JDS ಹುಡುಗಿ ಅವರಿಗಾದ್ರೂ ಇಷ್ಟ ಆಯ್ತಲ್ಲ..!: ಮೈತ್ರಿ ಕುರಿತು ಇಬ್ರಾಹಿಂ ಪ್ರತಿಕ್ರಿಯೆ
ನಾನು ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ, ಆದರೆ...
Team Udayavani, Sep 8, 2023, 4:56 PM IST
ಚನ್ನಪಟ್ಟಣ: ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರದ ಕುರಿತು ಚರ್ಚೆ ತೀವ್ರವಾಗಿರುವ ವೇಳೆ ”ಅವರಿಗಾದರೂ ಜೆಡಿಎಸ್ ಹುಡುಗಿ ಇಷ್ಟ ಆಯ್ತಲ್ಲ” ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಶುಕ್ರವಾರ ಸ್ಪಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ”ನಮ್ಮ ಮೇಲೆ ಇರುವ ಪ್ರೀತಿಗೆ ಧನ್ಯವಾದ,ಅವರಿಗಾದರೂ ಜೆಡಿಎಸ್ ಹುಡುಗಿ ಇಷ್ಟ ಆಯ್ತಲ್ಲ. ನಾನು ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ, ಆದರೆ ಈ ಬಗ್ಗೆ ದೇವೇಗೌಡರು ಹೇಳಿಕೆ ನೀಡುತ್ತಾರೆ.ಈ ವರೆಗೆ ಮೈತ್ರಿ ಬಗ್ಗೆ ಪಕ್ಷದ ಸಭೆಯಲ್ಲಿ ಯಾವುದೇ ಚರ್ಚೆ ಆಗಲಿಲ್ಲ.ಸೆ. 10 ಕ್ಕೆ ಕಾರ್ಯಕರ್ತರ ಸಭೆ ಕರೆದಿದ್ದೇವೆ. ಅಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದರು.
ಇದನ್ನೂ ಓದಿ: JDS; ಕಾಂಗ್ರೆಸ್ ಸೋಲಿಸಬೇಕೆಂಬ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿಗೆ ಒಲವು: ಜಿ.ಟಿ ದೇವೇಗೌಡ
ಜಿ.ಟಿ. ದೇವೇಗೌರ ಅಧ್ಯಕ್ಷತೆಯ ಕೋರ್ ಕಮಿಟಿ ಮಾಡಿದ್ದೇವೆ.ಇಡೀ ರಾಜ್ಯ ಸುತ್ತಿ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ.ಬಳಿಕ ಮೈತ್ರಿ ಬಗ್ಗೆ ತಿರ್ಮಾನ ಮಾಡುತ್ತೇವೆ. ನನ್ನ ವೈಯಕ್ತಿಕ ನಿಲುವನ್ನ ಪಕ್ಷದ ಸಭೆಯಲ್ಲಿ ಹೇಳುತ್ತೇನೆ. ಜೆಡಿಎಸ್ ಪ್ರಪ್ರಾದೇಶಿಕ ಪಕ್ಷವಾಗಿದ್ದು, ಅಸ್ತಿತ್ವ, ಶಕ್ತಿ, ಕನ್ನಡಿಗರ ಸ್ವಾಭಿಮಾನ ಇರುವ ಪಕ್ಷ. ಪಕ್ಷ ಉಳಿಸಿಕೊಳ್ಳಲು ಬಿರುಗಾಳಿ, ಸುಂಟರಗಾಳಿ ಬಂದರೂ ಅದನ್ನ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದರು.
‘ಬಿಜೆಪಿ ಬಿ ಟೀಮ್ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಿತೀಶ್ ಕುಮಾರ್ ಯಾವ ಟೀಮ್ ನಲ್ಲಿದ್ರೂದ್ದರು? ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಸ್ ಓಡಿಸಿ ಕೊಂಡು ಹೋದವರು ಯಾರು? ಎ ಟೀಮ್, ಬಿ ಟೀಮ್ ಎಲ್ಲವನ್ನು ತೆಗೆಯಿರಿ. ಟೈಮ್ ಬಂದರೆ ಜನ ಉತ್ತರ ಕೊಡುತ್ತಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ