ಚಕ್ರವರ್ತಿಗಳ ಕಾಳಗದಿಂದ ಕಂಗೆಟ್ಟ ಸಾಮಂತರು..!
Team Udayavani, Jan 18, 2023, 5:30 AM IST
ಚಾಮರಾಜನಗರದಲ್ಲಿ ಡಿಫರೆಂಟ್ ಪೊಲಿಟಿಕ್ಸ್ ನಡೀತಾ ಇದೆ. ಅಲ್ಲಿ ಸ್ಥಳೀಯರ ನಿದ್ದೆಗೆಡಿಸಿರುವುದು ಹೊರಜಿಲ್ಲೆಯಿಂದ ಬಂದ ಪ್ರಬಲ ಮುಖಂಡರೊಬ್ಬರು! ರುದ್ರಪ್ರತಾಪ ತೋರುತ್ತಿರುವ ಈ ಆಕಾಂಕ್ಷಿಯನ್ನು ರಾಜ್ಯ ಬಿಜೆಪಿಯ ಪ್ರಭಾವಿ ವಿಜಯೀ ಮುಖಂಡರು ಕಳುಹಿಸಿಕೊಟ್ಟಿದ್ದಾರೆ ಎಂಬುದು ಗಲ್ಲಿಗಲ್ಲಿಯಲ್ಲೂ ಹರಿದಾಡುತ್ತಿರುವ ಮಾತು.
ಜಿಲ್ಲೆಯ ಉಸ್ತುವಾರಿ ವಹಿಸಿರುವ ಮುಖಂಡರಿಗೂ, ಮಾಜಿ ಸಿಎಂ ಅಪ್ಪಾಜಿಯವರಿಗೂ ಮುಖ ಮುನಿಸು ಆಗಿರುವುದು ಬಿಜೆಪಿ ವಲಯದಲ್ಲಿ ಗೊತ್ತಿರುವಂಥದ್ದೇ. ಮುಂದಿನ ಅಸೆಂಬ್ಲಿ ಎಲೆಕ್ಷನ್ಗೆ ಗೋವಿಂದರಾಜ ನಗರದಿಂದ, ಚಾಮರಾಜನಗರದತ್ತ ಅವರು ಬರಬಹುದು ಎಂಬ ಊಹಾ ಪೋಹಗಳೆದ್ದಿವೆ. ಅವರಿಗೆ ಡಿಸ್ಟರ್ಬ್ ಮಾಡಬೇಕೆಂಬ ಉದ್ದೇಶಕ್ಕೆ ಉಪೇಂದ್ರರು ತಮ್ಮ ದಂಡನಾಯಕರೊಬ್ಬರನ್ನು ರುದ್ರಾವತಾರ ತಾಳುವಂತೆ ಅರಿ ಕೊಠಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂಬುದು ಕಥೆ.
ಈ ಚಕ್ರವರ್ತಿಗಳ ಕಾಳಗದಿಂದ ಪಟ್ಟು ಪಾಳಯ ಹೊಂದಿರುವ ಸಣ್ಣ – ಪುಟ್ಟ ಸಾಮಂತರಾದ ನಮ್ಮ ಸ್ಪರ್ಧೆಗೆ ಕಂಟಕವೊದಗಿ ಬಂದಿತಲ್ಲ ಎಂಬ ಕೊರಗು ಸ್ಥಳೀಯ ಆಕಾಂಕ್ಷಿಗಳದಾಗಿದ್ದು ಈ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವುದು ಹೇಗೆ ಎಂದು ಚಿಂತಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?