ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ, ದಿನಾಂಕ ಇನ್ನೂ ನಿರ್ಧಾರ ಮಾಡಿಲ್ಲ : ಸಿಎಂ
Team Udayavani, Feb 8, 2021, 10:30 PM IST
ಬೆಂಗಳೂರು: ರಾಜ್ಯದ ಸದ್ಯದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ನಿತ್ಯ ವಿವಿಧ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯ ಅಭಿವೃದ್ಧಿ ಪರ ಬಜೆಟ್ ಕೊಡುವ ಸಂಬಂಧ ಚರ್ಚೆ ಮಾಡಲಾಗುತ್ತಿದೆ. ಇಂದು ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಬಿಡುವು ಮಾಡಿಕೊಂಡು ಇನ್ನೂ ಸಭೆಗಳನ್ನು ಮಾಡುತ್ತೇನೆ. ಈ ಮೂಲಕ ಇವತ್ತಿನ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್ ರೂಪಿಸುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಬಜೆಟ್ ಮಂಡನೆಯ ದಿನಾಂಕದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ:‘ಮಂತ್ರಿಗಳೇ ನಮಗೆ ನೇಮಕಾತಿ ಆದೇಶ ನೀಡಿ’ : ಸಚಿವ ಪಾಟೀಲ್ ಮನೆ ಎದುರು ಧರಣಿ