾಯಕಾರಿ ಎನ್ನಲಾಗುವ ಗ್ಲಿಯೋಬ್ಲಾಸ್ಟೋಮಾ ರೋಗಕ್ಕೆ ತುತ್ತಾದ ರೋಗಿಗಳ ಜೀವಿತಾವಧಿ ವೃದ್ಧಿಸಲು ಸಹಾಯವಾಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!