ಮಾರ್ಚ್‌ನಲ್ಲಿ ಚೀನಾ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಭಾರತಕ್ಕೆ: ಜಿ-20 ಸಭೆಯಲ್ಲಿ ಭಾಗಿ

2019ರ ಬಳಿಕ ಮೊದಲ ಬಾರಿ ಚೀನೀ ವಿದೇಶಾಂಗ ಸಚಿವರ ಭಾರತ ಭೇಟಿ: ತೀವ್ರ ಕುತೂಹಲ

Team Udayavani, Feb 28, 2023, 4:08 PM IST

china foriegn

ನವದೆಹಲಿ: ಭಾರತದಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾದ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಭಾರತಕ್ಕೆ ಆಗಮಿಸುತ್ತಾರೆ ಎಂದು ಚೀನಾ ರಾಯಭಾರ ಕಛೇರಿ ಅಧಿಕೃತವಾಗಿ ಹೇಳಿಕೊಂಡಿದೆ.

ಭಾರತಕ್ಕೆ ಚೀನಾದ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಭೇಟಿ ಬಗ್ಗೆ ಮಾಹಿತಿ ನೀಡಿರುವ ಚೀನಾ ವಿದೇಶಾಂಗ ಕಾರ್ಯಾಲಯದ ಅಧಿಕಾರಿ ಮಾವೋ ನಿಂಗ್‌, ʻಜಾಗತಿಕ ಆರ್ಥಿಕತೆಯ ಮೇಲಿರುವ ಸವಾಲುಗಳ ಬಗ್ಗೆ ಜಿ-20 ಗಮನ ಹರಿಸಬೇಕಾಗಿದೆ. ಚೀನಾ ಕೂಡಾ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲಿದ್ದು ಬಹುಪಕ್ಷೀಯ ಸಂಬಂಧದ ಬಗ್ಗೆ ಜಗತ್ತಿಗೆ ಸಕಾರಾತ್ಮಕ ಸಂದೇಶ ರವಾನಿಸಲು ಸಿದ್ಧವಾಗಿದೆʼ ಎಂದು ಹೇಳಿದ್ದಾರೆ.

ವಿಶೇಷವೆಂದರೆ, ಭಾರತದ ಗಡಿಯಲ್ಲಿ (ಲೈನ್‌ ಆಫ್‌ ಕಂಟ್ರೋಲ್‌) ಚೀನಾದ ಆಕ್ರಮಣದ ಬಗ್ಗೆ ಭಾರತ ಗಂಭೀರ ಎಚ್ಚರಿಕೆ ನೀಡಿದ ಮರುದಿನವೇ ಚೀನಾ ತನ್ನ ವಿದೇಶಾಂಗ ಸಚಿವರ ಭಾರತ ಭೇಟಿ ಬಗ್ಗೆ ಹೇಳಿಕೊಂಡಿದೆ.

ಜಿ-20 ಸಭೆಯ ನಡುವೆಯೇ ಚೀನಾ ವಿದೇಶಾಂಗ ಸಚಿವರ ಜೊತೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯೂ ಇರುವುದರಿಂದ, ಕ್ವಿನ್‌ ಗಾಂಗ್‌ ಅವರ ಭಾರತ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಭಾರತದ ಗಡಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೈಶಂಕರ್‌ ಚೀನಾಕ್ಕೆ ತಕ್ಕ ಎಚ್ಚರಿಕೆ ನೀಡುವ ಸಂಭವವೂ ಇದೆ ಎಂದು ಹೇಳಲಾಗಿದೆ.

2019 ರಲ್ಲಿ ಚೀನಾದ ಈ ಹಿಂದಿನ ವಿದೇಶಾಂಗ ಸಚಿವ ವಾಂಗ್‌ ಯಿ ಅವರ ನವದೆಹಲಿ ಭೇಟಿಯೇ ಚೀನೀ ವಿದೇಶಾಂಗ ಸಚಿವರೊಬ್ಬರ ಕೊನೆಯ ಭಾರತ ಭೇಟಿಯಾಗಿತ್ತು.

2020ರ ಮೇನಲ್ಲಿ ಲಡಾಖ್‌ನಲ್ಲಿ ನಡೆದಿದ್ದ ಸೇನಾ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಸಂಬಂಧ ಹುಳಿ ಹಿಂಡಿದಂತಿತ್ತು. ಈ ಪ್ರಕರಣ ತಿಳಿಗೊಳಿಸಲು ಭಾರತ ಮತ್ತು ಚೀನಾ ನಡುವೆ 17 ಬಾರಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು ಎನ್ನುವುದು ಗಮನಾರ್ಹ.

ಇದನ್ನೂ ಓದಿ:ಚಂದ್ರಯಾನ-3 ರ ಪ್ರಮುಖ ಕ್ರಯೋಜನಿಕ್‌ ಇಂಜಿನ್‌ ಪರೀಕ್ಷೆ ಸಫಲ : ಇಸ್ರೋ

ಟಾಪ್ ನ್ಯೂಸ್

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Belthangady ಆಟೋ ರಿಕ್ಷಾ ಪಲ್ಟಿ: ಮಗು ಗಂಭೀರ

Belthangady ಆಟೋ ರಿಕ್ಷಾ ಪಲ್ಟಿ: ಮಗು ಗಂಭೀರ

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

COWSindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು

Sindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ajith sharad pawar

Politics: ಬಾರಾಮತಿಯಲ್ಲಿ ಪವಾರ್‌ V/s ಪವಾರ್‌

UMA BHARATHI

Uma Bharati: ಫೈರ್‌ಬ್ರ್ಯಾಂಡ್‌ ಬ್ಯಾಕ್‌ಫೈರ್‌?

bjp -aidmk

BJP-AIADMK: ಬ್ರೇಕಪ್‌ಗೆ ಅವಮಾನ ಕಾರಣ!

supreme court

Supreme Court: ವಿಳಂಬ ಧೋರಣೆಗೆ ಸುಪ್ರೀಂ ಆಕ್ಷೇಪ

modi speech

ಹೊಸ ಎತ್ತರಕ್ಕೆ ಭಾರತದ ರಾಜತಾಂತ್ರಿಕತೆ: G-20 ಯುನಿವರ್ಸಿಟಿ ಕನೆಕ್ಟ್‌ನಲ್ಲಿ ಪ್ರಧಾನಿ ಮೋದಿ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

hdk

Congress: ಕಾಂಗ್ರೆಸ್‌ ಪಕ್ಷ ಡಿಎಂಕೆಯ ಬಿ ಟೀಮ್‌: ಎಚ್‌ಡಿಕೆ

kBadiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

Badiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

lok adalat

Karnataka: “ಗ್ಯಾರಂಟಿ” ಮೇಲೆ ಸಿಎಂ, ಡಿಸಿಎಂ, ಸಚಿವರ ಫೋಟೋ ಬೇಡ ಎಂದ ಅರ್ಜಿ ವಜಾ

m b patil

Investment: ಹೂಡಿಕೆ ಅರಸಿ ಅಮೆರಿಕಕ್ಕೆ ತೆರಳಿದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.