BRS v/s BJP ; ಬಂಡಿ ಸಂಜಯ್ ಕೋರ್ಟ್ ಗೆ ಬರುತ್ತಿದ್ದಂತೆ ಬಿಆರ್ ಎಸ್ ಪ್ರತಿಭಟನೆ
Team Udayavani, Apr 5, 2023, 6:16 PM IST
ಹನುಮಕೊಂಡ : ಬಂಧನಕ್ಕೊಳಗಾಗಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಪೊಲೀಸರು ಕರೆತಂದಾಗ ಹನುಮಕೊಂಡ ಜಿಲ್ಲಾ ನ್ಯಾಯಾಲಯದ ಹೊರಗೆ ಬಿಆರ್ಎಸ್ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇದು ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ ಎಸ್ ಮತ್ತು ವಿಪಕ್ಷ ಬಿಜೆಪಿ ನಡುವಿನ ಹೊಸ ಸಮರಕ್ಕೆ ಕಾರಣವಾಗಿದೆ.
ಬಂಡಿ ಸಂಜಯ್ ಅವರನ್ನು ಸರಿಯಾದ ಕ್ರಮ ಅನುಸರಿಸದೆ ಬಂಧಿಸಲಾಗಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಸೆಷನ್ಸ್ 7 ವರ್ಷಗಳ ಅಡಿಯಲ್ಲಿ ಶಿಕ್ಷೆಯಾಗಿದ್ದರೆ, ಆರೋಪಿಗಳಿಗೆ ನೋಟಿಸ್ ನೀಡಿ ಸ್ಪಷ್ಟೀಕರಣವನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಅದು ನಡೆದಿಲ್ಲ, ಹಾಗಾಗಿ ಬಂಧನ ಅಕ್ರಮ ಎಂದು ಬಂಡಿ ಸಂಜಯ್ ಪರ ವಕೀಲ ಶ್ಯಾಮ್ ಸುಂದರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ರಿಮಾಂಡ್ ವರದಿಯನ್ನು ಸ್ವೀಕರಿಸದಂತೆ ನಾವು ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸುತ್ತೇವೆ, ಏಕೆಂದರೆ ಅವರಿಗೆ ಈ ಆರೋಪಗಳಿಗೆ ಯಾವುದೇ ಸಂಬಂಧವಿಲ್ಲ ಮತ್ತು ಎಫ್ಐಆರ್ನಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಬಹುಶಃ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ಶ್ಯಾಮ್ ಸುಂದರ್ ರೆಡ್ಡಿ ಹೇಳಿದ್ದಾರೆ.
ಬಂಡಿ ಸಂಜಯ್ ಅವರು ಮಂಗಳವಾರ ಎಸ್ಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಆರೋಪಿಸಿದ್ದರು. ಸೋರಿಕೆ ಕುರಿತು ಬಿಆರ್ಎಸ್ ಸರ್ಕಾರದ ವಿರುದ್ಧದ ದಾಳಿಯಲ್ಲಿ ಕುಮಾರ್ ಮುಂಚೂಣಿಯಲ್ಲಿದ್ದಾರೆ, ಸಿಎಂ ಕುಟುಂಬದ ಸಂಬಂಧಿಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತೀವ್ರ ಆಕ್ರೋಶದ ನಡುವೆ ಬಿಡುಗಡೆಯಾದ ಎಫ್ಐಆರ್ ನಲ್ಲಿ ಪೊಲೀಸರು ಬಂಡಿ ಸಂಜಯ್ ಅವರನ್ನು ಮಾಧ್ಯಮಿಕ ಶಾಲಾ ಪರೀಕ್ಷೆಯ ಪತ್ರಿಕೆಗಳ ಸೋರಿಕೆಯ ವಿಚಾರದಲ್ಲಿ ಬಂಧಿಸಿದ್ದಾರೆ. ಇದಕ್ಕೂ ಮುನ್ನ, ಮಾರ್ಚ್ 24 ರಂದು ತನ್ನ ಮುಂದೆ ಹಾಜರಾಗುವಂತೆ ಎಸ್ಐಟಿ ಸಂಜಯ್ ಕುಮಾರ್ಗೆ ಸಮನ್ಸ್ ನೀಡಿತ್ತು ಮತ್ತು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಮತ್ತು ಸರ್ಕಾರದ ವಿರುದ್ಧ ಅವರ ಆರೋಪಗಳಿಗೆ ಪುರಾವೆಯನ್ನು ಒದಗಿಸುವಂತೆ ಸೂಚಿಸಿತ್ತು. ಪುರಾವೆ ನೀಡಲು ಅವರನ್ನು ಕರೆಸುವ ಬದಲು ಎಸ್ಐಟಿ ತನಿಖೆ ನಡೆಸಿ ಸತ್ಯವನ್ನು ಕಂಡುಹಿಡಿಯಲಿ ಎಂದು ಸಂಜಯ್ ತಿರುಗೇಟು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ